ಆ್ಯಪ್ನಗರ

ವಿದೇಶದಲ್ಲಿ ಚಿನ್ನ ಗೆದ್ದ ಕನ್ನಡ ಕುವರ

ಚಡಚಣ: ಸ್ಥಳೀಯ ನಿರಾಳೆ ಮನೆತನದ ದೇವ ನಿರಾಳೆ ಕೆನಡಾ ದೇಶದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ 14 ವರ್ಷದ ಒಳಗಿನ ಬಾಲಕರ ಬಾಸ್ಕೆಟ್‌ಬಾಲ್‌ ಲೀಗ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

Vijaya Karnataka 9 May 2019, 5:00 am
ಚಡಚಣ: ಸ್ಥಳೀಯ ನಿರಾಳೆ ಮನೆತನದ ದೇವ ನಿರಾಳೆ ಕೆನಡಾ ದೇಶದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ 14 ವರ್ಷದ ಒಳಗಿನ ಬಾಲಕರ ಬಾಸ್ಕೆಟ್‌ಬಾಲ್‌ ಲೀಗ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದು ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.
Vijaya Karnataka Web kannada is the winner of gold abroad
ವಿದೇಶದಲ್ಲಿ ಚಿನ್ನ ಗೆದ್ದ ಕನ್ನಡ ಕುವರ


ಸ್ಥಳೀಯ ಬಿಜೆಪಿ ಮುಖಂಡ ಪ್ರಭಾಕರ ನಿರಾಳೆ ಸಹೋದರ ನಾಗೇಂದ್ರ ನಿರಾಳೆ ಅವರು ಕೆನಡಾ ದೇಶದಲ್ಲಿ ಸಾಫ್ಟವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಪುತ್ರ ದೇವ ಅವರು ಕೆನಡಾ ದೇಶದ ರಾಜಧಾನಿ ಒಟ್ಟಾವೋ ನಗರದಲ್ಲಿ ಸತತ 3 ದಿನಗಳ ಕಾಲ ನಡೆದ ಪಂದ್ಯಾವಳಿಗಳಲ್ಲಿ ಆಕ್ಸ್‌ಪರ್ಡ್‌ ಅಟ್ಯಾಕ್‌ ತಂಡದ ಮುಖಂಡತ್ವ (ಕ್ಯಾಪ್ಟನ್‌) ವಹಿಸಿ ಈ ಸಾಧನೆ ಮಾಡಿದ್ದಾರೆ.

ಬಾಲಕನ ಈ ಸಾಧನೆಗೆ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿ.ಡಿ. ಪಾವಲೆ, ರಾಮ ಅವಟಿ ಮತ್ತಿತರರು ಶ್ಲಾಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ