ಆ್ಯಪ್ನಗರ

ಮಹಾ ಸಂಪರ್ಕಕ್ಕೆ ಕಡಣಿ ಬ್ರಿಡ್ಜ್‌

ಸಿಂದಗಿ : ತಾಲೂಕಿನ ಕಡಣಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಎತ್ತರ ಹೆಚ್ಚಿಸಿ ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 30 ಕೋಟಿ ಅನುದಾನ ಹಂಚಿಕೆಯಾಗಿದ್ದು , ಈ ಭಾಗದ ರೈತರಿಗೆ ಹಾಗೂ ವ್ಯಾಪಾರಕ್ಕಾಗಿ ನಿತ್ಯವೂ ಸುತ್ತುವರೆದು ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದ ವರ್ತಕರಿಗೆ ಸಂತಸ ಮೂಡಿಸಿದೆ.

Vijaya Karnataka 9 Feb 2019, 5:00 am
ಸಿಂದಗಿ : ತಾಲೂಕಿನ ಕಡಣಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಎತ್ತರ ಹೆಚ್ಚಿಸಿ ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 30 ಕೋಟಿ ಅನುದಾನ ಹಂಚಿಕೆಯಾಗಿದ್ದು , ಈ ಭಾಗದ ರೈತರಿಗೆ ಹಾಗೂ ವ್ಯಾಪಾರಕ್ಕಾಗಿ ನಿತ್ಯವೂ ಸುತ್ತುವರೆದು ಮಹಾರಾಷ್ಟ್ರಕ್ಕೆ ಭೇಟಿ ನೀಡುತ್ತಿದ್ದ ವರ್ತಕರಿಗೆ ಸಂತಸ ಮೂಡಿಸಿದೆ.
Vijaya Karnataka Web gate bridge for a great connection
ಮಹಾ ಸಂಪರ್ಕಕ್ಕೆ ಕಡಣಿ ಬ್ರಿಡ್ಜ್‌


ಎಂ.ಸಿ.ಮನಗೂಳಿ ತಾವು ತೋಟಗಾರಿಕಾ ಸಚಿವರಾದ ನಂತರ ಈ ಭಾಗದ ಜನರ ಹಾಗು ರೈತರ ಬೇಡಿಕೆಯಾಗಿ ಮೊದಲ ಅನುದಾನ ಕೇಳಿದ್ದು ತಾಲೂಕಿನ ಆಲಮೇಲ ಹೋಬಳಿಯ ಕಡಣಿ ಬ್ರಿಡ್ಜ್‌ ಕಂ ಬ್ಯಾರೇಜ್‌ನ ಎತ್ತರ ಹೆಚ್ಚಿಸುವುದು. ಆ ಮೂಲಕ ಸಮರ್ಪಕ ಸಂಚಾರ, ಎರಡೂ ರಾಜ್ಯಗಳ ವ್ಯಾಪಾರ ವಹಿವಾಟು, ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸಲು ಸರಕಾರಕ್ಕೆ ಮನವಿ ಮಾಡಿದ್ದರು.

1975ರಲ್ಲಿ ಭೂಸೇನಾ ನಿಗಮದಿಂದ ನಿರ್ಮಾಣಗೊಂಡ ಈ ಕಡಣಿ ಬ್ರಿಡ್ಜ್‌ ಕಂ ಬ್ಯಾರೇಜ್‌ 1996-97ರಲ್ಲಿ ಚಿಕ್ಕನೀರಾವರಿ ಇಲಾಖೆಯಿಂದ ಬೃಹತ್‌ ನೀರಾವರಿ ಇಲಾಖೆಗೆ ಹಸ್ತಾಂತರಗೊಂಡಿತ್ತು. ನಂತರ ಅಫ್ಜಲ್‌ಪೂರ ತಾಲೂಕಿನ ಸೊನ್ನ ಏತ ನೀರಾವರಿ ಯೋಜನೆಯಿಂದಾಗಿ ಮುಳುಗಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಜತೆಗೆ ಅಫ್ಜಲ್‌ಪುರ ತಾಲೂಕಿನಿಂದ ಆಲಮೇಲ ಪಟ್ಟಣಕ್ಕೆ ವರ್ತಕರು, ಕೆಪಿಆರ್‌ ಶುಗರ್ಸ್‌ಗೆ ರೈತರು ಬರಬೇಕಾದರೆ ಅಂದಾಜು 50 ಕಿಮೀ ಸುತ್ತುವರೆದು ಪಟ್ಟಣ ಸೇರಬೇಕಿತ್ತು.

ಈಗ ಸಿಎಂ ಕುಮಾರಸ್ವಾಮಿ ಬಜೆಟ್‌ನಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಎತ್ತರ ಹೆಚ್ಚಿಸಲು ಅನುದಾನ ಮೀಸಲಿರಿಸಿರುವ ಮೂಲಕ ಸಚಿವ ಮನಗೂಳಿ ಬೇಡಿಕೆಗೆ ಸ್ಪಂದಿಸುವುದರ ಜತೆಗೆ ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಬೆಸೆಯುವಲ್ಲಿ ಸಹಕಾರಿಯಾಗಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ