ಆ್ಯಪ್ನಗರ

ಮಲ ಹೊರುವ ಪದ್ಧತಿ ಕಂಡರೆ ನಿರ್ದಾಕ್ಷಿಣ್ಯ ಕ್ರಮ

ಮಲ ಹೊರುವ ಪದ್ಧತಿ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಖಂಡಿತ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಸದಸ್ಯ ಜಗದೀಶ ಹಿರೇಮನಿ ಪುರಸಭೆ ಅಧಿಕಾರಿಗಳಿಗೆ, ಪೌರ ಕಾರ್ಮಿಕರಿಗೆ ಕಟ್ಟು ನಿಟ್ಟಾಗಿ ಸೂಚಿಸಿದರು.

Vijaya Karnataka 5 Aug 2019, 5:00 am
ಬಸವನಬಾಗೇವಾಡಿ : ಮಲ ಹೊರುವ ಪದ್ಧತಿ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಖಂಡಿತ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಸದಸ್ಯ ಜಗದೀಶ ಹಿರೇಮನಿ ಪುರಸಭೆ ಅಧಿಕಾರಿಗಳಿಗೆ, ಪೌರ ಕಾರ್ಮಿಕರಿಗೆ ಕಟ್ಟು ನಿಟ್ಟಾಗಿ ಸೂಚಿಸಿದರು.
Vijaya Karnataka Web if find fecal matter impeccable action
ಮಲ ಹೊರುವ ಪದ್ಧತಿ ಕಂಡರೆ ನಿರ್ದಾಕ್ಷಿಣ್ಯ ಕ್ರಮ


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪೌರ ಕಾರ್ಮಿಕರ, ಅಧಿಕಾರಿಗಳ ಸಭೆ ನಡೆಸಿದ ಅವರು, ಅಧಿಕಾರಿಗಳು ಈ ಬಗ್ಗೆ ಬಹು ಜಾಗೃತಿ ವಹಿಸಬೇಕು. ಕಾರ್ಮಿಕರಿಗೆ ಎಲ್ಲ ರೀತಿಯ ಸೌಲಭ್ಯ ಕೊಡಬೇಕು. ಬಟ್ಟೆ ಸೇರಿ ಇತರೇ ಮುಂಜಾಗೃತಾ ಸಾಮಗ್ರಿ ನೀಡುವುದು ಕಡ್ಡಾಯ. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉದ್ಯೋಗ ಕೊಡಿಸಲು ಮುಂದಾದರೆ ಇದಕ್ಕಾಗಿಯೇ ಇರುವ ಸೌಲಭ್ಯ ಪಡೆಯಬೇಕು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸುವ ಮೂಲಕ ಸರಕಾರದ ಸೌಲಭ್ಯ ಪಡೆದುಕೊಳ್ಳಲು ಅವರು ಕಾರ್ಮಿಕರಿಗೆ ತಿಳಿಸಿದರು. ಜತೆಗೆ ನಾನಾ ವಿಷಯದ ಕುರಿತು ಚರ್ಚೆಗಳನ್ನು ಅವರು ನಡೆಸಿದರು.

ಮುಖ್ಯಾಧಿಕಾರಿ ಬದ್ರುದ್ಧೀನ್‌ ಸೌದಾಗರ, ಸಿದ್ಧಾರ್ಥ ಕಳ್ಳಿಮನಿ, ದಂಸಸ ಮುಖಂಡ ಅಭಿಷೇಕ ಚಕ್ರವರ್ತಿ, ಶಬ್ಬೀರ್‌ ರೇವೂರಕರ, ಐ.ಬಿ.ರಾಂಪೂರ ಸೇರಿ ಇತರರು ಇದ್ದರು. ಪೌರ ಪುರುಷರು ಮತ್ತು ಮಹಿಳಾ ಕಾರ್ಮಿಕರು ಇದ್ದರು. ಪಟ್ಟಣಕ್ಕೆ ಆಗಮಿಸಿದ ತಕ್ಷ ಣ ಡಾ.ಅಂಬೇಡ್ಕರ್‌ ಮೂರ್ತಿಗೆ ಹಾರ ಹಾಕಿ, ಬಸವೇಶ್ವರ ವೃತ್ತಕ್ಕೆ ತೆರಳಿ ಅಶ್ವಾರೂಢ ಬಸವೇಶ್ವರರಿಗೆ ಹೂಹಾರ ಹಾಕಿದ ನಂತರ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಡಾ.ಅಮರೇಶ ಮಿಣಜಗಿ, ವೈ.ಎಸ್‌.ಮ್ಯಾಗೇರಿ, ರಾಜು ಫಿರಂಗಿ, ಮೂರಮಾನ, ತಮ್ಮಣ್ಣ ಕಾನಾಗಡ್ಡಿ ಸೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ