ಆ್ಯಪ್ನಗರ

ಯತ್ನಾಳ್ ಜತೆ ಸದಾ ಕಾಲ‌ ಇರುತ್ತೇನೆ ಎಂದ ರೆಬೆಲ್ ಸ್ಟಾರ್ ಸಿ.ಪಿ. ಯೋಗೇಶ್ವರ್

ಬಸನಗೌಡ ಪಾಟೀಲ ಯತ್ನಾಳ ​ಅವರಿಗೆ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವುದರ ಜೊತೆಗೆ, ನಾನು ಅವರೊಂದಿಗೆ ಇರುವೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಭರವಸೆ ಇದೆ ಎಂದು ಸಿಪಿ ಯೋಗೇಶ್ವರ್‌ ಹೇಳಿದರು.

Vijaya Karnataka Web 29 Jun 2021, 6:46 pm
ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರೊಂದಿಗೆ ಸದಾ ಕಾಲ ಇರುತ್ತೇನೆ. ಅವರ ಧ್ವನಿಗೆ ಧ್ವನಿಯಾಗಿ ನಿಲ್ಲುವೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.
Vijaya Karnataka Web CP Yogeshwar


ವಿಜಯಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಯತ್ನಾಳರಿಗೆ ಒಳ್ಳೆಯ ಅವಕಾಶ ಬರಲಿ ಎಂದು ಹಾರೈಸಿದರು.

ಅವರಿಗೆ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವುದರ ಜೊತೆಗೆ, ನಾನು ಅವರೊಂದಿಗೆ ಇರುವೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಆಶಾ ಭಾವನೆ ಇದೆ ಎಂದು ಯೋಗೇಶ್ವರ್‌ ಹೇಳಿದರು.

ಜೋಗಕ್ಕೆ ಕೇರಳ, ಗೋವಾದಿಂದ ಆಗಮಿಸುವ ಪ್ರವಾಸಿಗರಿಗೆ ಸ್ಪೀಡ್‌ ಬೋಟ್‌ ಸೌಕರ್ಯ - ಯೋಗೇಶ್ವರ್‌ ಘೋಷಣೆ

ಕಲಬುರಗಿಯಲ್ಲಿ ಒಂಟಿ

ಏರ್‌ಪೋರ್ಟ್‌ಗೆ ಸ್ವಾಗತಕ್ಕಾಗಿ ಆಗಮಿಸದ ಶಾಸಕರು, ಮುಖಂಡರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಪಿ ಯೋಗೇಶ್ವರ್, ಇದರಲ್ಲಿ ರಾಜಕೀಯ ಏನೂ ಇಲ್ಲ. ಕೋವಿಡ್ ಕಾರಣದಿಂದ ನಾನು ಬರುವ ಬಗ್ಗೆ ಕಲಬುರಗಿಯಲ್ಲಿ ಯಾರಿಗೂ ಮಾಹಿತಿ ಕೊಟ್ಟಿರಲಿಲ್ಲ ಎಂದರು.

ಕಾರ್ಯಕರ್ತರಿಗೆ ಮುಖಂಡರಿಗೆ ಮಾಹಿತಿ ಕೊಟ್ಟಿರಲಿಲ್ಲ. ಹಾಗಾಗಿ ಯಾರು ಬರಲಿಲ್ಲ. ಇದರಲ್ಲಿ ರಾಜಕೀಯ ವಿಶೇಷ ಏನೂ ಇಲ್ಲ. ಸಿಎಂ ವಿರುದ್ಧ ರೆಬೆಲ್ ಆದೆ ಅನ್ನೋ ಕಾರಣಕ್ಕೆ ಆ ರೀತಿ ಏನೂ ನಡೆದಿಲ್ಲ ಎಂದು ಯೋಗೇಶ್ವರ್ ಸ್ಪಷ್ಟನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ