ಆ್ಯಪ್ನಗರ

ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ

ವಿದ್ಯಾರ್ಥಿಗಳು ಸತತ ಪ್ರಯತ್ನ, ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯ. ಸಾಧನೆಗೆ ಪಾಲಕರ ಸಹಕಾರ, ಗುರುಗಳ ಮಾರ್ಗದರ್ಶನ ಅತ್ಯವಶ್ಯ ಎಂದು ಡಿಡಿಪಿಯು ಜೆ.ಎಸ್‌.ಪೂಜೇರಿ ಹೇಳಿದರು.

Vijaya Karnataka 5 Aug 2019, 5:00 am
ವಿಜಯಪುರ : ವಿದ್ಯಾರ್ಥಿಗಳು ಸತತ ಪ್ರಯತ್ನ, ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಸಾಧ್ಯ. ಸಾಧನೆಗೆ ಪಾಲಕರ ಸಹಕಾರ, ಗುರುಗಳ ಮಾರ್ಗದರ್ಶನ ಅತ್ಯವಶ್ಯ ಎಂದು ಡಿಡಿಪಿಯು ಜೆ.ಎಸ್‌.ಪೂಜೇರಿ ಹೇಳಿದರು.
Vijaya Karnataka Web good result with perseverance
ಸತತ ಪರಿಶ್ರಮದಿಂದ ಉತ್ತಮ ಫಲಿತಾಂಶ


ಕನ್ನೂರಿನ ಸರಕಾರಿ ಪಿಯು ಕಾಲೇಜ್‌ನಲ್ಲಿ ನಡೆದ 2019-20ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಜಲಶಕ್ತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಿಕ್ಷ ಣ ದೊರೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಳ್ಳಲು ಟಿವಿ, ಚಲನಚಿತ್ರ ವೀಕ್ಷ ಣೆ, ಅಲಸ್ಯತನದಿಂದ ದೂರವಿದ್ದು, ಉತ್ತಮ ಚಟುವಟಿಕೆಗಳಲ್ಲಿ ಭಾಗವಹಿಸಿ, ಶಿಕ್ಷ ಕರ ಮಾರ್ಗದರ್ಶನದೊಂದಿಗೆ ಉತ್ತಮ ಫಲಿತಾಂಶ ಪಡೆದುಕೊಳ್ಳಲು ಅವಿರತ ಶ್ರಮ ಪಡಬೇಕು ಎಂದರು.

ಶಿಕ್ಷ ಕ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಂಡಿರಬೇಕು. ಯುವಕರ ಶಕ್ತಿಯಿಂದ ನಮ್ಮ ದೇಶ ರಕ್ಷ ಣೆಯಾಗುತ್ತದೆ. ನಮ್ಮ ನೆಲ, ಜಲ ರಕ್ಷಿಸುವ ಎಲ್ಲರ ಜವಾಬ್ದಾರಿಯಾಗಿದೆ. ಮೊದಲು ಯುದ್ದಗಳು ಭೂಮಿಗಾಗಿ ನಡೆಯುತ್ತಿದ್ದವು. ಈಗ ಜಲಕ್ಕಾಗಿ ಯುದ್ದಗಳು ಆರಂಭವಾಗಿವೆ. ಹೀಗಾಗಿ ಜಲ ರಕ್ಷ ಣೆ ಕುರಿತು ಜಲ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರು ಒಂದೊಂದು ಗಿಡಗಳನ್ನು ತಮ್ಮ ಮನೆಯ ಅಂಗಳದಲ್ಲಿ ನೆಟ್ಟು ಪರಿಸರ ರಕ್ಷ ಣೆಗೆ ಮುಂದಾಗಬೇಕು ಎಂದರು.

ಸಂಸ್ಥೆಯ ಪ್ರಾಚಾರ್ಯ ಸುರೇಶ ನಾರಾಯಣಕರ, ಶಿಕ್ಷ ಕ ಆರ್‌.ಜೆ.ರಾಠೋಡ, ರಾಜಶ್ರೀ ಚನ್ನಪ್ಪ, ಸಬಿನಾ ಮದಭಾವಿ, ಉಪನ್ಯಾಸಕ ಬಿ.ಎಸ್‌.ಅಂದೇವಾಡಿ, ಆರ್‌.ಎಂ.ಜೋಶಿ, ವಿ.ಎಚ್‌.ಎಂಕಿ, ಎ.ಜಿ.ಪಾಟೀಲ, ಗ್ರಾಪಂ ಅಧ್ಯಕ್ಷ ಹಾಜೀಮಲಿಕ ಬಾಲೇಬಾಯಿ, ಶ್ರೀನಿವಾಸ ಬಂಡಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ