ಆ್ಯಪ್ನಗರ

ಒಂದೇ ದಿನ 29 ಸೋಂಕಿತರು ಗುಣಮುಖ

ಜಿಲ್ಲೆಯಲ್ಲಿಸೋಮವಾರ ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿಲ್ಲ. ಆದರೆ 29 ಸೋಂಕಿತರು ಗುಣಮುಖರಾಗಿ ಸೋಮವಾರ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Vijaya Karnataka Web 9 Jun 2020, 5:00 am
ವಿಜಯಪುರ : ಜಿಲ್ಲೆಯಲ್ಲಿಸೋಮವಾರ ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿಲ್ಲ. ಆದರೆ 29 ಸೋಂಕಿತರು ಗುಣಮುಖರಾಗಿ ಸೋಮವಾರ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Vijaya Karnataka Web healed 29 infected people in a single day
ಒಂದೇ ದಿನ 29 ಸೋಂಕಿತರು ಗುಣಮುಖ


ಕಳೆದ 3 ದಿನಗಳಿಂದ ಹೆಚ್ಚು ಪಾಸಿಟಿವ್‌ ಪ್ರಕರಣ ಗ್ರಾಮೀಣ ಪ್ರದೇಶದಲ್ಲಿಪತ್ತೆಯಾಗಿದ್ದರಿಂದ ಜಿಲ್ಲೆಯ ಜನತೆಯಲ್ಲಿಆತಂಕ ಎದುರಾಗಿತ್ತು. ಆದರೆ ಸೋಮವಾರ ಒಂದೂ ಪಾಸಿಟಿವ್‌ ಪ್ರಕರಣ ವರದಿಯಾಗದಿರುವುದಕ್ಕೆ ಜನತೆ ನಿಟ್ಟುಸಿರು ಬಿಟ್ಟಿದೆ.

29 ಮಂದಿ ಬಿಡುಗಡೆ
50 ವರ್ಷ (ಪಿ2206)ಪುರುಷ, 23 ವರ್ಷದ (ಪಿ2712)ಯುವಕ , 37 ವರ್ಷದ ಮಹಿಳೆ (ಪಿ2839), 38 ವರ್ಷ (ಪಿ2928), 30 ವರ್ಷದ (ಪಿ2929), 29 ವರ್ಷದ (ಪಿ3178), 50 ವರ್ಷದ (ಪಿ3152) ಪುರುಷರು, 24 ವರ್ಷದ ಯುವತಿ (ಪಿ4808), 4 ವರ್ಷದ ಬಾಲಕಿ (ಪಿ3181), 59 ವರ್ಷದ ಪುರುಷ (ಪಿ3172), 12 ವರ್ಷದ ಬಾಲಕ (ಪಿ4579), 21 ವರ್ಷದ (ಪಿ4580) (21 ವರ್ಷದ ಯುವಕ) ಬಿಡುಗಡೆ ಹೊಂದಿದ್ದಾರೆ.

ಅದರಂತೆ ರೋಗಿ ಸಂಖ್ಯೆ 3174 (5 ವರ್ಷದ ಬಾಲಕ),ರೋಗಿ ಸಂಖ್ಯೆ 4582 (28 ವರ್ಷದ ಯುವತಿ), ರೋಗಿ ಸಂಖ್ಯೆ 4583 (50 ವರ್ಷದ ಪುರುಷ) ರೋಗಿ ಸಂಖ್ಯೆ 4584 (8 ವರ್ಷದ ಬಾಲಕಿ), ರೋಗಿ ಸಂಖ್ಯೆ 4585 (35 ವರ್ಷದ ಮಹಿಳೆ), ರೋಗಿ ಸಂಖ್ಯೆ 4587 (24 ವರ್ಷದ ಯುವಕ) ರೋಗಿ ಸಂಖ್ಯೆ 4588 (28 ವರ್ಷದ ಯುವಕ) ರೋಗಿ ಸಂಖ್ಯೆ 4589 (16 ವರ್ಷದ ಯುವತಿ), 23 ವರ್ಷದ ಯುವತಿ (ಪಿ4590),

9ವರ್ಷದ ಬಾಲಕಿ (ಪಿ 4591), 27 ವರ್ಷದ (ಪಿ4592) ಯುವತಿ, 16 ವರ್ಷದ ಬಾಲಕ (ಪಿ4593), 23 ವರ್ಷ (ಪಿ4594), 30 ವರ್ಷ (4595), 35 ವರ್ಷ (ಪಿ4596) ಯುವಕರು, 35 ವರ್ಷದ ಮಹಿಳೆ (ಪಿ4597) ಹಾಗೂ 39 ವರ್ಷದ (ಪಿ 4601) ಪುರುಷ ಗುಣಮುಖರಾಗಿ ಬಿಡುಗಡೆಯಾದರೆಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಈವರೆಗೆ 202 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, 88 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಮೃತಪಟ್ಟಿದ್ದಾರೆ. 108 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿಹೊರಗಿನಿಂದ 28736 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಈವರೆಗೆ 26,358 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 202 ಜನರ ವರದಿ ಪಾಸಿಟಿವ್‌ ಬಂದಿದೆ. 25,730 ಜನರ ವರದಿ ನೆಗೆಟಿವ್‌ ಬಂದಿದೆ. 426 ಜನರ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ