ಆ್ಯಪ್ನಗರ

ವಿಜಯಪುರ: ಅಕ್ರಮ ಕಂಟ್ರಿ ಪಿಸ್ತೂಲ್ ಹೊಂದಿದ್ದ ಮೂವರ ಬಂಧನ!

ಅಕ್ರಮ ಕಂಟ್ರಿ ಪಿಸ್ತೂಲ್ ಹೊಂದಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ಝಳಕಿ ಠಾಣೆ ಪೊಲೀಸರು ಬಂಧಿಸಿ, ಅವರಿಂದ 1 ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡು ವಶಪಡಿಸಿಕೊಂಡಿದ್ದಾರೆ.

Vijaya Karnataka Web 8 Apr 2021, 6:48 pm
ವಿಜಯಪುರ: ಮರಳು ಮಾಫಿಯಾಕ್ಕೆ ಅಡ್ಡಿಪಡಿಸುವವರನ್ನು ಹೆದರಿಸಲು ಅಕ್ರಮ ಕಂಟ್ರಿ ಪಿಸ್ತೂಲ್ ಹೊಂದಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ಝಳಕಿ ಠಾಣೆ ಪೊಲೀಸರು ಬಂಧಿಸಿ, ಅವರಿಂದ 1 ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡು ವಶಪಡಿಸಿಕೊಂಡಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಗುಡ್ಡೇವಾಡಿಯ ಸಂತೋಷ ಕಾಶೀನಾಥ ವಿಜಾಪುರೆ, ಪ್ರಶಾಂತ ಬಾಬುರಾವ ಮೊಗಳೆ ಹಾಗೂ ಕಲ್ಲಕರಜೋಳ ಗ್ರಾಮದ ಚಿದಾನಂದ ಬಿರಾಜದಾರ ಬಂಧಿತ ಆರೋಪಿಗಳು.

ಈ ಮೂವರು ಮಹಾರಾಷ್ಟ್ರದಲ್ಲಿ ರಾತ್ರಿ ವೇಳೆ ಮರಳು ಮಾಫಿಯಾ ದಂಧೆ ನಡೆಸುತ್ತಿದ್ದರು. ಆ ವೇಳೆಯಲ್ಲಿ ಉಸುಕು ಸಂಗ್ರಹಿಸುವಾಗ ಯಾರಾದರೂ ತಂಟೆಗೆ ಬಂದರೆ, ಅವರನ್ನು ಹೆದರಿಸುವ ಸಲುವಾಗಿ ಆರೋಪಿಗಳಾದ ಚಿದಾನಂದ ಬಿರಾಜದಾರ ಹಾಗೂ ಪ್ರಶಾಂತ ಬಾಬುರಾವ ಮೊಗಳೆ ಎಂಬುವರು ಅನಧಿಕೃತ ಕಂಟ್ರಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಖರೀದಿಸಿದ್ದರು.

ಎಲಿಯಾ-ಕಿನೋಚ್-12 ಎಂದು ಲೇಬಲ್ ಹೊಂದಿರುವ ಜೀವಂತ ಗುಂಡು ಹಾಗೂ ಕಂಟ್ರಿ ಪಿಸ್ತೂಲ್‌ನ್ನು ಇನ್ನೊಬ್ಬ ಆರೋಪಿ ಸಂತೋಷ ವಿಜಾಪುರೆ ಬಳಿ ಬಚ್ಚಿಟ್ಟಿದ್ದರು. ಹಲಸಂಗಿ ಮತ್ತು ಭತಗುಣಕಿ ಮಧ್ಯೆದಲ್ಲಿರುವ ಧಾಬಾದಲ್ಲಿ ಮೂವರು ಆರೋಪಿಗಳು ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ, ಝಳಕಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾಗಿ ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಝಳಕಿ ಠಾಣೆಯಲ್ಲಿ ಕಲಂ: 25(1) (ಎ),29 (ಎ)*(ಬಿ). ಐ.ಎ.ಆ್ಯಕ್ಟ್‌ನಡಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ