ಆ್ಯಪ್ನಗರ

ವಿಜಯಪುರ: ಆಲಮಟ್ಟಿ ಅಣೆಕಟ್ಟು ನೀರು ಹೊರಕ್ಕೆ, ನೂರಾರು ಎಕರೆ ಬೆಳೆ ಜಲಾವೃತ

ಶನಿವಾರ ಮಧ್ಯಾಹ್ನ ಕಂದಾಯ ಇಲಾಖೆ ಸಿಬ್ಬಂದಿ ಜಲಾವೃತಗೊಂಡ ಜಮೀನಿಗೆ ಭೇಟಿ ಪರಿಶೀಲಿಸಿದರು. ಡ್ಯಾಂನಿಂದ ಇನ್ನೂ ಹೆಚ್ಚಿನ ನೀರು ಹೊರಬಿಟ್ಟರೆ ನಿಡಗುಂದಿ, ಮುದ್ದೇಬಿಹಾಳ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

Vijaya Karnataka Web 8 Aug 2020, 3:47 pm
ವಿಜಯಪುರ: ಕೃಷ್ಣಾ ಕಣಿವೆಯಲ್ಲಿ ವರುಣಾರ್ಭಟದಿಂದಾಗಿ ಜಿಲ್ಲೆ ಆಲಮಟ್ಟಿ ಡ್ಯಾಂಗೆ ಅಪಾರ ನೀರು ಸೇರುತ್ತಿದ್ದು, ಮುನ್ನೆಚ್ಚರಿಕೆಯಿಂದ ಡ್ಯಾಂನಿಂದಲೂ ಹೆಚ್ಚು ನೀರನ್ನು ಹೊರಬಿಡುತ್ತಿದ್ದು ನದಿತೀರದ ನೂರಾರು ಎಕರೆ ಬೆಳೆ ಜಲಾವೃತಗೊಂಡಿದೆ.
Vijaya Karnataka Web ಬೆಳೆ ಜಲಾವೃತ
ಬೆಳೆ ಜಲಾವೃತ


ಶನಿವಾರ ಬೆಳಗ್ಗೆ 519.60 ಮೀ ಗರಿಷ್ಠ ಮಟ್ಟದ ಡ್ಯಾಂನಲ್ಲಿ 517.810 ಮೀ ತನಕ ನೀರಿತ್ತು. 1.50 ಲಕ್ಷ ಕ್ಯುಸೆಕ್ ಗೂ ಹೆಚ್ಚಿನ ಪ್ರಮಾಣದ ಒಳಹರಿವಿದ್ದು. 1.80 ಲಕ್ಷ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ಡ್ಯಾಂಗೆ ಹತ್ತಿರದ ಗ್ರಾಮ ಅರಳದಿನ್ನಿಯ ನೂರಾರು ಎಕರೆ ಬೆಳೆ ಜಲಾವೃತಗೊಂಡಿದೆ.

ಸೂರ್ಯಕಾಂತಿ, ಕಬ್ಬು, ತೊಗರಿ ಬೆಳೆಗೆ ಕೃಷ್ಣಾ ನದಿ ನೀರು ನುಗ್ಗಿದೆ. ತಕ್ಷಣಕ್ಕೆ ನೀರು ಹೊರಹೋದರೆ ಬೆಳೆ ಹಾನಿಯಾಗುವ ಆತಂಕ ರೈತರಿಗೆ ಎದುರಾಗಿದೆ.

ಶನಿವಾರ ಮಧ್ಯಾಹ್ನ ಕಂದಾಯ ಇಲಾಖೆ ಸಿಬ್ಬಂದಿ ಜಲಾವೃತಗೊಂಡ ಜಮೀನಿಗೆ ಭೇಟಿ ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ಆಲಮಟ್ಟಿ ಡ್ಯಾಂನಿಂದ ಇನ್ನೂ ಹೆಚ್ಚಿನ ನೀರು ಹೊರಬಿಟ್ಟರೆ ನಿಡಗುಂದಿ, ಮುದ್ದೇಬಿಹಾಳ ತಾಲೂಕಿನ 10ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ