ವಿಜಯಪುರ: ಇಬ್ಬರ ಪ್ರೀತಿಯನ್ನೂ ನಿರಾಕರಿಸಿದ್ದ 14 ವರ್ಷದ ಬಾಲಕಿಯನ್ನು ಬೆಂಕಿ ಇಟ್ಟು ಕೊಂದ ಹೃದಯ ವಿದ್ರಾವಕ ಘಟನೆ ವಿಜಯಪುರದ ತಿಕೋಟಾದಲ್ಲಿ ನಡೆದಿದೆ.
ಕೆಲ ದಿನಗಳಿಂದ 14 ವರ್ಷದ ಬಾಲಕಿಯನ್ನು ರತ್ನಾಪುರ ಗ್ರಾಮದ ವಿವಾಹಿತ ಶಂಕರ ಹಿಪ್ಪರಕರ (24) ಹಾಗೂ ಮೋಹನ್ (19) ಇಬ್ಬರು ಬಾಲಕಿಯನ್ನು ಬೆನ್ನತ್ತಿ ಪ್ರೀತಿಸುವಂತೆ ಪೀಡಿಸುತ್ತಿದ್ದರು. ಇಬ್ಬರ ಪ್ರೀತಿಯನ್ನೂ ನಿರಾಕರಿಸಿದ್ದ ಬಾಲಕಿ, ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಇದರಿಂದ ಹಗೆ ಬೆಳೆಸಿಕೊಂಡಿದ್ದ ಶಂಕರ ಹಾಗೂ ಮೋಹನ್ ಜತೆಯಾಗಿ ಬಾಲಕಿ ಮನೆಯಲ್ಲಿ ಒಂಟಿಯಾಗಿರುವ ವೇಳೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ತಿಕೋಟ ಠಾಣೆಯಲ್ಲಿ ಬಾಲಕಿ ಪೋಷಕರು ದೂರು ದಾಖಲಿಸಿದ್ದಾರೆ.
ಪ್ರೀತಿಸುವಂತೆ ಪೀಡಿಸುತ್ತಿದ್ದ ಇಬ್ಬರ ಬಗ್ಗೆ ಬಾಲಕಿ ಮನೆಯಲ್ಲಿ ಹೇಳಿದ್ದಳು. ಇದಕ್ಕಾಗಿಯೇ ಅವಳನ್ನು ಶಾಲೆಯಿಂದ ಬಿಡಿಸಿ, ಮನೆಯಲ್ಲೇ ಇರಿಸಲಾಗಿತ್ತು. ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ಹೊತ್ತು ನೋಡಿ ಬಾಲಕಿಯನ್ನು ಬೆಂಕಿ ಹಚ್ಚಿ ಕೊಂದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಪೋಷಕರು ಹೇಳಿದ್ದಾರೆ.
ಕೆಲ ದಿನಗಳಿಂದ 14 ವರ್ಷದ ಬಾಲಕಿಯನ್ನು ರತ್ನಾಪುರ ಗ್ರಾಮದ ವಿವಾಹಿತ ಶಂಕರ ಹಿಪ್ಪರಕರ (24) ಹಾಗೂ ಮೋಹನ್ (19) ಇಬ್ಬರು ಬಾಲಕಿಯನ್ನು ಬೆನ್ನತ್ತಿ ಪ್ರೀತಿಸುವಂತೆ ಪೀಡಿಸುತ್ತಿದ್ದರು. ಇಬ್ಬರ ಪ್ರೀತಿಯನ್ನೂ ನಿರಾಕರಿಸಿದ್ದ ಬಾಲಕಿ, ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಇದರಿಂದ ಹಗೆ ಬೆಳೆಸಿಕೊಂಡಿದ್ದ ಶಂಕರ ಹಾಗೂ ಮೋಹನ್ ಜತೆಯಾಗಿ ಬಾಲಕಿ ಮನೆಯಲ್ಲಿ ಒಂಟಿಯಾಗಿರುವ ವೇಳೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ತಿಕೋಟ ಠಾಣೆಯಲ್ಲಿ ಬಾಲಕಿ ಪೋಷಕರು ದೂರು ದಾಖಲಿಸಿದ್ದಾರೆ.
ಪ್ರೀತಿಸುವಂತೆ ಪೀಡಿಸುತ್ತಿದ್ದ ಇಬ್ಬರ ಬಗ್ಗೆ ಬಾಲಕಿ ಮನೆಯಲ್ಲಿ ಹೇಳಿದ್ದಳು. ಇದಕ್ಕಾಗಿಯೇ ಅವಳನ್ನು ಶಾಲೆಯಿಂದ ಬಿಡಿಸಿ, ಮನೆಯಲ್ಲೇ ಇರಿಸಲಾಗಿತ್ತು. ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ಹೊತ್ತು ನೋಡಿ ಬಾಲಕಿಯನ್ನು ಬೆಂಕಿ ಹಚ್ಚಿ ಕೊಂದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಪೋಷಕರು ಹೇಳಿದ್ದಾರೆ.