ಆ್ಯಪ್ನಗರ

ಹಳೆ ವೈಷಮ್ಯಕ್ಕೆ ವಕೀಲರ ಕೈ ಬೆರಳನ್ನೇ ಕತ್ತರಿಸಿದ ದುಷ್ಕರ್ಮಿಗಳು....!

ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವಕೀಲರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

Vijaya Karnataka Web 13 Sep 2019, 1:00 pm
ವಿಜಯಪುರ: ಹಳೆ ವೈಷಮ್ಯಕ್ಕೆ ವಕೀಲರೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಸಂಗಮೇಶ ಚಾಂದಕವಟೆ ಹಲ್ಲೆಗೊಳಗಾದ ವಕೀಲರು.
Vijaya Karnataka Web Crime knife


ಈ ಹಿಂದೆ ದುಡ್ಡಿನ ವಿಚಾರವಾಗಿ ಸಂಗಮೇಶ ಹಾಗೂ ಸಾಧಿಕ್ ಮೂಸಾ ಮತ್ತವನ ಸಹಚರೊಂದಿಗ ನಡುವೆ ಗಲಾಟೆ ನಡೆದಿತ್ತು. ಇದೇ ದ್ವೇಷವನ್ನು ಇಟ್ಟುಕೊಂಡು ಸಮಯ ಸಾಧಿಸಿ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಮೂಸಾ ಮತ್ತವರ ಬೆಂಬಲಿಗರು ಸಂಚು ರೂಪಿಸಿದ್ದರು. ಗುರುವಾರ ಸಾಧಿಕ್ ಮೂಸಾ ಸೇರಿದಂತೆ ನಾಲ್ವರು ಇಂಡಿ ನಗರದ ಶಾಂತೇಶ್ವರ ವಿದ್ಯಾವರ್ದಕ ಸಂಘದ ಆವರಣಕ್ಕೆ ಬರುವಂತೆ ವಕೀಲರಿಗೆ ಫೋನ್ ಕರೆ ಮಾಡಿ ಕರೆಸಿಕೊಂಡಿದ್ದಾರೆ.

ಬಳಿಕ ಅವರ ಮೇಲೆ ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯ ತೀವ್ರತೆಗೆ ಸಂಗಮೇಶನ ಕೈ ಬೆರಳುಗಳು ತುಂಡಾಗಿದ್ದು, ಮಹಾರಾಷ್ಟ್ರದ ಸೊಲಾಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..ಇಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ