ಆ್ಯಪ್ನಗರ

ಪತ್ನಿ ಕಿವಿ, ಪುತ್ರಿ ಬೆರಳು ಕತ್ತರಿಸಿದ!

ಕುಡಿತದ ಬೆನ್ನು ಬಿದ್ದಿರುವ ಪತಿ ಮಹಾಶಯ ತನ್ನ ಚಟ ತೀರಿಸಿಕೊಳ್ಳಲು ಪತ್ನಿ ಹಣ ನೀಡದ್ದಕ್ಕೆ ಸಿಟ್ಟಿಗೆದ್ದು ಆಕೆಗೆ ಮಚ್ಚಿನಿಂದ ಹೊಡೆದು ಕಿವಿ ಕತ್ತರಿಸಿದ್ದಲ್ಲದೇ, ಮಗಳ ಬೆರಳುಗಳನ್ನೂ ತುಂಡರಿಸಿದ ಘಟನೆ ನಡೆದಿದೆ.

Vijaya Karnataka Web 30 Mar 2018, 9:28 am
ಕಲಕೇರಿ : ಕುಡಿತದ ಬೆನ್ನು ಬಿದ್ದಿರುವ ಪತಿ ಮಹಾಶಯ ತನ್ನ ಚಟ ತೀರಿಸಿಕೊಳ್ಳಲು ಪತ್ನಿ ಹಣ ನೀಡದ್ದಕ್ಕೆ ಸಿಟ್ಟಿಗೆದ್ದು ಆಕೆಗೆ ಮಚ್ಚಿನಿಂದ ಹೊಡೆದು ಕಿವಿ ಕತ್ತರಿಸಿದ್ದಲ್ಲದೇ, ಮಗಳ ಬೆರಳುಗಳನ್ನೂ ತುಂಡರಿಸಿದ ಘಟನೆ ನಡೆದಿದೆ.
Vijaya Karnataka Web Rajesaba Lingasura


ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕುಡಿತಕ್ಕೆ ಹಣ ನೀಡಿಲ್ಲವೆಂಬ ಕಾರಣಕ್ಕೆ ರಾಜೇಸಾಬ ಉರ್ಫ್‌ ಮುನ್ನಾ ಲಿಂಗಸೂರ ಎಂಬಾತ ಪತ್ನಿ ಶಮಿಮಾಬಾನು (28) ಮತ್ತು 6 ವರ್ಷದ ಮಗಳು ಅಮೀನಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುವಾರ ನಸುಕಿನ ವೇಳೆ ನಡೆದಿದೆ.

ಘಟನೆಯಲ್ಲಿ ಹೆಂಡತಿಯ ಕಿವಿ,ಕೈ, ಕಾಲು ಹಾಗೂ ಕತ್ತಿಗೆ ಗಂಭೀರ ಗಾಯಗಳಾಗಿವೆ. 6 ವರ್ಷದ ಹೆಣ್ಣು ಮಗುವಿನ ಕೈ ಬೆರಳುಗಳು ತುಂಡಾಗಿವೆ. ಗಾಯಾಳುಗಳಿಗೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಹಲ್ಲೆಗೊಳಗಾದ ಶಮಿಮಾಬಾನು ಮತ್ತು ಆಕೆಯ 6 ವರ್ಷದ ಪುತ್ರಿ ಅಮೀನಾ


ಆರೋಪಿ ಪತಿ ಮೂಲತಃ ಬಾಗಲಕೋಟ ಜಿಲ್ಲೆಯ ಹುನಗುಂದದ ಆಝಾದ ನಗರ ನಿವಾಸಿ. 10 ವರ್ಷದ ಹಿಂದೆ ಹಲ್ಲೆಗೊಳಗಾದ ಕಲಕೇರಿಯ ಶಮೀಮಾಬಾನುಳನ್ನು ವಿವಾಹವಾಗಿದ್ದ. ಈ ಮಹಿಳೆ ಕಲಕೇರಿ ಸಮೀಪದ ಅಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಡಿ ದರ್ಜೆ ನೌಕರಳಾಗಿ ಸೇವೆ ಸಲ್ಲಿಸುತ್ತಿದ್ದಳು. ಪತಿ ಹೆಂಡತಿ ಊರಲ್ಲೇ ವಾಸಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಘಟನೆ ನಡೆದ ಮರುಕ್ಷಣವೇ ಈತ ಪರಾರಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ಠಾಣೆ ಪಿಎಸೈ ಎಂ.ಎನ್‌. ಸಿಂಧೂರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ