ಆ್ಯಪ್ನಗರ

ಕನ್ನೊಳ್ಳಿ ಶ್ರೀಗಳ ಕ್ರಿಯಾ ಸಮಾಧಿ

ಚಿಕ್ಕಸಿಂದಗಿ: ಕನ್ನೊಳ್ಳಿಯಲ್ಲಿ ಮಂಗಳವಾರ ಲಿಂಗೈಕ್ಯರಾದ ಶತಾಯುಷಿ ಮರುಳಾರಾಧ್ಯ ಶಿವಾಚಾರ್ಯರ ಬೃಹತ್‌ ಶೋಭಾಯಾತ್ರೆ ನಡೆದು, ಅಸಂಖ್ಯ ಭಕ್ತರು, ನಾಡಿನ ನೂರಾರು ಮಠಾಧೀಶರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಸಂಜೆ ವೇಳೆಗೆ ಮಠದ ಆವರಣದಲ್ಲಿಕ್ರಿಯಾಸಮಾಧಿಯಲ್ಲಿಅಂತ್ಯಕ್ರಿಯೆ ನೆರವೇರಿಸಲಾಯಿತು.

Vijaya Karnataka 19 Feb 2020, 5:00 am
ಚಿಕ್ಕಸಿಂದಗಿ: ಕನ್ನೊಳ್ಳಿಯಲ್ಲಿ ಮಂಗಳವಾರ ಲಿಂಗೈಕ್ಯರಾದ ಶತಾಯುಷಿ ಮರುಳಾರಾಧ್ಯ ಶಿವಾಚಾರ್ಯರ ಬೃಹತ್‌ ಶೋಭಾಯಾತ್ರೆ ನಡೆದು, ಅಸಂಖ್ಯ ಭಕ್ತರು, ನಾಡಿನ ನೂರಾರು ಮಠಾಧೀಶರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಸಂಜೆ ವೇಳೆಗೆ ಮಠದ ಆವರಣದಲ್ಲಿಕ್ರಿಯಾಸಮಾಧಿಯಲ್ಲಿಅಂತ್ಯಕ್ರಿಯೆ ನೆರವೇರಿಸಲಾಯಿತು.
Vijaya Karnataka Web kannolli swamiji
ಕನ್ನೊಳ್ಳಿ ಶ್ರೀಗಳ ಕ್ರಿಯಾ ಸಮಾಧಿ


ಸೋಮವಾರ ಲಿಂಗೈಕ್ಯರಾದ ಶ್ರೀಗಳ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದಲ್ಲದೆ, ಮಹಾರಾಷ್ಟ್ರ, ತಮಿಳುನಾಡಿನಿಂದಲೂ ಅಪಾರ ಭಕ್ತರು ಬಂದಿದ್ದರು.

ಸೋಮವಾರ ಸಂಜೆಯೇ ಗ್ರಾಮದ ಹೊರವಲಯದಲ್ಲಿ ಮಂಟಪ ನಿರ್ಮಿಸಿ ಶ್ರೀಗಳ

ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸೋಮವಾರ ರಾತ್ರಿಯಿಡೀ ನಾನಾ ತಂಡಗಳು ಭಜನೆ ಮೂಲಕ ಗುರುಭಕ್ತಿ ಸಮರ್ಪಿಸಿದವು.

ಬೃಹತ್‌ ಶೋಭಾಯಾತ್ರೆ : ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಮಂಟಪದಿಂದ ಹೊರಟ ಅಡ್ಡಪಲ್ಲಕ್ಕಿ ಶೋಭಾಯಾತ್ರೆ ಆರಂಭಗೊಂಡು, ಅಪಾರ ಭಕ್ತರು ಸೇರಿದ್ದರು. ಭಕ್ತರು ವಿಭೂತಿ ಧರಿಸಿ ಮರುಳಾರಾಧ್ಯರ ಜಯಘೋಷ ಕೂಗಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಶರೀರದ ಶೋಭಾಯಾತ್ರೆ ನಡೆದು ರಸ್ತೆಯುದ್ಧಕ್ಕೂ ಮಹಿಳೆಯರು ಆರತಿ ಬೆಳಗಿದರು. ಸಾರ್ವಜನಿಕರು ಪುಷ್ಪಾರ್ಚನೆ ಮೂಲಕ ಭಕ್ತಿ ನಮನ ಸಲ್ಲಿಸಿದರು. ಕುದುರೆ ಕುಣಿತ, ಗೊಂಬೆ ಕುಣಿತ, ಹಲಗೆ ಮೇಳ, ಡೊಳ್ಳು ಕುಣಿತ ತಂಡಗಳು ಭಕ್ತಿಸೇವೆ ಸಲ್ಲಿಸಿದವು.

ಸಂಜೆ 4.20ಕ್ಕೆ ಶೋಭಾಯಾತ್ರೆ ಶ್ರೀಮಠ ತಲುಪಿತು. ಮಠದಲ್ಲಿನಿರ್ಮಿಸಿದ 5 ಸಾವಿರ ವಿಭೂತಿಗಳಿಂದ ಕ್ರಿಯಾ ಸಮಾಧಿಯಲ್ಲಿವೀರಶೈವ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತಿ.

ಗ್ರಾಮಸ್ಥರು ಹಾಗೂ ಕೆಲವು ದಾನಿಗಳು ಎರಡು ದಿನಗಳ ಕಾಲ ನಿರಂತರವಾಗಿ ನೆರೆದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ