ಆ್ಯಪ್ನಗರ

ವಿಜಯಪುರ: ಅಂತಾರಾಜ್ಯ ದರೋಡೆಕೋರರ ಬಂಧನ

ಬಂಧಿತ ದರೋಡೆಕೋರರು, ರಾಷ್ಟ್ರೀಯ ಹೆದ್ದಾರಿಯ ಅರ್ಜನಾಳ ಕ್ರಾಸ್‌ ಬಳಿ ಎರಡು ಬೈಕ್‌ಗಳನ್ನು ತೆಗೆದುಕೊಂಡು, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು, ದರೋಡೆ ಮಾಡಬೇಕೆಂಬ ದುರುದ್ದೇಶ ಹೊಂದಿದ್ದರು.

Vijaya Karnataka Web 19 Jan 2022, 7:50 pm
ವಿಜಯಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿಸಂಚರಿಸುವ ವಾಹನಗಳನ್ನು ನಿಲ್ಲಿಸಿ ದರೋಡೆಗೆ ಹೊಂಚು ಹಾಕಿದ್ದ ಐವರು ಅಂತಾರಾಜ್ಯ ದರೋಡೆಕೋರರನ್ನು ಝಳಕಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಮೂಲತಃ ಕಲಬುರಗಿ ಜಿಲ್ಲೆಯ ಯಡ್ರಾಮಿಯ ಹಾಲಿ ಸಾತಾರ ನಿವಾಸಿ ಇಮ್ರಾನ್‌ ಸುಭಾನ್‌ ಪಟೇಲ್‌ ತಿಳಗೋಳ, ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಹಾಲಿ ಸಾತಾರ ನಿವಾಸಿ ಕುಮಾರ/ ಅರುಣಕುಮಾರ ಲಾಲಸಿಂಗ್‌/ ಲಾಲು ರಾಠೋಡ, ಸಾತಾರದ ಸೂರಜ ವಿಠಲ ಗಾಯಕವಾಡ, ಕರ್ಣ ಶರತ ಪವಾರ ಹಾಗೂ ಸ್ವಪ್ನಿಲ್‌ ಶಿವಾಜಿ ಲಕಡೆ ಬಂಧಿತ ಅಂತಾರಾಜ್ಯ ದರೋಡೆಕೋರರು.

ವಿಜಯಪುರ ಜಿಲ್ಲಾಡಳಿತದ ಕಾರ್ಯಕ್ಕೆ ಸಿಎಂ ಬೊಮ್ಮಾಯಿ ಮೆಚ್ಚುಗೆ! ಡಿಸಿ ಪಿ ಸುನೀಲ್‌ ಕುಮಾರ್‌ ಸಂತಸ

ಬಂಧಿತ ದರೋಡೆಕೋರರು, ರಾಷ್ಟ್ರೀಯ ಹೆದ್ದಾರಿಯ ಅರ್ಜನಾಳ ಕ್ರಾಸ್‌ ಬಳಿ ಎರಡು ಬೈಕ್‌ಗಳನ್ನು ತೆಗೆದುಕೊಂಡು, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ತಡೆದು, ದರೋಡೆ ಮಾಡಬೇಕೆಂಬ ದುರುದ್ದೇಶ ಹೊಂದಿದ್ದರು. ಕೈಯಲ್ಲಿ ಲಾಂಗ್‌, ಬಡಿಗೆ, ಹಗ್ಗ, ಕಾರದ ಪುಡಿಕೆಗಳು ಹಾಗೂ ಕಬ್ಬಿಣದ ಪಿಸ್ತೂಲ ಇಟ್ಟುಕೊಂಡು ಸಾರ್ವಜನಿಕರನ್ನು ಹೆದರಿಸುವ ಸಿದ್ಧತೆಯಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿ ದರೋಡೆಕೋರರನ್ನು ಬೆಳಗಿನ ಜಾವ 4 ಗಂಟೆಗೆ ಬಂಧಿಸಿದ್ದಾಗಿ ಪ್ರಕರಣ ದಾಖಲಿಸಿಕೊಂಡಿರುವ ಝಳಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಕಲಂ:
399. 402, ಐಪಿಸಿ * 25 (1) (ಎ),29(ಎ)* (ಬಿ). ಐಎ ಆ್ಯಕ್ಟ್ನಡಿ ಪ್ರಕರಣ ದಾಖಲಾಗಿದೆ.

ಗಾಂಜಾ ಮಾರಾಟ, ಇಬ್ಬರ ಬಂಧನ, 25 ಸಾವಿರ ರೂ. ವೌಲ್ಯದ ಮಾಲು ವಶ

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಇಲ್ಲಿನ ಗೋಲಗುಮ್ಮಟ ಪೊಲೀಸರು, ಅವರಿಂದ 5 ಕೆಜಿ ತೂಕದ 25 ಸಾವಿರ ರೂ. ವೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ನಗರದ ಹರಣಶಿಖಾರಿ ಕಾಲೊನಿಯ ಚಂಪು ರಾಜು ಚೌಹಾಣ್ (32) ಹಾಗೂ ಚಂದ್ರು ಶರಣಪ್ಪ ಚೌಹಾಣ್ (42) ಬಂಧಿತ ಆರೋಪಿಗಳು.

ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ: ಶಶಿಕಲಾ ಜೊಲ್ಲೆ!

ಇವರಿಬ್ಬರೂ ಹರಣಶಿಖಾರಿ ಕಾಲೊನಿ ಹಾಗೂ ಜೆಎಂ ರಸ್ತೆಯಲ್ಲಿ ಬಹಿರಂಗವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಗೋಲಗುಮ್ಮಟ ಠಾಣೆಯ ಸಿಪಿಐ ರಮೇಶ ಅವಜಿ ಹಾಗೂ ಪಿಎಸ್‌ಐ ಸೀತಾರಾಮ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಗೋಲ ಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ