ಆ್ಯಪ್ನಗರ

ಶಿಕ್ಷಕಿ ವರ್ತನೆ ಖಂಡಿಸಿ ಶಾಲೆಗೆ ಬೀಗ

ಬಬಲೇಶ್ವರ:ಶಾಲಾ ಶಿಕ್ಷಕಿಯ ವರ್ತನೆ ಖಂಡಿಸಿ ಪಾಲಕರು, ವಿದ್ಯಾರ್ಥಿಗಳು ಶಾಲೆಗೆ ಬೀಗ ಹಾಕಿ ಗುರುವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.

Vijaya Karnataka 30 Aug 2019, 5:00 am
ಬಬಲೇಶ್ವರ:ಶಾಲಾ ಶಿಕ್ಷಕಿಯ ವರ್ತನೆ ಖಂಡಿಸಿ ಪಾಲಕರು, ವಿದ್ಯಾರ್ಥಿಗಳು ಶಾಲೆಗೆ ಬೀಗ ಹಾಕಿ ಗುರುವಾರ ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.
Vijaya Karnataka Web lock down the school to condemn the teachers behavior
ಶಿಕ್ಷಕಿ ವರ್ತನೆ ಖಂಡಿಸಿ ಶಾಲೆಗೆ ಬೀಗ


ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನಡೆದ ಪಾಲಕರ ಸಭೆಯಲ್ಲಿ, ಶಿಕ್ಷಕಿ ಪಿ.ಜಿ.ದೆಂಗನವರ ಅವರು ಸರಿಯಾಗಿ ಸಮಯಕ್ಕೆ ಶಾಲೆಗೆ ಬರುವುದಿಲ್ಲ. ಶಾಲೆ ಕೊಠಡಿಯಲ್ಲಿಮೊಬೈಲ್‌ನಲ್ಲಿಮಾತನಾಡುತ್ತಾರೆ, ರಾಷ ಗೀತೆಗೆ ಅಪಮಾನ ಮಾಡುತ್ತಾರೆ. ತಾವು ಊಟ ಮಾಡಿದ ತಟ್ಟೆಯನ್ನು ವಿದ್ಯಾರ್ಥಿಗಳಿಂದ ತೊಳೆಸುತ್ತಾರೆ ಎಂದು ಆರೋಪಿಸಿ ಸಭೆಯಿಂದ ಹೊರಬಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಕೂಡಲೇ ಶಿಕ್ಷಕಿಯನ್ನು ವರ್ಗಾವಣೆ ಮಾಡಬೇಕು. ವರ್ಗಾವಣೆ ಮಾಡುವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಅಲ್ಲಿಯವರೆಗೆ ಬಾಗಿಲು ತೆರೆಯಬಾರದು ಎಂದು ಪಾಲಕರು ಎಚ್ಚರಿಕೆ ನೀಡಿದರು.

ರಾಷ್ಟ್ರ ಗೀತೆ ಹಾಡುವ ಸಮಯದಲ್ಲಿಶಿಕ್ಷಕಿ ಮೊಬೈಲ್‌ನಲ್ಲಿಮಾತನಾಡುತ್ತ ಕುಳಿತಿರುವ ವಿಡಿಯೋವನ್ನು ಪಾಲಕರ ಗಮನಕ್ಕೆ ತರಲಾಯಿತು. ವಿಡಿಯೋ ವೀಕ್ಷಿಸಿದ ಪಾಲಕರು, ರಾಷ್ಟ್ರ ಗೀತೆಯ ಗೌರವ ಬಗ್ಗೆ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯೇ ಅಪಮಾನ ಮಾಡಿದ್ದಾರೆ. ಶಾಲೆಯ ಆವರಣದಲ್ಲಿಮೊಬೈಲ್‌ ಬಳಕೆ ಮಾಡಬಾರದು ಎಂಬ ನಿಯಮ ಇದೆ. ಆದರೆ ಅವರು ಶಾಲೆಯಲ್ಲಿಪಾಠ ಮಾಡುವ ಬದಲು ಮೊಬೈಲ್‌ನಲ್ಲಿಹರಟೆ ಹೊಡೆವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಎಸ್ಡಿಎಂಸಿಯವರು ಶಿಕ್ಷಕಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ತಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿಲ್ಲ. ಅವರ ವರ್ತನೆ ಕಂಡು ಬೇರೆಡೆ ವರ್ಗಾವಣೆ ಮಾಡುವಂತೆ ಮೇಲಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಎಸ್ಡಿಎಂಸಿ ಅಧ್ಯಕ್ಷ ಗೂಳಪ್ಪ ಯರನಾಳ, ರೇವತಿ ಹಂಚನಾಳ, ಶಿವಗೊಂಡ ಸಂಕನ್ನವರ, ಮಾದೇವಿ ಪಾತ್ರೊಟ, ಗುಂಡು, ಲಕ್ಷಿತ್ರ್ಮ, ಶೇಖರ ಜಂಗಮ್ಮಶೆಟ್ಟಿ, ರವಿ ಸೇರಿದಂತೆ ನೂರಾರು ಪಾಲಕರು, ಶಿಕ್ಷಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ