ಆ್ಯಪ್ನಗರ

ಅಡ್ಡ ಬಂದ ವೃದ್ಧನ ರಕ್ಷಿಸಲು ಹೋಗಿ KSRTC ಬಸ್ ಪಲ್ಟಿ: ಮಹಿಳೆ ಸಾವು

ಬಸ್ ಗೆ ಅಡ್ಡ ಬಂದ ವೃದ್ಧನ ಕಾಲು ಕಟ್ ಆಗಿದೆ. ಗಾಯಾಳು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ.

Vijaya Karnataka Web 27 Jan 2019, 7:50 pm
ವಿಜಯಪುರ: ಹೆದ್ದಾರಿ ಮೇಲೆ ಅಡ್ಡ ಬಂದ ವೃದ್ದನನ್ನು ರಕ್ಷಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, 43 ಜನರಿಗೆ ಗಾಯಗೊಂಡ ಘಟನೆ ಇಂಡಿ ತಾಲೂಕಿನ ಕಪನಿಂಬರಗಿ ಕ್ರಾಸ್ ಬಳಿ ನಡೆದಿದೆ.
Vijaya Karnataka Web bus


ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಮಹಿಳೆ ಮೃತ ದುರ್ದೈವಿ. ಬಸ್ ಗೆ ಅಡ್ಡ ಬಂದ ವೃದ್ಧನ ಕಾಲು ಕಟ್ ಆಗಿದೆ. ಗಾಯಾಳು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರ ಡಿಪೋಗೆ ಸೇರಿದ ಕೆಎ 28 ಎಫ್ 2381 ನಂಬರಿನ ಬಸ್ ಪಲ್ಟಿಯಾಗಿದೆ. ಘಟನೆ ಸಂಬಂಧ ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ