ಆ್ಯಪ್ನಗರ

ರಾತ್ರೋರಾತ್ರಿ ರೈತರಿಂದ ಜಮೀನು ಒತ್ತುವರಿ

ನಾಲತವಾಡ: ಸಮೀಪದ ಬಾಚಿಹಾಳ-ಸಿದ್ದಾಪುರ ಗ್ರಾಮದ ಮೀನುಮರಿ ಪಾಲನಾ ಕೇಂದ್ರಕ್ಕೆ ಸಂಬಂಧಿಸಿದಂತೆ ರಾತ್ರೋರಾತ್ರಿ ರೈತರು ಜೆಸಿಬಿ ಯಂತ್ರದ ಮೂಲಕ ಇಲಾಖೆ ಜಮೀನು ಒತ್ತುವರಿ ಪಡೆದುಕೊಳ್ಳುತ್ತಿದ್ದ ಘಟನೆಯೊಂದು ಶನಿವಾರ ಬೆಳಕಿಗೆ ಬಂದಿದ್ದು, ಭಾನುವಾರ ಅಧಿಕಾರಿಗಳು ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿವ್ಯಕ್ತಪಡಿಸಿದ್ದಾರೆ.

Vijaya Karnataka 29 Jan 2019, 5:00 am
ಮೈಬೂಬ್‌ ಹಳ್ಳೂರ ನಾಲತವಾಡ
Vijaya Karnataka Web land enclosure by nightly farmers
ರಾತ್ರೋರಾತ್ರಿ ರೈತರಿಂದ ಜಮೀನು ಒತ್ತುವರಿ


ಸಮೀಪದ ಬಾಚಿಹಾಳ-ಸಿದ್ದಾಪುರ ಗ್ರಾಮದ ಮೀನುಮರಿ ಪಾಲನಾ ಕೇಂದ್ರಕ್ಕೆ ಸಂಬಂಧಿಸಿದಂತೆ ರಾತ್ರೋರಾತ್ರಿ ರೈತರು ಜೆಸಿಬಿ ಯಂತ್ರದ ಮೂಲಕ ಇಲಾಖೆ ಜಮೀನು ಒತ್ತುವರಿ ಪಡೆದುಕೊಳ್ಳುತ್ತಿದ್ದ ಘಟನೆಯೊಂದು ಶನಿವಾರ ಬೆಳಕಿಗೆ ಬಂದಿದ್ದು, ಭಾನುವಾರ ಅಧಿಕಾರಿಗಳು ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿವ್ಯಕ್ತಪಡಿಸಿದ್ದಾರೆ.

ಹಿನ್ನೆಲೆ: 1983ರಲ್ಲೇ 7 ಜನ ರೈತರಿಂದ ಅಂದಿನ ಅಂದಾಜು ಬೆಲೆಯನ್ನು ನೀಡಿ ಕೆಬಿಜೆಎನ್‌ಎಲ್‌ ಇಲಾಖೆಯು ಸುಮಾರು 72 ಎಕರೆ ಪ್ರದೇಶದ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ. ನಂತರ ಖಜಾನೆಯಿಂದ ನೇರವಾಗಿ ಜಮೀನು ಮಾಲೀಕರಿಗೆ ನಿಗದಿತ ಬೆಲೆಯ ಹಣ ನೀಡಲಾಗಿದೆ. ಸಾಕ್ಷಾಧಾರಗಳನ್ನು ಇಲಾಖೆಯು ತನ್ನಲ್ಲಿರಿಸಿಕೊಂಡಿದ್ದರೂ ರೈತರು ಪ್ರಾಣ ಹೋದರೂ ಜಮೀನು ಬಿಡಲ್ಲ ಎಂದು ಹಠ ಸಾಧಿಸುತ್ತಿರುವುದು ಕುತೂಹಲ ಮೂಡಿಸಿದೆ.

ನಿ ಕೊಡೆ ನಾ ಬಿಡೆ

ಸುಮಾರು 35 ವರ್ಷಗಳಿಂದ ಸರಕಾರ ನಮ್ಮ ಜಮೀನನ್ನು ಪಡೆದಕೊಂಡು ಅಂದು ಸೂಕ್ತ ಬೆಲೆ ನೀಡಲಾಗಿದೆ ಎಂದು ಹೇಳಿದೆ, ಆದರೆ ಆ ಜಮೀನಿನ ದುಡ್ಡು ನಮ್ಮ ಕೈಸೇರಿಲ್ಲ ಇಲಾಖೆಯವರು ನಮ್ಮನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಸದ್ಯ ನಮ್ಮ ಜಮೀನು ನಮಗೆ ಬೇಕು ಅಥವಾ ಪ್ರಸ್ತುತ ಜಮೀನು ಬೆಲೆ ಬೇಕು ಎಂದು ಹಟ ಹಿಡಿದ ರೈತರ ಹಾಗೂ ಇಲಾಖೆ ನಡೆ ನಿ ಕೊಡೆ ನಾ ಬಿಡೆ ಪ್ರಸಂಗದಂತಾಗದೆ.

ತಡೆಯಾಜ್ಞೆ-ಆಕ್ರೋಶ

ನಮ್ಮ ಜಮೀನಿಗಳಿಗೆ ಸೂಕ್ತ ಬೆಲೆ ನೀಡಿ ಎಂದು ಕಲಬುರಗಿ ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ, ನಮಗೆ ಸೂಕ್ತ ಬೆಲೆ ಘೋಷಣೆಯ ಸಾಧ್ಯತೆ ಸದ್ಯದಲ್ಲೇ ಇತ್ತು ಎನ್ನುವ ರೈತರು ಇದಕ್ಕೆ ಪ್ರತಿಯಾಗಿ ಇಲಾಖೆಯವರು ರೈತರಿಗೆ ಅಂದೇ ಸೂಕ್ತ ಬೆಲೆ ಘೋಷಿಸಿ ಹಣ ನೀಡಲಾಗಿದೆ. ಈಗ ಯಾವುದೇ ಬೆಲೆ ನಿಗದಿಗೊಳಿಸಿ ಆದೇಶ ಮಾಡಬಾರದು ಎಂದು ಕೆಬಿಜೆಎನ್‌ಎಲ್‌ ಇಲಾಖೆಯು ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದು, ರೈತರನ್ನು ರೊಚ್ಚಿಗೆಬ್ಬಿಸಿದೆ.

ಮಾರಣ ಹೋಮ

ರೈತರು ತಮ್ಮ ಜಮೀನು ಪಡೆದುಕೊಳ್ಳಲೇಬೇಕು ಎಂಬ ಹಟದಿಂದ ಶನಿವಾರ ರಾತ್ರೋರಾತ್ರಿ ಜೆಸಿಬಿ ಯಂತ್ರದ ಮೂಲಕ ಜಮೀನು ಸ್ವಚ್ಛ ಮಾಡಿಕೊಳ್ಳುವ ವೇಳೆ ಹೆಮ್ಮರವಾಗಿ ಬೆಳೆದ ನಾನಾ ಮರಗಳು ಒತ್ತುವರಿ ಹೊಡೆತಕ್ಕೆ ಬಲಿಯಾಗಿದ್ದು, ರೈತರ ಧೋರಣೆಯು ಇಲಾಖೆಯ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಪ್ರಕರಣ ದಾಖಲು

ಶನಿವಾರ ರೈತರಿಂದ ಜಮೀನು ಒತ್ತುವರಿ ವೇಳೆ ಬಹಳಷ್ಟು ಮರಗಳು ಮಾಯವಾಗಿದ್ದು ಈ ಕುರಿತು ಒತ್ತುವರಿ ಮಾಡಿಕೊಳ್ಳುತ್ತಿರುವ ರೈತರ ವಿರುದ್ಧ ಈಗಾಗಲೇ ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ನಮ್ಮಲ್ಲಿ ಸಾಕಷ್ಟು ಸತ್ಯಾಂಶದ ಸರಕಾರದ ಆದೇಶದ ದಾಖಲೆಗಳಿವೆ, ಮುಂದೆ ಜಮೀನು ಒತ್ತುವರಿ ತಂಟೆಗೆ ಬಾರದಂತೆ ಪ್ರಕರಣ ದಾಖಲಿಸುತ್ತೇವೆ ಎಂದು ಮೀನು ಮರಿ ಪಾಲನಾ ಇಲಾಖೆ ರೈತರಿಗೆ ಎಚ್ಚರಿಕೆ ನೀಡಿದೆ.

ಕಳೆದ 35 ವರ್ಷಗಳಿಂದೆ ಸರಕಾರ ಭೂಮಿ ಪಡೆಯುವುವಾಗ ರೈತರಿಗೆ ಸೂಕ್ತ ಬೆಲೆ ನೀಡಲಾಗಿದೆ ಎಂದು ನಮ್ಮ ಇಲಾಖೆಗೆ ಸಾಕ್ಷಾಧಾರಗಳೊಂದಿಗೆ ದಾಖಲೆ ನೀಡಿದೆ, ಆದರೂ ರೈತರು ನಮ್ಮ ಜಮೀನು ಒತ್ತು ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಗುರುತಿಸಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ.

ಎಂ.ಎಸ್‌.ಭಾಂಗಿ, ಸಹಾಯಕ ಗ್ರೇಡ್‌-1 ನಿರ್ದೇಶಕರು, ಮೀನು ಮರಿ ಪಾಲನಾ ಕೇಂದ್ರ ನಾರಾಯಣಪುರ

ಕಷ್ಟ ಪಟ್ಟು ಬೆಳೆಸಿದ ಹೆಮ್ಮರಗಳನ್ನು ಕಡಿದು ರೈತರು ತಮ್ಮ ಹಿತಕ್ಕಾಗಿ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ತನಿಖೆಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.

ಎಸ್‌.ಜಿ.ಬಿರಾದಾರ, ಸಹಾಯಕ ನಿರ್ದೇಶಕರು ಮೀನು ಮರಿ ಪಾಲನಾ ಕೇಂದ್ರ ನಾರಾಯಣಪುರ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ