ಆ್ಯಪ್ನಗರ

ವಿಸಿ, ರಜಿಸ್ಟಾರ್‌ ವಿರುದ್ಧ ಲೋಕಾಯುಕ್ತ ದೂರು

ಇಲ್ಲಿನ ಮಹಿಳಾ ವಿವಿಯಲ್ಲಿ371 (ಜೆ) ಅಡಿ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪಾಲಿಕೆ ಮಾಜಿ ಸದಸ್ಯ ರಾಜಶೇಖರ ಮಗಿಮಠ ಕೊನೆಗೂ ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

Vijaya Karnataka Web 11 Jun 2020, 5:00 am
ವಿಜಯಪುರ: ಇಲ್ಲಿನ ಮಹಿಳಾ ವಿವಿಯಲ್ಲಿ371 (ಜೆ) ಅಡಿ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪಾಲಿಕೆ ಮಾಜಿ ಸದಸ್ಯ ರಾಜಶೇಖರ ಮಗಿಮಠ ಕೊನೆಗೂ ಲೋಕಾಯುಕ್ತ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
Vijaya Karnataka Web lokayukta complaint against vc and registrar
ವಿಸಿ, ರಜಿಸ್ಟಾರ್‌ ವಿರುದ್ಧ ಲೋಕಾಯುಕ್ತ ದೂರು


ವಿವಿಯ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಕುಲಸಚಿವೆ ಡಾ.ಆರ್‌.ಸುನಂದಮ್ಮ, ಪಿಎಂಇ ಬೋರ್ಡ್‌ ನಿರ್ದೇಶಕ ಪ್ರೊ.ಎ.ಖಾಜಿ, ನೇಮಕಾತಿ ಸಮಿತಿ ಸದಸ್ಯ ಪ್ರೊ.ಪಿ.ಜಿ.ತಡಸದ ಹಾಗೂ ಪ್ರೊ.ಓಂಕಾರಗೌಡ ಕಾಕಡೆ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ಮಗಿಮಠ ದೂರು ನೀಡಿ, ಅವರನ್ನು ತಕ್ಷಣದಿಂದ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ದೂರಿನಲ್ಲೇನಿದೆ

ಅಕ್ಕಮಹಾದೇವಿ ವಿವಿಯಲ್ಲಿ371 (ಜೆ) ನಡಿ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿಅರ್ಹ ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿಕೊಳ್ಳದೇ ಎಸ್ಸಿ/ ಎಸ್ಟಿ ಖಾಯ್ದೆ ಉಲ್ಲಂಘಿಘಿಸಿ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ. ಅಲ್ಲದೇ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ನೇಮಕಾತಿ ಮಾಡಿಕೊಂಡಿದ್ದಾರೆ ಎಂದವರು ದೂರಿದ್ದಾರೆ.

ಈ ಅಕ್ರಮ ನೇಮಕಾತಿಯಲ್ಲಿಭಾಗಿಯಾಗಿರುವ ವಿವಿಯ ಅಧಿಕಾರಿಗಳನ್ನು ವಿವಿಯ ಉನ್ನತ ಹುದ್ದೆ ಅಥವಾ ಪ್ರಭಾರ ಹುದ್ದೆ ನೀಡಬಾರದು ಎಂದವರು ದೂರಿನಲ್ಲಿತಿಳಿಸಿದ್ದಾರೆ.


ಮಗಿಮಠ ರಾಜ್ಯ ಲೋಕಾಯುಕ್ತಕ್ಕೆ ದೂರು ನೀಡಿರುತ್ತಾರೆ. ಮುಖ್ಯ ಕಚೇರಿಯಿಂದ ಆದೇಶ ಬಂದ ಬಳಿಕ ತನಿಖೆ ಕೈಗೊಳ್ಳುತ್ತೇವೆ.
ಬಸವರಾಜ ಯಲಿಗಾರ, ಡಿವೈಎಸ್ಪಿ, ಲೋಕಾಯುಕ್ತ ಪೊಲೀಸ್‌, ವಿಜಯಪುರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ