ಆ್ಯಪ್ನಗರ

ಇಬ್ರಾಹಿಂ ರೋಜಾದಲ್ಲಿ ಜಟಾಪಟಿ

ವಿಜಯಪುರ : ಇಲ್ಲಿನ ಇಬ್ರಾಹಿಂ ರೋಜಾ ಸ್ಮಾರಕ ಅಭಿವೃದ್ಧಿ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಗುರುತು ಮಾಡುತ್ತಿದ್ದ ಇಲಾಖೆ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಂಜಿನಿಯರ್‌ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

Vijaya Karnataka 12 Oct 2018, 6:51 pm
ವಿಜಯಪುರ : ಇಲ್ಲಿನ ಇಬ್ರಾಹಿಂ ರೋಜಾ ಸ್ಮಾರಕ ಅಭಿವೃದ್ಧಿ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಗುರುತು ಮಾಡುತ್ತಿದ್ದ ಇಲಾಖೆ ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಂಜಿನಿಯರ್‌ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
Vijaya Karnataka Web ibrahim roza
ಇಬ್ರಾಹಿಂ ರೋಜಾದಲ್ಲಿ ಜಟಾಪಟಿ


ಭಾರತೀಯ ಪುರಾತತ್ತ್ವ ಇಲಾಖೆ ಎಂಜಿನಿಯರ್‌ ಮೊಹ್ಮದ್‌ ಮಜುರುದ್ದೀನ್‌ ಕಲ್ಯಾಣಕರ ಹಲ್ಲೆಗೊಳಗಾದವರು. ಅಯಕತ್‌ ಮೈನುದ್ಧೀನ್‌ ಸೌದಿ, ಮಹಿಬೂಬ ಮೌಲಾಸಾಬ ಕಲಮಡಿ, ಬುಡಾನ್‌ ಮೌಲಾಸಾಬ ಕಲಮಡಿ ಹಾಗೂ ಸೈಯ್ಯದ್‌ ಮೌಲಾಸಾಬ ಕಲಮಡಿ ಆರೋಪಿಗಳು.

ಇಬ್ರಾಹಿಂ ರೋಜಾ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯ ಸಂರಕ್ಷಿತ ರಾಷ್ಟ್ರೀಯ ಸ್ಮಾರಕ. ಕೇಂದ್ರ ಸರಕಾರ ಹಾಗೂ ಇಲಾಖೆಯ ಮಹಾನಿರ್ದೇಶಕರ ನಿರ್ದೇಶನದಂತೆ ಸ್ಮಾರಕ ಅಭಿವೃದ್ಧಿ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಗುರುತು ಮಾಡುತ್ತಿದ್ದರು. ಇದನ್ನು ಕಂಡ ಆರೋಪಿಗಳೆಲ್ಲರೂ ಸ್ಥಳಕ್ಕೆ ಆಗಮಿಸಿ, ನಾವೆಲ್ಲ ಇಬ್ರಾಹಿಂ ರೋಜಾ ಈದ್ಗಾ ಕಮೀಟಿ ಸದಸ್ಯರು ಎಂದು ಹೇಳಿಕೊಂಡು ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ದೃಶ್ಯವನ್ನು ಚಿತ್ತೀಕರಿಸುತ್ತಿದ್ದ ಎಂಜಿನಿಯರ್‌ ಮೊಹಮ್ಮದ್‌ ಕಲ್ಯಾಣಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಭಾರತೀಯ ಪುರಾತತ್ತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಬಿ.ಎಸ್‌. ರಾಕೇಶ ಗಾಂಧಿವೃತ್ತ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ