ಆ್ಯಪ್ನಗರ

ವಿಜಯಪುರ: ಲಾಕ್‌ಡೌನ್‌ ಉಲ್ಲಂಘಿಸಿದ ಮಸೀದಿಗಳಿಗೆ ನೋಟಿಸ್‌ ಜಾರಿ

ತಬ್ಲಿಘಿ ಜಮಾತ್ ಗೆ ಹೋದವರ ಬಗ್ಗೆ ಕಳೆದ ಮೂರ್ನಾಲ್ಕು ದಿನದಿಂದ ಮಾಹಿತಿ ಕಲೆ ಹಾಕಲಾಗಿದೆ. ನಮ್ಮ ಜಿಲ್ಲೆಯಲ್ಲಿ 19 ಜನ ಮಾಸ್ ಆಗಿ ಒಂದೇ ಕಡೆ ಇದ್ದರು. ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ

Vijaya Karnataka Web 3 Apr 2020, 4:54 pm
ವಿಜಯಪುರ: ಜಿಲ್ಲೆಯಲ್ಲಿ ಈವರೆಗೂ 370 ಜನರು ವಿದೇಶದಿಂದ ಬಂದಿದ್ದು ಅವರನ್ನೆಲ್ಲ ಹೋಂ ಕ್ವಾರಂಟೆನ್‌ನಲ್ಲಿ ಇಡಲಾಗಿದೆ ಎಂದು‌ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್‌ ತಿಳಿಸಿದ್ದಾರೆ.
Vijaya Karnataka Web ತಬ್ಲಿಘಿ ಜಮಾತ್
ತಬ್ಲಿಘಿ ಜಮಾತ್


ಈಗ 33 ಜನರು ಹೋಂ ಕ್ವಾರಂಟೈನ್‌ನನಲ್ಲಿ ಇದ್ದಾರೆ. 23 ಜನರನ್ನು ಆಸ್ಪತ್ರೆ ಐಸೊಲೇಷನ್ ನಲ್ಲಿ ಇರಿಸಲಾಗಿದೆ.

ಇದುವರೆಗೂ ನಾವು 50 ವರದಿಗಳನ್ನು ಕಳುಹಿಸಿದ್ದೇವೆ. ಅದರಲ್ಲಿ 27 ವರದಿ ನೆಗೆಟಿವ್ ಬಂದಿವೆ. ಇನ್ನು 23 ವರದಿಗಳು ಬರಬೇಕಿದೆ, ಆ ವರದಿಗಳು ಸಹ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನಿಜಾಮುದ್ದೀನ್ ಎಫೆಕ್ಟ್‌: ಮನೆಯಲ್ಲೇ ಪ್ರಾರ್ಥಿಸಿ ಎಂದು ಬೆಂಗಳೂರಿನ ಮಸೀದಿಗಳಿಂದ ಸಂದೇಶ...

ಎಸ್ಪಿ‌ ಅನುಪಮ ಅಗರವಾಲ್ ಮಾತನಾಡಿ, ತಬ್ಲಿಘಿ ಜಮಾತ್ ಗೆ ಹೋದವರ ಬಗ್ಗೆ ಕಳೆದ ಮೂರ್ನಾಲ್ಕು ದಿನದಿಂದ ಮಾಹಿತಿ ಕಲೆ ಹಾಕಲಾಗಿದೆ. ನಮ್ಮ ಜಿಲ್ಲೆಯಲ್ಲಿ 19 ಜನ ಮಾಸ್ ಆಗಿ ಒಂದೇ ಕಡೆ ಇದ್ದರು. ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದರು.

ಹುಬ್ಬಳ್ಳಿ: ನಮಾಜ್‌ ಮಾಡಬೇಡಿ ಎಂದಿದ್ದಕ್ಕೆ ಪೊಲೀಸರ ಮೇಲೆ ಕಲ್ಲು, ಚಪ್ಪಲಿ ತೂರಾಟ, 8 ಮಂದಿಗೆ ಗಾಯ

ಜಿಲ್ಲೆಯಲ್ಲಿ 144 ನಿಷೇಧಾಜ್ಞೆ ಉಲ್ಲಂಘಿಸಿರುವ ಜಿಲ್ಲೆಯ 3 ಮಸೀದಿಗಳಿಗೂ ನೊಟೀಸ್ ಜಾರಿ ಮಾಡಲಾಗಿದೆ, ತಬ್ಲಿಘಿ ಜಮಾತ್ ಗೆ ಹೋದವರ ಬಗ್ಗೆ ಕುರಿತು ಮಸೀದಿಗಳಲ್ಲಿ ಇದರೆ ಮಾಹಿತಿ ನೀಡಬೇಕು ಎಂದು‌ ಮನವಿ ಮಾಡಿದರು.

ಇಂಡಿ ತಾಲೂಕಿನ ಹಂಜಗಿಯಲ್ಲಿ ಹಂಜಗಿಯಲ್ಲಿ 10 ಜನ ರಾಜಸ್ಥಾನದಿಂದ ಬಂದು ವಾಸಿಸುತ್ತಿದ್ರು. ಅವರನ್ನು ಸಹ ಐಸೊಲೇಷನ್ ನಲ್ಲಿ ಇರಿಸಲಾಗಿದೆ. ವಿಜಯಪುರದಿಂದ ದೆಹಲಿ ನಿಜಾಮುದ್ದೀನ್‌ ತಬ್ಲಿಘಿ ಜಮಾಜ್‌ತೆಗೆ ಹೋದವರು 29 ಜನರದಿದ್ದಾರೆ. ಅವರನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ