ಆ್ಯಪ್ನಗರ

ನಕಲಿ ದಾಖಲೆ ಸೃಷ್ಟಿಸಿ ಇನ್ನೊಬ್ಬರ ತೇಜೋವಧೆ ಮಾಡೋದು ಸರಿಯಲ್ಲ: ಶಾಸಕ ನಡಹಳ್ಳಿ

ತಾಪಂ ಸಭಾ ಭವನದಲ್ಲಿಸೋಮವಾರ ನಡೆದ ತಾಪಂ ನೂತನ ಅಧ್ಯಕ್ಷೆ ಲಕ್ಷಿತ್ರ್ಮಬಾಯಿ ಹವಾಲ್ದಾರ್‌ ಅವರ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮಾತನಾಡಿದರು. ಕಾನೂನು ಬಾಹಿರವಾಗಿ ದಾಖಲೆ ಸೃಷ್ಟಿಸಿ ಇನ್ನೊಬ್ಬರ ತೇಜೋವಧೆ ನಡೆಸುತ್ತಿರುವವರು ಯಾರು ಅನ್ನೋದು ನಮ್ಮ ಜನಕ್ಕೆ ಗೊತ್ತಿದೆ. 25 ವರ್ಷ ಈ ತಾಲೂಕಲ್ಲಿಆಡಳಿತ ನಡೆಸಿದವರು ಇನ್ನೂ ಕೆಲವು ಇಲಾಖೆಗಳಲ್ಲಿ ತಮ್ಮ ಚೇಲಾಗಳನ್ನಿಟ್ಟುಕೊಂಡು ಕಾನೂನುಬಾಹಿರ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

Vijaya Karnataka Web 3 Aug 2020, 5:54 pm
ಮುದ್ದೇಬಿಹಾಳ: ತಾಲೂಕು ಪಂಚಾಯಿತಿ ಅಧ್ಯಕ್ಷರ ಆಯ್ಕೆಯಲ್ಲಿ ಕೆಲವರು ಜಾತಿ ಬಣ್ಣ ಬಳಿಯಲು ನೋಡುತ್ತಿದ್ದಾರೆ. ಇದಕ್ಕೆ ಇನ್ನೂ ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ನಾನೆಂದೂ ಜೀವನದಲ್ಲಿ ಜಾತಿ ರಾಜಕಾರಣ ಮಾಡಿಲ್ಲ. ಕಾನೂನು ಬದ್ಧವಾಗಿ ತಾಪಂ ಅಧ್ಯಕ್ಷರ ಅಧಿಕಾರ ಯಾರಿಗೆ ಸಿಗಬೇಕಿತ್ತೋ ಅವರಿಗೆ ಸಿಕ್ಕಿದೆ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದ್ದಾರೆ.
Vijaya Karnataka Web nadahalli


ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕುಡುಕನ ಅವಾಂತರ..! ನಶೆಯಲ್ಲಿಯೇ ಕೊರೊನಾ ವಾರಿಯರ್ಸ್‍ಗೆ ವಾರ್ನಿಂಗ್

ತಾಪಂ ಸಭಾ ಭವನದಲ್ಲಿಸೋಮವಾರ ನಡೆದ ತಾಪಂ ನೂತನ ಅಧ್ಯಕ್ಷೆ ಲಕ್ಷಿತ್ರ್ಮಬಾಯಿ ಹವಾಲ್ದಾರ್‌ ಅವರ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಾನೂನು ಬಾಹಿರವಾಗಿ ದಾಖಲೆ ಸೃಷ್ಟಿಸಿ ಇನ್ನೊಬ್ಬರ ತೇಜೋವಧೆ ನಡೆಸುತ್ತಿರುವವರು ಯಾರು ಅನ್ನೋದು ನಮ್ಮ ಜನಕ್ಕೆ ಗೊತ್ತಿದೆ. 25 ವರ್ಷ ಈ ತಾಲೂಕಲ್ಲಿಆಡಳಿತ ನಡೆಸಿದವರು ಇನ್ನೂ ಕೆಲವು ಇಲಾಖೆಗಳಲ್ಲಿ ತಮ್ಮ ಚೇಲಾಗಳನ್ನಿಟ್ಟುಕೊಂಡು ಕಾನೂನುಬಾಹಿರ ಕೆಲಸ ಮಾಡಿಸುತ್ತಿದ್ದಾರೆ. ಇಂಥವರನ್ನು ಮಟ್ಟ ಹಾಕಲು, ಪ್ರಜಾಪ್ರಭುತ್ವ ಎತ್ತಿ ಹಿಡಿಯಲು ಶಾಸಕನಾದ ನಾನು, ನಮ್ಮ ಪಕ್ಷದ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಕಾಂಗ್ರೆಸ್‌ ವಿರೋಧ ಎಂದರೆ ವಿರೋಧವೇ, ಹೊಂದಾಣಿಕೆ ಇಲ್ಲವೇ ಇಲ್ಲಎಂದರು.

ವಿಜಯಪುರ: ವಾಟ್ಸಾಪ್ ಗ್ರೂಪ್‍ ನಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷನ ಮೊಬೈಲ್‌ನಿಂದ ಅಶ್ಲೀಲ ಫೋಟೋ ಪೋಸ್ಟ್

ಲಕ್ಷಿತ್ರ್ಮಬಾಯಿ ಜಾತಿ ಪ್ರಮಾಣ ಪತ್ರ ರದ್ದುಪಡಿಸಲು ನಕಲಿ ದಾಖಲೆ ಸೃಷ್ಟಿಸಿದ್ದು ಸಾಕ್ಷಿ ಸಮೇತ ಸಾಬೀತಾಗಿದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಲು ಅವಕಾಶ ಇತ್ತು. ಇದೊಂದು ಬಾರಿ ತಿದ್ದಿಕೊಳ್ಳಲೆಂದು ಕೈಬಿಡಲಾಗಿದೆ. ಅವರು ತಮ್ಮದೇ ಸತ್ಯ ಎಂದು ವಾದಿಸಿದರೆ ಪ್ರಕರಣ ದಾಖಲಿಸಲು ಸಿದ್ಧ ಎಂದು ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಲಕ್ಷಿತ್ರ್ಮಬಾಯಿ ಹವಾಲ್ದಾರ್‌ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಹಂಗಾಮಿ ಅಧ್ಯಕ್ಷರಾಗಿದ್ದ ಮಂಜುನಾಥಗೌಡರು ಅಧಿಕಾರವನ್ನು ಲಕ್ಷಿತ್ರ್ಮಬಾಯಿಗೆ ಹಸ್ತಾಂತರಿಸಿದರು. ಸಮಾರಂಭದ ನಂತರ ನೂತನ ಅಧ್ಯಕ್ಷರು ತಮ್ಮ ಕೊಠಡಿಯಲ್ಲಿನ ಆಸನ ಅಲಂಕರಿಸಿ ಅಧಿಕಾರ ಪ್ರಾರಂಭಿಸಿದರು.

ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಇಂದು ಅಧಿಕಾರ ಸ್ವೀಕಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ