ಆ್ಯಪ್ನಗರ

ನಾನಂತೂ ಯತ್ನಾಳ್‌ರನ್ನು ಪ್ರಚಾರಕ್ಕೆ ಕರೆಯಲ್ಲ: ಜಿಗಜಿಣಗಿ

ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದವರು ಆಹ್ವಾನಿಸಿದ್ದಾರೆ. ನಾನಂತೂ ಅವರನ್ನು ಕರೆದಿಲ್ಲ, ಮುಂದೆಯೂ ಕರೆಯುವುದಿಲ್ಲ.

Vijaya Karnataka 29 Mar 2019, 6:29 pm
ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದವರು ಆಹ್ವಾನಿಸಿದ್ದಾರೆ. ನಾನಂತೂ ಅವರನ್ನು ಕರೆದಿಲ್ಲ, ಮುಂದೆಯೂ ಕರೆಯುವುದಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರೇ ಕರೆದ ಮೇಲೆ ನಾನು ಕರೆಯುವ ಪ್ರಶ್ನೆಯೇ ಬರುವುದಿಲ್ಲ. ಪಕ್ಷ ದ ಮೇಲೆ ಅಭಿಮಾನ ಇದ್ದರೆ ಅವರೇ ಬರಬೇಕು ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನೇರ ವಾಗ್ದಾಳಿ ನಡೆಸಿದರು.
Vijaya Karnataka Web ramesh


ಚುನಾವಣೆ ಕಾರ್ಯಾಲಯ ಉದ್ಘಾಟನೆಗೆ ಶಾಸಕ ಯತ್ನಾಳರೇಕೆ ಬಂದಿಲ್ಲ ಎಂಬ ಪ್ರಶ್ನೆಗೆ, ಅವರನ್ನು ಸಾಕಷ್ಟು ಬಾರಿ ಕರೆದರೂ ಬಂದಿಲ್ಲ, ಅವರು ಊರಲ್ಲಿರಲಿಕ್ಕಿಲ್ಲ, ಹೀಗಾಗಿ ಬಂದಿಲ್ಲ. ಎಲ್ಲರೂ ನನ್ನ ಪ್ರಚಾರ ಮಾಡುತ್ತಾರೆ, ಅವರು ಖಂಡಿತವಾಗಿಯೂ ನನ್ನ ಪ್ರಚಾರಕ್ಕೆ ಬರುತ್ತಾರೆ ಎಂದು ಉತ್ತರಿಸಿದರು.

ಯತ್ನಾಳರನ್ನು ಪ್ರಚಾರಕ್ಕೆ ನೀವು ಕರೆಯುತ್ತೀರಾ ಎಂದು ಕೇಳಿದಾಗ, ಪಕ್ಷ ದ ಕೆಲಸಕ್ಕೆ ಎಲ್ಲರೂ ಬರಲೇಬೇಕು, ನನಗಿಂತ ಪಕ್ಷ ದೊಡ್ಡದು, ಪಕ್ಷ ದವರೇ ಕರೆದ ಮೇಲೆ ನಾನು ಕರೆಯುವ ಪ್ರಶ್ನೆಯೇ ಇಲ್ಲ ಎಂದರು.

ಪಕ್ಷದಲ್ಲಿ ಕೆಲವರು ಆಯೋಗ್ಯರಿದ್ದಾರೆಂದು ಯತ್ನಾಳ ಹೇಳಿಕೆ ನೀಡಿದ್ದಾರಲ್ಲ ಎಂದು ಪ್ರಶ್ನಿಸಿದಾಗ, ಇದನ್ನು ಅವರಲ್ಲೇ ಕೇಳಿ ಎಂದ ಜಿಗಜಿಣಗಿ, ದಯಮಾಡಿ ಬಸನಗೌಡ ಪಾಟೀಲ ಯತ್ನಾಳ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದೂ ಮಾಧ್ಯಮ ಮಂದಿಗೆ ಮನವಿ ಮಾಡಿದರು.

ಏ.2ಕ್ಕೆ ಜಿಗಜಿಣಗಿ ನಾಮಪತ್ರ

ಪಕ್ಷದ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಏ.2ರಂದು ನಾಮಪತ್ರ ಸಲ್ಲಿಸುವರು.ನಾಮಪತ್ರ ಸಲ್ಲಿಕೆಗೆ ಮುನ್ನ ಬೃಹತ್‌ ರಾರ‍ಯಲಿ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ