ಆ್ಯಪ್ನಗರ

ಭಾರಿ ಮಳೆ, ಕೃಷ್ಣಾ ನದಿಗೆ ಒಳಹರಿವು ಹೆಚ್ಚಳ, ಆಲಮಟ್ಟಿ ಡ್ಯಾಂನ 26 ಗೇಟ್ ಮೂಲಕ 1.50 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ

ಕಳೆದ ವರ್ಷ ಪ್ರವಾಹದಿಂದಾಗಿ ಗರಿಷ್ಠ 5 ಲಕ್ಷ ಕ್ಯುಸೆಕ್ ನೀರನ್ನು ಡ್ಯಾಂನಿಂದ ಹೊರಬಿಡಲಾಗಿತ್ತು. ಕೃಷ್ಣಾ ನದಿ ತೀರದ 13 ಗ್ರಾಮಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿತ್ತು.

Vijaya Karnataka Web 6 Aug 2020, 11:02 pm
ವಿಜಯಪುರ: ಕೃಷ್ಣಾನದಿಗೆ ಅಪಾರ ನೀರು ಹರಿದುಬರುತ್ತಿದ್ದು, ಆಲಮಟ್ಟಿ ಡ್ಯಾಂಗೆ ಒಳಹರಿವು ಗಣನೀಯವಾಗಿ ಏರಿಕೆಯಾಗಿದ್ದರಿಂದ ಗುರುವಾರ ರಾತ್ರಿಯಿಂದ ಎಲ್ಲ 26 ಗೇಟ್ ಮೂಲಕ ನೀರನ್ನು ಹೊರಬಿಡಲಾಗಿದೆ.
Vijaya Karnataka Web ಆಲಮಟ್ಟಿ ಡ್ಯಾಮ್‌
ಆಲಮಟ್ಟಿ ಡ್ಯಾಮ್‌


ಮಹಾಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಮುನ್ನೆಚ್ಚರಿಕೆಯಿಂದಾಗಿ ಎಲ್ಲ 26 ಗೇಟಗಳ ಮೂಲಕ 1.18 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

ಜಲಾಶಯಕ್ಕೆ ರಾತ್ರಿ 9ರ ವೇಳೆ 1,4,7715 ಕ್ಯುಸೆಕ್ ಒಳಹರಿವು ಇದ್ದ ಕಾರಣ ಜಲಾಶಯದ 26 ಗೇಟ್ ಗಳ ಮೂಲಕ 1.18 ಲಕ್ಷ ಕ್ಯುಸೆಕ್ ಹಾಗೂ ಕೆಪಿಸಿಎಲ್ ಮೂಲಕ 32,000 ಕ್ಯುಸೆಕ್ ನೀರು ಸೇರಿ ಒಟ್ಟು 1.50 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಮುಂದುವರಿದರೆ ಡ್ಯಾಂಗೆ ಒಳಹರಿವು ಗಣನೀಯವಾಗಿ ಏರಲಿದೆ. ಹಾಗೆಯೇ ಹೊರ ಹರಿವು ಕೂಡ ಹೆಚ್ಚಾಗಲಿದೆ. ಈಗಾಗಲೇ ನದಿತೀರದ ಗ್ರಾಮಗಳ ಜನತೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

ಕಳೆದ ವರ್ಷ ಪ್ರವಾಹದಿಂದಾಗಿ ಗರಿಷ್ಠ 5 ಲಕ್ಷ ಕ್ಯುಸೆಕ್ ನೀರನ್ನು ಡ್ಯಾಂನಿಂದ ಹೊರಬಿಡಲಾಗಿತ್ತು. ಕೃಷ್ಣ ನದಿ ತೀರದ 13 ಗ್ರಾಮಗಳಿಗೆ ನೀರು ನುಗ್ಗಿತ್ತು. ಸಾವಿರಾರು ಎಕರೆ ಬೆಳೆ ಜಲಾವೃತಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ