ಆ್ಯಪ್ನಗರ

ಕೃಷ್ಣೆ , ಭೀಮೆ ಹರಿವು ಯಥಾಸ್ಥಿತಿ ಸದ್ಯಕ್ಕಿಲ್ಲಪ್ರವಾಹ ಆತಂಕ

ಕೃಷ್ಣೆ , ಭೀಮೆ ಹರಿವು ಯಥಾಸ್ಥಿತಿ ಸದ್ಯಕ್ಕಿಲ್ಲಪ್ರವಾಹ ಆತಂಕ ವಿಕ ಸುದ್ದಿಲೋಕ ವಿಜಯಪುರ ಕೃಷ್ಣೆ ಹಾಗೂ ಭೀಮಾ ನದಿ ಹರಿವು ಯಥಾಸ್ಥಿತಿಯಲ್ಲಿದ್ದು, ಹೆಚ್ಚಿನ ಆತಂಕ ತಪ್ಪಿದೆ...

Vijaya Karnataka 10 Sep 2019, 5:00 am
ವಿಜಯಪುರ: ಕೃಷ್ಣೆ ಹಾಗೂ ಭೀಮಾ ನದಿ ಹರಿವು ಯಥಾಸ್ಥಿತಿಯಲ್ಲಿದ್ದು, ಹೆಚ್ಚಿನ ಆತಂಕ ತಪ್ಪಿದೆ. ಆಲಮೇಲ ತಾಲೂಕಿನ ತಾರಾಪುರ ಭೀಮಾನದಿಯಿಂದ ಈಗಲೂ ಸಂಪರ್ಕ ಕಡಿತಗೊಂಡಿದೆ. ಮತ್ತೊಂದೆಡೆ ಆಲಮಟ್ಟಿಯಿಂದ ಹೆಚ್ಚಿನ ನೀರು ಹರಿದಿದ್ದರಿಂದ ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿವೆ.
Vijaya Karnataka Web krishna bhima flood water present donat problem
ಕೃಷ್ಣೆ , ಭೀಮೆ ಹರಿವು ಯಥಾಸ್ಥಿತಿ ಸದ್ಯಕ್ಕಿಲ್ಲಪ್ರವಾಹ ಆತಂಕ


ಭೀಮಾ ನದಿಗೆ ಕಳೆದ ಎರಡು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿನೀರು ಹರಿದು ಬಂದಿದ್ದರಿಂದ ಮತ್ತೆ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಆದರೆ ನೀರಿನ ಹರಿವಿನಲ್ಲಿಯಥಾಸ್ಥಿತಿ ಮುಂದುವರಿದಿದ್ದರಿಂದ ತಾರಾಪುರಕ್ಕೆ ಮಾತ್ರ ತೊಂದರೆಯಾಗಿದೆ. ಇನ್ನುಳಿದಂತೆ ಚಡಚಣ ತಾಲೂಕಿನ ಹಳ್ಳಿಗಳಲ್ಲಿಯಾವುದೇ ತೊಂದರೆಯಾಗಿಲ್ಲ.

ಭೀಮಾನದಿಯಲ್ಲಿ ಸದ್ಯಕ್ಕೆ 45 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿಯುತ್ತಿದೆ. ನೀರಿನ ಹರಿವು 2 ಲಕ್ಷ ಕ್ಯೂಸೆಕ್‌ ದಾಟಿದರೆ ನದಿ ಪಕ್ಕದ ಗ್ರಾಮಗಳ ಜಮೀನಿಗೆ ನೀರು ಆವರಿಸಲಿದೆ. ಸದ್ಯಕ್ಕೆ ಭೀಮೆ ಹರಿವು ಯಥಾಸ್ಥಿತಿ ಇದೆ. ಸೊನ್ನ ಬ್ಯಾರೇಜ್‌ ಹಿನ್ನೀರಿನಿಂದ ತಾರಾಪುರ ರಸ್ತೆ ಸಂಪರ್ಕ ಮಾತ್ರ ಕಡಿತಗೊಂಡಿದೆ. ಹೀಗಾಗಿ ಹೆಚ್ಚಿನ ಆತಂಕ ಈ ಭಾಗದಲ್ಲಿಸದ್ಯಕ್ಕಿಲ್ಲಎನ್ನುತ್ತಾರೆ ಅಧಿಕಾರಿಗಳು.

ಮತ್ತೊಂದೆಡೆ ಆಲಮಟ್ಟಿ ಜಲಾಶಯಿಂದ ಒಳ ಹರಿವಿಗಿಂತ ಹೆಚ್ಚಿನ ನೀರನ್ನು ಹೊರಕ್ಕೆ ಹರಿಸಿ ಮುನ್ನೆಚ್ಚರಿಕೆ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದೆ. ಹೀಗಾಗಿ ನಿಡಗುಂದಿ ಹಾಗೂ ಮುದ್ದೇಬಿಹಾಳ ತಾಲೂಕಿನ ಅನೇಕ ಹಳ್ಳಿಗಳ ಜಮೀನುಗಳು ಜಲಾವೃತಗೊಂಡಿವೆ.

ಮಹಾರಾಷ್ಟ್ರದಲ್ಲಿಮಳೆಯಾದ ಕಾರಣ ಕೃಷ್ಣಾನದಿ ಹರಿವು ಹೆಚ್ಚಾಗಿ ಆಲಮಟ್ಟಿ ಡ್ಯಾಂಗೂ ಒಳ ಹರಿವು ಹೆಚ್ಚಾಗಿತ್ತು. ಹೀಗಾಗಿ ಪ್ರವಾಹ ಆತಂಕ ಎದುರಾಗಿತ್ತು. ಸೋಮವಾರದಿಂದ ಹರಿವು 2 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಾಗದೆ ಭಾನುವಾರದಷ್ಟೇ ಇತ್ತು.

ಜಲಾಶಯಕ್ಕೆ ಸೋಮವಾರ ಬೆಳಗ್ಗೆ 1,88,500 ಕ್ಯೂಸೆಕ್‌ ಒಳ ಹರಿವಿದ್ದು , 2.50 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಟ್ಟು ಗರಿಷ್ಠ ಸಾಮರ್ಥ್ಯಕ್ಕಿಂತ 99 ಟಿಎಂಸಿ ಮಾತ್ರ ಹಿಡಿದಿಡಲಾಗಿದೆ. ಒಳ ಹರಿವು ಇನ್ನೂ ಹೆಚ್ಚಾದರೂ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಹೀಗಾಗಿ ಸದ್ಯಕ್ಕೆ ಪ್ರವಾಹ ಸ್ಥಿತಿ ಎದುರಾಗಿಲ್ಲಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ