ಆ್ಯಪ್ನಗರ

ವಿಜಯಪುರ: ಸಿಡಿಲಿಗೆ ತಾಯಿ, ಮಗಳು ಬಲಿ, ಪತಿಗೆ ಗಾಯ

ಮಳೆ ಬರಲಾರಂಭಿಸುತ್ತಿದ್ದಂತೆಯೇ ಸಿಡಿಲಿನ ಆರ್ಭಟ ಜೋರಾಗಿತ್ತು. ಇದರಿಂದಾಗಿ ಜಮೀನಿನಿಂದ ಪತಿ, ಪತ್ನಿ ಹಾಗೂ ಮಗಳು ವಾಪಸ್ ಮನೆಗೆ ಬರುವಾಗ ಮರದ ನೆರಳಿಗೆ ನಿಂತಿದ್ದರು. ಆಗ ಏಕಾಏಕಿ ಅಪ್ಪಳಿಸಿದ ಸಿಡಿಲಿಗೆ ತಾಯಿ, ಮಗಳು ಬಲಿಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.

Vijaya Karnataka Web 10 Oct 2020, 6:13 pm
ವಿಜಯಪುರ: ಸಿಡಿಲು ಬಡಿದು ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದು, ಪತಿ ಗಾಯಗೊಂಡ ದುರ್ಘಟನೆ ಬಸವನಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಗ್ರಾಮದ ಮಹಾದೇವಿ ಭಜಂತ್ರಿ (45) ಸೋನಾ ಭಜಂತ್ರಿ (12) ಮೃತಪಟ್ಟ ತಾಯಿ‌ ಮಗಳು. ಆದರೆ ಅವರೊಟ್ಟಿಗಿದ್ದ ಮಹಾದೇವಿ ಪತಿ ಯಂಕಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಬಸವನಬಾಗೇವಾಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮಳೆ ಬರಲಾರಂಭಿಸುತ್ತಿದ್ದಂತೆಯೇ ಸಿಡಿಲಿನ ಆರ್ಭಟ ಜೋರಾಗಿತ್ತು. ಇದರಿಂದಾಗಿ ಜಮೀನಿನಿಂದ ಪತಿ, ಪತ್ನಿ ಹಾಗೂ ಮಗಳು ವಾಪಸ್ ಮನೆಗೆ ಬರುವಾಗ ಮರದ ನೆರಳಿಗೆ ನಿಂತಿದ್ದರು. ಆಗ ಏಕಾಏಕಿ ಅಪ್ಪಳಿಸಿದ ಸಿಡಿಲಿಗೆ ತಾಯಿ, ಮಗಳು ಬಲಿಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.

ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಬಸವನ ಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ