ಆ್ಯಪ್ನಗರ

ವಿಜಯಪುರದಲ್ಲಿ‌ ಎನ್‌ಆರ್‌ಸಿ ವಿರುದ್ಧ ಬೃಹತ್ ಜನಾಂದೋಲನ: ಲಕ್ಷಾಂತರ ಜನರ ಭಾಗಿ

ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಸಂವಿಧಾನ ಉಳಿಸಿ ಬೃಹತ್ ಜನಾಂದೋಲನ ಆರಂಭವಾಗಿದೆ. ಲಕ್ಷಾಂತರ ಜನರು ಭಾಗಿಯಾಗಿದ್ದಾರೆ. ಅಸಂಖ್ಯಾತ ವಾಹನಗಳಿಂದಾಗಿ ಇಡೀ ಬಾಗಲಕೋಟ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

Vijaya Karnataka Web 24 Feb 2020, 7:13 pm
ವಿಜಯಪುರ: ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಸಂವಿಧಾನ ಉಳಿಸಿ ಬೃಹತ್ ಜನಾಂದೋಲನ ಆರಂಭವಾಗಿದೆ. ಲಕ್ಷಾಂತರ ಜನರು ಭಾಗಿಯಾಗಿದ್ದಾರೆ. ವಿಜಯಪುರ ನಗರದಿಂದ ಜನಸಾಗರವೆ ಜುಮನಾಳ ಕ್ರಾಸ್ ವರೆಗೆ ಹರಿದು ಬರುತ್ತಿತ್ತು. ಅಸಂಖ್ಯಾತ ವಾಹನಗಳಿಂದಾಗಿ ಇಡೀ ಬಾಗಲಕೋಟ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
Vijaya Karnataka Web shivaji nagar
ಸಾಂದರ್ಭಿಕ ಚಿತ್ರ


ಕೇಂದ್ರ ಜಾರಿಗೆ ತರಲು ಉದ್ದೇಶಿಸಿರುವ ಎನ್ ಆರ್ ಸಿ ಕಾಯ್ದೆ ವಿರುದ್ದ ಘೋಷಣೆಗಳನ್ನು‌ ಕೂಗುತ್ತಲೇ ಕಾರ್ಯಕ್ರಮ ಸ್ಥಳಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದರು.

ಕೈಯಲ್ಲಿ ಧ್ವಜ: ಇನ್ನು ಮುಸ್ಲಿ ಮಹಿಳೆಯರು ಮಕ್ಕಳಾದಿಯಾಗಿ ಕೈಯಲ್ಲಿ ಧ್ವಜ ಹಿಡಿದು ಭಾರತ ಮಾತಾಕಿ ಜೈ, ನಾವು ಭಾರತೀಯರು ಎನ್ನುತ್ತಾ ಜನಾಂದೋಲನ ಕಾರ್ಯಕ್ರಮದತ್ತ ಆಗಮಿಸುತ್ತಿದ್ದಾರೆ.

ಹೊಸದಿಲ್ಲಿ ಸಿಎಎ ವಿರೋಧಿ ಪ್ರತಿಭಟನೆ: ಹಿಂಸಾಚಾರಕ್ಕೆ ಮುಖ್ಯ ಪೊಲೀಸ್‌ ಪೇದೆ ಸಾವು

ರಾರಾಜಿಸಿದ ಧ್ವಜಗಳು: ಜನಾಂದೋಲನ ನಡೆಯುತ್ತಿರುವ 50 ಎಕರೆ ವಿಶಾಲ ಜಾಗದಲ್ಲಿ ದೃಷ್ಟಿ ಹರಿಸಿದ ಕಡೆಯಲ್ಲೆಲ್ಲ ಭಾರತದ ಧ್ವಜಗಳೇ ರಾರಾಜಿಸುತ್ತಿದ್ದವು.

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು, ಎಂಟು ಸುತ್ತು ಗುಂಡು!

ಸಿದ್ದರಾಮಯ್ಯ ಆಗಮನ: ಸಂಜೆ 6 ಗಂಟೆಗೆ ಮಾಜಿ‌ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಆಗಮಿಸಿದರು. ಮಾಜಿ ಸಚಿವ ಎಂ. ಬಿ. ಪಾಟೀಲ, ಸಿ. ಎಸ್. ನಾಡಗೌಡ, ಪ್ರಕಾಶ ರಾಠೋಡ, ವಿಜಯಾನಂದ ಕಾಶಪ್ಪನ್ನವರ, ಎಸ್. ಜಿ. ನಂಜಯ್ಯನಮಠ, ಅಬ್ದುಲ್ ಹಮೀದ್ ಮುಶ್ರೀಫ್ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ