ಆ್ಯಪ್ನಗರ

ಖಾಲಿ ಪ್ಲಾಸ್ಟಿಕ್‌ ಬಾಟಲ್‌ ಕೊಡಿ, ಚಹಾ ಕುಡಿ

ವಿಜಯಪುರ: ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನ ನಿಮಿತ್ತ ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನದ ನಿಮಿತ್ತ ಪ್ಲಾಸ್ಟಿಕ್‌ ನೀಡಿ ಒಂದು ಸಕ್ಕರೆ ಪಡೆಯಿರಿ ಕಾರ್ಯಕ್ರಮದ ಬೆನ್ನಲ್ಲೇ ಗುಮ್ಮಟನರಿಯಲ್ಲೀಗ ಬಳಸಿದ ನೀರಿನ ಪ್ಲಾಸ್ಟಿಕ್‌ ಬಾಟಲ್‌ ನೀಡಿ ಚಹಾ ಕುಡಿಯಿರಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Vijaya Karnataka 9 Oct 2019, 5:00 am
ವಿಜಯಪುರ: ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನ ನಿಮಿತ್ತ ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನದ ನಿಮಿತ್ತ ಪ್ಲಾಸ್ಟಿಕ್‌ ನೀಡಿ ಒಂದು ಸಕ್ಕರೆ ಪಡೆಯಿರಿ ಕಾರ್ಯಕ್ರಮದ ಬೆನ್ನಲ್ಲೇ ಗುಮ್ಮಟನರಿಯಲ್ಲೀಗ ಬಳಸಿದ ನೀರಿನ ಪ್ಲಾಸ್ಟಿಕ್‌ ಬಾಟಲ್‌ ನೀಡಿ ಚಹಾ ಕುಡಿಯಿರಿ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Vijaya Karnataka Web give an empty plastic bottle and drink tea
ಖಾಲಿ ಪ್ಲಾಸ್ಟಿಕ್‌ ಬಾಟಲ್‌ ಕೊಡಿ, ಚಹಾ ಕುಡಿ


ಪ್ರಧಾನಿ ನರೇಂದ್ರ ಮೋದಿ ಅವರು ಪ್ಲಾಸ್ಟಿಕ್‌ ಮುಕ್ತ ಭಾರತಕ್ಕೆ ಕರೆ ನೀಡಿದ್ದರ ಬೆನ್ನಲ್ಲೆಜಿಲ್ಲೆಯಲ್ಲೂಪ್ಲಾಸ್ಟಿಕ್‌ ಬಳಕೆ, ಮಾರಾಟಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಮಹಾನಗರ ಪಾಲಿಕೆ ಕೂಡ ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಕೈಜೋಡಿಸಿದೆ.

ಕೆಲ ದಿನಗಳಿಂದ ಪ್ಲಾಸ್ಟಿಕ್‌ ಮಾರಾಟ, ಬಳಕೆ ಮಾಡದಂತೆ ಜಾಗೃತಿ ಮೂಡಿಸಿದ ಪಾಲಿಕೆ, ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡದಂತೆ ಹೋಲ್‌ಸೇಲ್‌, ರೀಟೆಲ್‌ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಜಪ್ತಿ ಮಾಡಿತ್ತು. ಇದೀಗ ಕುಡಿದು ಬಿಸಾಕಿ ನೀರಿನ ಖಾಲಿ ಬಾಟಲ್‌ಗಳ ಸಂಗ್ರಹಕ್ಕೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಉಪಯೋಗಿಸಿದ ನೀರಿನ ಪ್ಲಾಸ್ಟಿಕ್‌ ಬಾಟಲ್‌ ನೀಡಿ ಚಹಾ ಕುಡಿಯಿರಿ ಅಭಿಯಾನವನ್ನು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಕೈಗೊಂಡಿದ್ದು , ಸಾರ್ವಜನಿಕರು ನೀರಿನ ಖಾಲಿ ಬಾಟೆಲ್‌ ತಂದುಕೊಟ್ಟರೆ ಅವರಿಗೆ ಉಚಿತವಾಗಿ ಚಹಾ ನೀಡುವ ಮೂಲಕ ಪ್ಲಾಸ್ಟಿಕ್‌ ಮುಕ್ತ ವಿಜಯಪುರಕ್ಕೆ ಮುಂದಾಗಿವೆ.

ಇತ್ತೀಚಿನ ದಿನಗಳಲ್ಲಿಪ್ಯಾಕಡ್‌ ಬಾಟಲಿಗಳಲ್ಲಿಕುಡಿವ ನೀರಿನ ಬಳಕೆ ಯಥೇಚ್ಛವಾಗಿದೆ. ಸಾರ್ವಜನಿಕರು ನೀರು ಕುಡಿದು ಖಾಲಿ ಬಾಟಲ್‌ಗಳನ್ನು ಎಲ್ಲೆಂದರಲ್ಲಿಎಸೆಯುವುದು ಸಾಮಾನ್ಯವಾಗಿದೆ. ಇದರಿಂದ ಪರಿಸರಕ್ಕೂ ಮಾರಕವಾಗಿದೆ. ಪ್ಲಾಸ್ಟಿಕ್‌ ನಿಷೇಧಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆದೇಶ ಹೊರಡಿಸಿದ್ದರ ಹಿನ್ನೆಲೆಯಲ್ಲಿಉಪಯೋಗಿಸಿ ಪ್ಲಾಸ್ಟಿಕ್‌ ಬಾಟಲ್‌ ಸಂಗ್ರಹಿಸಿ ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನವನ್ನು ನಗರದಲ್ಲಿಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮಕ್ಕೆ ಅವಧಿ ನಿಗದಿಪಡಿಸಿಲ್ಲ, ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಉಚಿತ ಚಹಾ ನೀಡುವ ಕಾರ್ಯಕ್ರಮ ಮುಂದುವರಿಯುತ್ತದೆ ಎಂದರು.

-------

ಎಲ್ಲೆಲ್ಲಿಉಚಿತ ಚಹಾ

ವಿಜಯಪುರ ನಗರದಲ್ಲಿರುವ 4 ಇಂದಿರಾ ಗಾಂಧಿ ಕ್ಯಾಂಟೀನ್‌ಗಳಲ್ಲಿ ಖಾಲಿ ನೀರಿನ ಬಾಟಲ್‌ ಸಂಗ್ರಹಿಸಿ ಅದಕ್ಕೆ ಪರ್ಯಾಯವಾಗಿ ಉಚಿತವಾಗಿ ಚಹಾ ನೀಡುವ ಕಾರ್ಯಕ್ರಮ ಇದಾಗಿದೆ.

ಅ.2ರಿಂದ ವಿನೂತನ ಕಾರ್ಯಕ್ರಮ ಜಾರಿಯಲ್ಲಿದ್ದು, ಸಾರ್ವಜನಿಕರು 1/2ಲೀ.ನ ಉಪಯೋಗಿಸಿದ 6 ವಾಟರ್‌ ಬಾಟೆಲ್‌, 1 ಲೀ.ನ 3 ವಾಟರ್‌ ಬಾಟೆಲ್‌ ಹಾಗೂ 2 ಲೀ.ನ 2 ಖಾಲಿ ವಾಟರ್‌ ಬಾಟಲ್‌ಗಳನ್ನು ಇಂದಿರಾ ಕ್ಯಾಂಟೀನ್‌ಗೆ ತಂದುಕೊಟ್ಟರೆ 1 ಕಪ್‌ ಉಚಿತವಾಗಿ ಚಹಾ ನೀಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಹರ್ಷಶೆಟ್ಟಿ ತಿಳಿಸಿದರು.

ಆಫಿಸರ್ಸ್ ಕ್ಲಬ್‌ನಿಂದ ಅಗತ್ಯ ಸೌಲಭ್ಯ

ಸುಮ್ಮನೆ ಪ್ಲಾಸ್ಟಿಕ್‌ ಬಾಟಲ್‌ ತಂದುಕೊಡಿ ಎಂದರೆ ಸಾರ್ವಜನಿಕರು ಆಸಕ್ತಿ ತೋರಲ್ಲ. ಹೀಗಾಗಿ ಉಚಿತ ಚಹಾ ನೀಡಿ ಪ್ಲಾಸ್ಟಿಕ್‌ ಬಾಟಲ್‌ ಸಂಗ್ರಹಿಸಲು ನಿರ್ಧರಿಸಲಾಯಿತು. ನಗರದಲ್ಲಿ4 ಕಡೆ ಇಂದಿರಾ ಕ್ಯಾಂಟೀನ್‌ಗಳಿದ್ದು, ಅಲ್ಲಿಗೆ ಜನತೆ ಬಳಸಿದ ನೀರಿನ ಖಾಲಿ ಬಾಟಲಿ ತಂದುಕೊಟ್ಟು ಚಹಾ ಪಡೆಯಬಹುದು. ಈ ಕಾರ್ಯಕ್ರಮಕ್ಕೆ ಅಪಾರ ಹಣ ಖರ್ಚಾಗಲ್ಲ. ಆರಂಭಿಕವಾಗಿ ಆಫಿಸರ್ಸ್ ಕ್ಲಬ್‌ನಿಂದ ಚಹಾಕ್ಕೆ ಅಗತ್ಯ ಹಾಲು, ಸಕ್ಕರೆ, ಚಹಾಪುಡಿ, ಪೇಪರ್‌ ಗ್ಲಾಸ್‌ ಕೊಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌ವರು ಚಹಾ ತಯಾರಿಸಿ ನೀರಿನ ಖಾಲಿ ಪ್ಲಾಸ್ಟಿಕ್‌ ಬಾಟಲಿ ನೀಡಿದವರಿಗೆ ಕೊಡುತ್ತಾರೆ ಎಂದು ಹರ್ಷಶೆಟ್ಟಿ ವಿವರಿಸಿದರು.

14 ಟನ್‌ ವಶ

ಪ್ಲಾಸ್ಟಿಕ್‌ ನಿಷೇಧದ ಹಿನ್ನೆಲೆಯಲ್ಲಿನಗರದಲ್ಲಿ ಪ್ಲಾಸ್ಟಿಕ್‌ ಮಾರಾಟದ ಅಂಗಡಿಗಳ ಮೇಲೆ ಸೆ.28ರಿಂದ ಇದುವರೆಗೆ ದಾಳಿ ನಡೆಸಿ, 14 ಟನ್‌ ಪ್ಲಾಸ್ಟಿಕ್‌ ಜಪ್ತಿ ಮಾಡಲಾಗಿದೆ. ಅದನ್ನು ಒಪ್ಪಂದದಂತೆ ಜಮಖಂಡಿಯ ಜೆಕೆ ಸಿಮೆಂಟ್‌ ಕಾರ್ಖಾನೆಯವರು ಉಚಿತವಾಗಿ ತೆಗೆದುಕೊಂಡು ಹೋಗಿದ್ದಾರೆ. ಪ್ಲಾಸ್ಟಿಕ್‌ ಬಾಟಲ್‌ಗಳನ್ನೂ ಸಿಮೆಂಟ್‌ ಕಾರ್ಖಾನೆಯವರೇ ಒಯ್ಯಲಿದ್ದಾರೆ ಎಂದು ತಿಳಿಸಿದರು.

--------

ನೀರು ಕುಡಿದ ನಂತರ ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಪರಿಸರಕ್ಕೆ ಹಾನಿಕಾರಕ. ಇದಕ್ಕೆ ಬ್ರೇಕ್‌ ಹಾಕಲು ಜಿಲ್ಲಾಡಳಿತ ಹಾಗೂ ಪಾಲಿಕೆಯಿಂದ ಬಳಸಿದ ನೀರಿನ ಖಾಲಿ ಬಾಟಲಿ ತಂದುಕೊಟ್ಟರೆ ಅದಕ್ಕೆ ಪರ್ಯಾಯವಾಗಿ ಉಚಿತ ಚಹಾ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಹರ್ಷಶೆಟ್ಟಿ , ಪಾಲಿಕೆ ಆಯುಕ್ತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ