ಆ್ಯಪ್ನಗರ

ಕ್ರಿಕೆಟ್‌ ದಿಗ್ಗಜರ ಸವಾಲಿಗೆ ಬಾಲಕ ಜವಾಬ್‌ !

ಲಾಕ್‌‍ಡೌನ್‌‍ದಲ್ಲಿಕ್ರಿಕೆಟಿಗ ಯುವರಾಜ್‌ ಸಿಂಗ್‌ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್‌ ಎಡ್ಜ್‌ ಮೂಲಕ ಚೆಂಡನ್ನು ಬಾರಿಸಿ ಗಮನಸೆಳೆದಿದ್ದಲ್ಲದೇ, ಮಾಡಿ ತೋರಿಸುವಂತೆ ಇತರೆ ಕ್ರಿಕೆಟಿಗರಿಗೆ ಸವಾಲು ಹಾಕಿದ್ದರು. ಇದನ್ನು ವೀಕ್ಷಿಸಿದ್ದ ವಿಜಯಪುರದ 10 ವರ್ಷದ ಬಾಲಕ ಸವಾಲನ್ನು ಸ್ವೀಕರಿಸಿ ಅವರಂತೆಯೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಬ್ಯಾಟ್‌ ಎಡ್ಜ್‌ನಿಂದ 180 ಬಾರಿ ನಿರಂತರವಾಗಿ ಚೆಂಡು ಪುಟಿಸಿ ಗಮನಸೆಳೆದಿದ್ದಾನೆ.

Vijaya Karnataka Web 1 Jun 2020, 7:44 pm
ವಿಜಯಪುರ: ಲಾಕ್‌‍ಡೌನ್‌‍ದಲ್ಲಿಕ್ರಿಕೆಟಿಗ ಯುವರಾಜ್‌ ಸಿಂಗ್‌ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್‌ ಎಡ್ಜ್‌ ಮೂಲಕ ಚೆಂಡನ್ನು ಬಾರಿಸಿ ಗಮನಸೆಳೆದಿದ್ದಲ್ಲದೇ, ಮಾಡಿ ತೋರಿಸುವಂತೆ ಇತರೆ ಕ್ರಿಕೆಟಿಗರಿಗೆ ಸವಾಲು ಹಾಕಿದ್ದರು. ಇದನ್ನು ವೀಕ್ಷಿಸಿದ್ದ ವಿಜಯಪುರದ 10 ವರ್ಷದ ಬಾಲಕ ಸವಾಲನ್ನು ಸ್ವೀಕರಿಸಿ ಅವರಂತೆಯೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಬ್ಯಾಟ್‌ ಎಡ್ಜ್‌ನಿಂದ 180 ಬಾರಿ ನಿರಂತರವಾಗಿ ಚೆಂಡು ಪುಟಿಸಿ ಗಮನಸೆಳೆದಿದ್ದಾನೆ.
Vijaya Karnataka Web PUKALE-BJP31_38


ಇಲ್ಲಿನ ಜಲನಗರದ ಬಾಲಕ ವಿಷ್ಣುವರ್ಧನ ಪುಕಾಳೆ ಈ ಸಾಧನೆ ಮಾಡಿದವ. ಕೀರ್ತಿನಗರದಲ್ಲಿರುವ ಸಿಕ್ಯಾಬ್‌ ಶಾಲೆಯಲ್ಲಿ6ನೇ ವರ್ಗದಲ್ಲಿಓದುತ್ತಿದ್ದಾನೆ.

ಲಾಕ್‌‍ಡೌನ್‌ ವೇಳೆ ಯುವರಾಜ್‌ಸಿಂಗ್‌ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತನ್ನಂತೆಯೇ ಬ್ಯಾಟ್‌ ಎಡ್ಜ್‌ನಿಂದ 25 ಬಾರಿ ಬಾಲ್‌ ಪುಟಿಸುವಂತೆ ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ ಹಾಗೂ ಹರಭಜನ್‌ ಸಿಂಗ್‌ ಅವರಿಗೆ ಸವಾಲು ಹಾಕಿದ್ದರು. ಯುವರಾಜ್‌ ಸವಾಲು ಸ್ವೀಕರಿಸಿದ್ದ ಸಚಿನ್‌, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್‌ ಎಡ್ಜ್‌ನಿಂದ ಚೆಂಡು ಪುಟಿಸುವ ಮೂಲಕ ಯುವರಾಜ್‌ ಸಿಂಗ್‌‍ಗೆ ತೆಂಡೂಲ್ಕರ್‌ ಮರು ಸವಾಲು ಹಾಕಿದ್ದರು. ಇವರಿಬ್ಬರ ಮಧ್ಯೆ ನಡೆದ ಸವಾಲು, ಪ್ರತಿ ಸವಾಲುಗಳುಳ್ಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿವೈರಲ್‌ ಆಗಿತ್ತು. ಸಚಿನ್‌ ತೆಂಡೂಲ್ಕರ್‌ ಹಾಕಿದ್ದ ಸವಾಲನ್ನು ಸ್ವೀಕರಿಸಿದ ಬಾಲಕ ವಿಷ್ಣುವರ್ಧನ ಪುಕಾಳೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್‌ ಎಡ್ಜ್‌ನಿಂದ 180 ಬಾರಿ ನಿರಂತರವಾಗಿ ಚೆಂಡು ಪುಟಿಸುವ ಮೂಲಕ ಗಮನಸೆಳೆದಿದ್ದಾನೆ.

ಈ ಸಾಧನೆಯೊಂದಿಗೆ ಬಾಲಕ ವಿಷ್ಣುವರ್ಧನ ಪುಕಾಳೆ ಸಾಧನೆಯೂ ಕ್ರಿಕೆಟ್‌ ದಿಗ್ಗರಜರ ವಿಡಿಯೋದೊಂದಿಗೆ ಈತನ ವಿಡಿಯೊ ಕೂಡ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿವೈರಲ್‌ ಆಗಿದ್ದು ವಿಶೇಷ. ಬಾಲಕನ ಸಾಧನೆಗೆ ಗುಮ್ಮಟನಗರಿಯ ಕ್ರೀಡಾಪ್ರೇಮಿಗಳು ಹ್ಯಾಟ್ಸ್‌ಆಪ್‌ ಹೇಳಿದ್ದಾರೆ.

ಬೆಳೆವ ಸಿರಿ ಮೊಳಕೆಯಲ್ಲಿನೋಡು ಎಂಬಂತೆ ವಿಷ್ಣುವರ್ಧನ ಪುಕಾಳೆ ಮುಂದೊಂದು ದಿನ ಉತ್ತಮ ಸಾಧನೆ ಮಾಡಲಿದ್ದಾನೆ. ಅಂಥ ತಾಕತ್ತು ಆತನಲ್ಲಿದೆ.
- ಸಲಿಂ ತಾಜಿಮ್‌‍ತರಕ್‌, ಕ್ರಿಕೆಟ್‌ ಕೋಚ್‌, ವಿಜಯಪುರ.


ಮಗನಿಗೆ ಬಾಲ್ಯಾವಸ್ಥೆಯಲ್ಲೇ ಕ್ರಿಕೆಟ್‌ ಬಗ್ಗೆ ತೀವ್ರ ಆಸಕ್ತಿಯಿದೆ. ಮುಂದೊಂದು ದಿನ ಆತ ಭಾರತ ಕ್ರಿಕೆಟ್‌ ತಂಡದಲ್ಲಿಆಡುತ್ತಾನೆ ಎಂಬ ವಿಶ್ವಾಸವಿದೆ. ಈಗಲೇ ಆತನಿಗೆ ಆ ನಿಟ್ಟಿನಲ್ಲಿತರಬೇತಿ ನೀಡುತ್ತಿದ್ದೇನೆ.
-ಸುರೇಶ ಪುಕಾಳೆ, ಬಾಲಕನ ತಂದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ