ಆ್ಯಪ್ನಗರ

ರಾಹುಲ್ ಟೆಂಪಲ್ ರನ್‌ಗೆ ಪರೋಕ್ಷ ಟಾಂಗ್ ಕೊಟ್ಟ ಪಿಯೂಶ್ ಗೋಯಲ್

ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದರೆ, ಜನ ನಂಬುವುದಿಲ್ಲ ಎಂದು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್, ಕರ್ನಾಟಕದ ಜನರು ಜಾಣರಿದ್ದಾರೆ ಎಂದು ರಾಜ್ಯದ ಜನತೆಯನ್ನು ಬಣ್ಣಿಸಿದರು.

Vijaya Karnataka Web 11 Feb 2018, 1:30 pm
ವಿಜಯಪುರ: ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇವಸ್ಥಾನ, ಮಠಗಳಿಗೆ ಭೇಟಿ ನೀಡಿದರೆ, ಜನ ನಂಬುವುದಿಲ್ಲ ಎಂದು ಪರೋಕ್ಷವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್, ಕರ್ನಾಟಕದ ಜನರು ಜಾಣರಿದ್ದಾರೆ ಎಂದು ರಾಜ್ಯದ ಜನತೆಯನ್ನು ಬಣ್ಣಿಸಿದರು.
Vijaya Karnataka Web goyals indirect statement about rahul temple run
ರಾಹುಲ್ ಟೆಂಪಲ್ ರನ್‌ಗೆ ಪರೋಕ್ಷ ಟಾಂಗ್ ಕೊಟ್ಟ ಪಿಯೂಶ್ ಗೋಯಲ್


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಚುನಾವಣೆ ಸಮೀಪಿಸುತ್ತಿದ್ದಂತೆ ದೇವಸ್ಥಾನಗಳಿಗೆ ಭೇಟಿ ನೀಡುವವರನ್ನು ಜನ ನಂಬುವುದಿಲ್ಲ. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಕೆಲಸ ಮಾಡುವವರನ್ನು ಜನ ನಂಬುತ್ತಾರೆ' ಎಂದರು.

ಕೇಂದ್ರ ಸರಕಾರದ ವಿವಿಧ ಅಭಿವೃದ್ಧಿ ಕಾರ್ಯಗಳು ಬಡವರ ಮನೆ ತಲುಪಿವೆ. ರೈಲಿನಲ್ಲಿ ಆಧುನಿಕತೆಗೆ ಹೆಚ್ಚು‌ ಒತ್ತು ನೀಡಲಾಗುತ್ತಿದೆ. .
600 ರೈಲ್ವೆ ನಿಲ್ದಾಣಗಳಲ್ಲಿ ಗುರುತಿಸಿ ಅಲ್ಲಿ ಹೈಟೆಕ್ ತಂತ್ರಜ್ಞಾನ ಅಳವಡಿಸಲಾಗುವುದು. ಐತಿಹಾಸಿಕ ಸ್ಥಳಗಳನ್ನ ಗುರುತಿಸಿ ಅವುಗಳನ್ನ ಅಭಿವೃದ್ಧಿ ಮಾಡಲು ರೈಲು ಇಲಾಖೆ ಸಾಥ್ ನೀಡಲಿದೆ ಎಂದು ರೈಲ್ವೆ ಸಚಿವರು ತಿಳಿಸಿದರು.

ವಿಜಯಪುರ ರೈಲು ನಿಲ್ದಾಣ ಅಭಿವೃದ್ಧಿಗಾಗಿ ಬಿಜೆಪಿ ನಾಯಕರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರಿನಲ್ಲಿ 68 ಕಿ.ಮೀ. ಸಬ್ ಅರ್ಬನ್ ರೈಲು ಮಾಡಲಾಗುವುದು ಎಂದು ಹೇಳಿದರು.

ಮೇಲ್ಸೇತುವೆ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಬಾಗಲಕೋಟ-ಕುಡಚಿ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 31 ಕಿ.ಮೀಯ ಕಾಮಕಾರಿ ಪೂರ್ಣಗೊಂಡಿದೆ. ದೇಶದಲ್ಲಿ ವರ್ಷಗಳಿಂದ ರೈಲು ತಂತ್ರಜ್ಞಾನದಲ್ಲಿ ಬೆಳವಣಿಗೆಯಾಗಿಲ್ಲ. ದೇಶದ ಪ್ರಮುಖ ನಗರಗಳ ನಡುವೆ ಡಬಲ್ ಮಾರ್ಗ ನಿರ್ಮಾಣ ಮಾಡಲಾಗುವುದು.

ದಕ್ಷಿಣ ಭಾರತ ಹಾಗೂ ಉತ್ತರ ಭಾರತ ನಡುವೆ ನೇರ ಸಂಪರ್ಕ ರೈಲು ಮಾಡಲಾಗುವುದು ಎಂದು ಭರವಸೆ ನೀಡಿದರು.

ಜಮ್ಮ-ಕಾಶ್ಮೀರದಲ್ಲಿ ಉಗ್ರರ ಒಳ ನುಸುಳುವಿಕೆ ಅತ್ಯಂತ ಆತಂಕಕಾರಿ ಹಾಗೂ ದುಃಖದ ವಿಚಾರ. ಉಗ್ರರ ಹೇಯ ಕೃತ್ಯಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ