ಆ್ಯಪ್ನಗರ

ಸಿದ್ಧರಾಮಯ್ಯ ಕಂಬಳಿಗೆ ಇರುವ ಮರ್ಯಾದೆಯನ್ನೇ ತೆಗೆಯುತ್ತಿದ್ದಾರೆ: ಸಚಿವ ಸಿ ಸಿ ಪಾಟೀಲ್

'ಮಾಜಿ ಮುಖ್ಯಮಂತ್ರಿ ​​ಸಿದ್ದರಾಮಯ್ಯ ಅವರೇನು ಕಂಬಳಿ ನೇಯ್ದಿದ್ದರಾ? ಇವರಿಗೆ ಕಂಬಳಿ ನೇಯ್ದು ಅನುಭವ ಇದ್ಯಾ? ಹೀಗಾಗಿ, ಜಾತಿಯನ್ನ ರಾಜಕೀಯಕ್ಕೆ ಉಪಯೋಗಿಸಬಾರದು' - ಸಚಿವ ಸಿ. ಸಿ. ಪಾಟೀಲ್ ಆಕ್ರೋಶ

Lipi 28 Oct 2021, 3:49 pm
ವಿಜಯಪುರ: ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮಾತಿನ ವರಸೆ ವಿರುದ್ಧ ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕಂಬಳಿಗೆ ಇರುವ ಮರ್ಯಾದೆಯನ್ನೇ ಕಳೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
Vijaya Karnataka Web cc patil
ಸಿದ್ಧರಾಮಯ್ಯ ಕಂಬಳಿಗೆ ಇರುವ ಮರ್ಯಾದೆಯನ್ನೇ ತೆಗೆಯುತ್ತಿದ್ದಾರೆ: ಸಚಿವ ಸಿ ಸಿ ಪಾಟೀಲ್


ಮಾಜಿ ಮುಖ್ಯ ಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಅಲ್ಪ ಸಂಖ್ಯಾತರ ಕಾರ್ಯಕ್ರಮಗಳಲ್ಲಿ ಟೋಪಿ ಹಾಕಿಕೊಂಡಿದ್ದಾರೆ. ಈಗ ಇದಕ್ಕೆ ಏನು ಹೇಳುತ್ತಾರೆ ಎಂದೂ ಸಿ. ಸಿ. ಪಾಟೀಲ್ ಖಾರವಾಗಿ ಪ್ರಶ್ನಿಸಿದರು.

ನವೆಂಬರ್ 2 ರಂದು ಎಲ್ಲ ಗೊತ್ತಾಗುತ್ತದೆ ಎಂದು ಹೇಳಿದ ಅವರು, ಎಷ್ಟು ಕೂಗಾಡಿದರು, ಎಷ್ಟು ಮಾತನಾಡಿದರು ಎಂಬುದು ಅಂದು ತಿಳಿಯುತ್ತದೆ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರು ತಮ್ಮ ಮಾತಿನ ದಾಟಿ ಸುಧಾರಿಸಿಕೊಳ್ಳಲಿ. ಇಷ್ಟೊಂದು ಮಾತನಾಡುವ ಅವಶ್ಯಕತೆ ಇರಲಿಲ್ಲ. ಹುಚ್ಚ ಹುಚ್ಚರಂತೆ ಏನೇನೋ ಮಾತನಾಡುತ್ತಾರೆ ಎಂದು ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ. ಸಿ. ಪಾಟೀಲ ವಾಗ್ದಾಳಿ ನಡೆಸಿದರು.

ಕಂಬಳಿ ವಿಚಾರವನ್ನು ರಾಜಕೀಯಕ್ಕೆ ಎಳೆದು ತಂದಿದ್ದೇ ಬೊಮ್ಮಾಯಿ - ಸಿದ್ಧರಾಮಯ್ಯ ಆಕ್ರೋಶ
ಸಿದ್ದರಾಮಯ್ಯ ಹುಚ್ಚರಂತೆ ಮಾತಾಡ್ತಾರೆ ಎಂದ ಸಿಸಿ ಪಾಟೀಲ್, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಂಬಳಿ ನೇಯ್ದಿದ್ದೀರಾ? ಎಂದಿದ್ದ ಸಿದ್ದರಾಮಯ್ಯಗೆ ಸಿಸಿ ಪಾಟೀಲ್ ಟಾಂಗ್ ನೀಡಿದರು.

ಸಿದ್ದರಾಮಯ್ಯ ಅವರೇನು ಕಂಬಳಿ ನೇಯ್ದಿದ್ದರಾ? ಇವರಿಗೆ ಕಂಬಳಿ ನೇಯ್ದು ಅನುಭವ ಇದ್ಯಾ? ಹೀಗಾಗಿ, ಜಾತಿಯನ್ನ ರಾಜಕೀಯಕ್ಕೆ ಉಪಯೋಗಿಸಬಾರದು ಎಂದು ಹೇಳಿದ ಸಚಿವ ಸಿ. ಸಿ. ಪಾಟೀಲ, ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರೇ.. ಕಾಂಗ್ರೆಸ್‌ ಮುಳುಗುತ್ತಿರುವ ಹಡಗು, ಬುದ್ದಿವಂತರು ಅಲ್ಲಿರಲ್ಲ: ಸಿ. ಟಿ. ರವಿ ಟಾಂಗ್
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಳಸಿರುವ ಮಾತುಗಳು ಮನಸ್ಸಿಗೆ ನೋವು ತಂದಿವೆ. ಮುಖ್ಯ ಮಂತ್ರಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದು ಸರಿಯಲ್ಲ ಎಂದು ಸಚಿವ ಸಿ. ಸಿ. ಪಾಟೀಲ್ ಅವರು ಹೇಳಿದರು.

ಕಳೆದ 15 ದಿನಗಳಿಂದ ಸಿಂದಗಿ ಮತ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದೇವೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಪ್ರಚಾರ ನಡೆಸಿದ್ದೇವೆ. ಹೀಗಾಗಿ ಸಿಂದಗಿ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 25 ಸಾವಿರ ಮತಗಳ ಅಂತರದಿಂದ ಭರ್ಜರಿಯಾಗಿ ಗೆಲ್ಲಲಿದ್ದಾರೆ ಎಂದು ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ. ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ