ಆ್ಯಪ್ನಗರ

ವಕೀಲನ ಕೊಲೆ: ಮೂವರು ಆರೋಪಿಗಳ ಬಂಧನ

ಸಿಂದಗಿ (ವಿಜಯಪುರ): ತಾಲೂಕಿನ ಬಳಗಾನೂರ ಗ್ರಾಮದ ನ್ಯಾಯವಾದಿ ದತ್ತಾತ್ರೇಯ ಲಕ್ಷ್ಮಣ ಬಂಡಿವಡ್ಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

Vijaya Karnataka 5 Nov 2018, 7:44 pm
ಸಿಂದಗಿ (ವಿಜಯಪುರ): ತಾಲೂಕಿನ ಬಳಗಾನೂರ ಗ್ರಾಮದ ನ್ಯಾಯವಾದಿ ದತ್ತಾತ್ರೇಯ ಲಕ್ಷ್ಮಣ ಬಂಡಿವಡ್ಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.
Vijaya Karnataka Web lawyer murder three accused arrested
ವಕೀಲನ ಕೊಲೆ: ಮೂವರು ಆರೋಪಿಗಳ ಬಂಧನ


ಅದೇ ಗ್ರಾಮದ ರವೀಂದ್ರ ಲಕ್ಷ್ಮಣ ಕಲಕುಟಗಿ(60), ಆತನ ಮಗ ಶಿವರಾಜ ರವೀಂದ್ರ ಕಲಕುಟಗಿ(28) ಹಾಗೂ ಮಾಳಪ್ಪ ಹಿರಗಪ್ಪ ಡೋಗೂರ(23) ಬಂಧಿತರು.

ಕಳೆದ ನ.1ರಂದು ತಡರಾತ್ರಿ ಬಳಗಾನೂರ ಗ್ರಾಮಕ್ಕೆ ತೆರಳುತ್ತಿದ್ದಾಗ ಆರೋಪಿಗಳು ಸೇರಿಕೊಂಡು ತಮ್ಮ ವಿರುದ್ಧದ ಕಕ್ಷಿದಾರಳ ಆಸ್ತಿ ವ್ಯಾಜ್ಯ ನಡೆಸುತ್ತಿದ್ದ ವಕೀಲ ಬಂಡಿವಡ್ಡರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್ಪಿ ಸಿಪಿಐ ಎಂ.ಬಿ.ಸಂಕದ ಅವರ ಮಾರ್ಗದರ್ಶನ, ಸಿಪಿಐ ಮಹಾಂತೇಶ ಧಾಮಣ್ಣವರ ನೇತೃತ್ವದಲ್ಲಿ ಆಲಮೇಲ ಪಿಎಸ್‌ಐ ಸಿ.ಬಿ.ಚಿಕ್ಕೋಡಿ ಹಾಗೂ ಪೊಲೀಸರ ತಂಡ ಮೂವರು ಆರೋಪಿಗಳನ್ನು ಬಂಧಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ