ಆ್ಯಪ್ನಗರ

ಸರಕಾರ ಪತನ ನಿಶ್ಚಿತ : ಯತ್ನಾಳ ಭವಿಷ್ಯ

ವಿಜಯಪುರ: ಟಿಪ್ಪು ಸುಲ್ತಾಣ್‌ ಜಯಂತಿ ಆಚರಣೆ ವಿಚಾರದಲ್ಲಿ ಮೊಂಡುತನ ಮುಂದುವರಿಸಿರುವ ಮೈತ್ರಿ ಸರಕಾರ ಪತನವಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.

Vijaya Karnataka 6 Nov 2018, 5:00 am
ವಿಜಯಪುರ: ಟಿಪ್ಪು ಸುಲ್ತಾಣ್‌ ಜಯಂತಿ ಆಚರಣೆ ವಿಚಾರದಲ್ಲಿ ಮೊಂಡುತನ ಮುಂದುವರಿಸಿರುವ ಮೈತ್ರಿ ಸರಕಾರ ಪತನವಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
Vijaya Karnataka Web government decline yatnal prospects
ಸರಕಾರ ಪತನ ನಿಶ್ಚಿತ : ಯತ್ನಾಳ ಭವಿಷ್ಯ


ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಟಿಪ್ಪು ಸುಲ್ತಾನ್‌ ಪಾತ್ರ ಎಳ್ಳಷ್ಟೂ ಇಲ್ಲ. ಆದರೂ ಆತನ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವುದು ಎಷ್ಟು ಸೂಕ್ತ? ಟಿಪ್ಪು ಸುಲ್ತಾನ್‌ ಒಬ್ಬ ಮತಾಂಧ ಹಾಗೂ ಲಕ್ಷಾಂತರ ಹಿಂದೂಗಳನ್ನು ಕೊಲೆ ಮಾಡಿದ ರಾಜ. ಅಂತಹ ರಾಜನ ಜಯಂತಿ ಆಚರಿಸಲು ಸರಕಾರ ಮುಂದಾಗಿರುವುದು ಖಂಡನೀಯ ಎಂದರು.

ಟಿಪ್ಪು ಸುಲ್ತಾನ್‌ ಜಯಂತಿ ವಿಚಾರದಲ್ಲಿ ನನ್ನ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ.

ವಿಜಯಪುರ ಜಿಲ್ಲಾಡಳಿತ ಆಯೋಜಿಸುವ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ, ಸಮಾರಂಭಕ್ಕೆ ನನ್ನನ್ನು ಕರೆಯಬೇಡಿ ಎಂದು ವಾರದ ಮುಂಚೆಯೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಆದರಿನ್ನೂ ಜಿಲ್ಲಾಧಿಕಾರಿಗಳ ಉತ್ತರ ಬಂದಿಲ್ಲ ಎಂದು ಯತ್ನಾಳ ತಿಳಿಸಿದರು.

ರಾಮನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಜೆಡಿಎಸ್‌ನವರು ಬಿಜೆಪಿ ಅಭ್ಯರ್ಥಿಯನ್ನು ಖರೀದಿಸಿದ್ದಾರೆ. ನಮ್ಮ ಪಕ್ಷದ ಮುಖಂಡರು ತಳಮಟ್ಟದಿಂದ ಪಕ್ಷಕ್ಕೆ ದುಡಿದ ಸ್ಥಳೀಯ ಕಾರ್ಯಕರ್ತರನ್ನು ಗುರ್ತಿಸಿ ಟಿಕೆಟ್‌ ನೀಡಿದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದೂ ಯತ್ನಾಳ ತಿಳಿಸಿದರು.

ಭಾನುವಾರವೂ ಮುದ್ದೇಬಿಹಾಳದಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯಲ್ಲೂ ಕೂಡ ಯತ್ನಾಳ ಬುದ್ದಿ ಜೀವಿಗಳ ಮತ್ತೆ ವಿರುದ್ಧ ಹರಿಹಾಯ್ದಿದ್ದಾರೆ.

ಯೋಧರ ಮೇಲೆ ಹತ್ಯೆ ನಡೆದಾಗ ಈ ಬುದ್ದಿ ಜೀವಿಗಳು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಎಲ್ಲಿ ಹೋಗಿವೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಯತ್ನಾಳ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ