ಆ್ಯಪ್ನಗರ

ಸಿಎಂ, ಸಿದ್ಧರಾಮಯ್ಯ, ಡಿಕೆಶಿ ನಾಮಪತ್ರ ಹಿಂಪಡೆಯಲು ಕರೆ ಮಾಡಿದ್ದರು; ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಎಸ್

ಈ ಹಿಂದೆ ಸಿಂದಗಿ ಬೈ ಎಲೆಕ್ಷನ್‌ನಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಆಗ ಎಸ್.‌ ಆರ್. ಪಾಟೀಲ ಅವರ ಜೊತೆ ನನಗೂ ಟಿಕೆಟ್ ನೀಡುವಂತೆ ಕೇಳಿದ್ದೆ. ಆದರೆ ಅವರು ಎಸ್.‌ ಆರ್ ಪಾಟೀಲ ಅವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ. ಬೇರೆ ಯಾರಿಗೂ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದರು.‌‌ ಎಸ್. ಆರ್. ಪಾಟೀಲ್‌ ಅವರಿಗೂ ಟಿಕೆಟ್ ನೀಡದ ಕಾರಣ ಮತದಾರರು ಸ್ಪರ್ಧಿಸಯವಂತೆ ನನಗೂ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಮಲ್ಲಿಕಾರ್ಜುನ ಎಸ್‌ ಲೋಣಿ ಹೇಳಿದರು.

guest Mahesh-V-Shatagar | Lipi 27 Nov 2021, 1:40 pm
ವಿಜಯಪುರ: ನಾಮಪತ್ರ ಹಿಂಪಡೆದು ಅವಿರೋಧ ಆಯ್ಕೆಗೆ ಸಹಕರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯ ಮತ್ತು ಕೆ ಪಿ ಸಿ ಸಿ ಅಧ್ಯಕ್ಷ ಡಿ.‌ ಕೆ. ಶಿವಕುಮಾರ್‌ ತಮಗೆ ಕರೆ ಮಾಡಿದ್ದರು. ಆದರೆ ನಾನು ಯಾವುದೇ ಒತ್ತಡಕ್ಕೆ ಒಳಗಾಗದೆ ಕಣದಲ್ಲಿ ಉಳಿದಿರುವುದಾಗಿ ವಿಜಯಪುರ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಎಸ್. ಲೋಣಿ ತಿಳಿಸಿದ್ದಾರೆ.
Vijaya Karnataka Web mallikarjun s loni


ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ ಮತ್ತು ಲಕ್ಷ್ಮಣ ಸವದಿ ಕೂಡ ತಮಗೆ ಕರೆ ಮಾಡಿದ್ದರು. ತಮ್ಮ ನಾಮಪತ್ರ ಹಿಂಪಡೆಯಲು ಒತ್ತಾಯಿಸಿದ್ದರು. ಅಲ್ಲದೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದರು. ಆದರೆ, ನಾನು ಯಾವುದೇ ಆಸೆ- ಆಮಿಷಗಳಿಗೆ ಬಲಿಯಾಗದೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕಣದಲ್ಲಿ ಉಳಿದಿದ್ದೇನೆ ಎಂದು ಅವರು ತಿಳಿಸಿದರು.

ಈಗಾಗಲೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇನೆ. ಈ ಸಭೆಯಲ್ಲಿ ಸೇರಿದ್ದ ಸುಮಾರು ಎರಡು ಸಾವಿರ ಮತದಾರರು ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಬೇಡಿ ಎಂದು ಹೇಳಿದ್ದರು. ಅವರಿಗೆ ನೀಡಿದ ಮಾತಿನಂತೆ ಈಗ ನಡೆದುಕೊಂಡಿದ್ದೇನೆ. ನನಗೆ ಸೋಲು ಅಥವಾ ಗೆಲುವು ಮುಖ್ಯವಲ್ಲ.‌ ನಾನು ಸ್ಪರ್ದೆ ಮಾಡಿದ್ದೇನೆ. ಅವಿರೋಧ ಆಯ್ಕೆ ತಪ್ಪಿಸಿ ಸ್ಥಳೀಯ ಜನಪ್ರತಿನಿಧಿಗಳಿಗೆ ವಿಧಾನ ಪರಿಷತ್ತಿಗೆ ಮತ ಹಾಕಲು ಅವಕಾಶ ಕಲ್ಪಿಸಿದ್ದೇನೆ ಎಂದು ಮಲ್ಲಿಕಾರ್ಜುನ ಎಸ್. ಲೋಣಿ ತಿಳಿಸಿದರು.
ಎಸ್‌.ಆರ್. ಪಾಟೀಲ್‌ಗೆ ಪರಿಷತ್ ಟಿಕೆಟ್ 'ಕೈ'ತಪ್ಪಲು ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಸಿ.ಎಸ್. ನಾಡಗೌಡ!
ಈ ಹಿಂದೆ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ.‌ ಗ್ರಾಮ ಪಂಚಾಯಿತಿ ಸದಸ್ಯರ ನೋವುಗಳ ಬಗ್ಗೆ ನನಗೆ ಸ್ಪಷ್ಟವಾದ ಅರಿವಿದೆ. ಈ ಸದಸ್ಯರಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು. ಈ ಹಿಂದೆ ಸಿಂದಗಿ ಬೈ ಎಲೆಕ್ಷನ್‌ನಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಆಗ ಎಸ್.‌ ಆರ್. ಪಾಟೀಲ ಅವರ ಜೊತೆ ನನಗೂ ಟಿಕೆಟ್ ನೀಡುವಂತೆ ಕೇಳಿದ್ದೆ. ಆದರೆ ಅವರು ಎಸ್.‌ ಆರ್ ಪಾಟೀಲ ಅವರಿಗೆ ಮಾತ್ರ ಟಿಕೆಟ್ ನೀಡುತ್ತೇವೆ. ಬೇರೆ ಯಾರಿಗೂ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದರು.‌‌ ಈ ವಿಷಯದಲ್ಲಿ ಅವರು ಸ್ಪಂದಿಸಲಿಲ್ಲ. ‌ಅಷ್ಟೇ ಅಲ್ಲ ಎಸ್. ಆರ್. ಪಾಟೀಲ ಅವರಿಗೂ ಟಿಕೆಟ್ ನೀಡದ ಕಾರಣ ಮತದಾರರು ಸ್ಪರ್ಧಿಸಯವಂತೆ ನನಗೂ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ‌ನಾನು ನಾಮಪತ್ರ ವಾಪಸ್ ಪಡೆಯುವಂತೆ ಎಸ್. ಆರ್. ಪಾಟೀಲ, ಶಿವಾನಂದ ಪಾಟೀಲ, ಮತ್ತು ಯಶವಂತರಾಯಗೌಡ ಪಾಟೀಲ ಸೇರಿದಂತೆ ನಾನಾ ಮುಖಂಡರು ಕರೆ ಮಾಡಿದ್ದರು. ಆದರೆ ಮತದಾರರ ಹಿತದೃಷ್ಟಿಯಿಂದ ಕಣದಲ್ಲಿ ಉಳಿದಿದ್ದೇನೆ. ಅಷ್ಟೇ ಅಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಅಭ್ಯರ್ಥಿಗಳಿಗೆ ತಮ್ಮ ಜೊತೆ ನನಗೊಂದು ಮತ ಹಾಕಿ ಎಂದು ಕೇಳುತ್ತೇನೆ ಎಂದು ಅವರು ತಿಳಿಸಿದರು.
ಮೈಸೂರಲ್ಲಿ ಕಳೆಗಟ್ಟಿದೆ ಪರಿಷತ್ ಫೈಟ್..! ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಪ್ರಚಾರ ಭರಾಟೆ ಶುರು..
ಈ ಮಧ್ಯೆ, ನಾಮಪತ್ರ ವಾಪಸ್ ಪಡೆಯುವಂತೆ ನನಗೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಕೆಲವರು ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ನಾನು ವಿಜಯಪುರ ಪೊಲೀಸರಿಗೆ ಕೇಳುತ್ತೇನೆ. ಬೆದರಿಕೆ ಹಾಕಿದವರು ಯಾರು ಎಂಬುದನ್ನು ನಂತರ ತಿಳಿಸುತ್ತೇನೆ ಎಂದು ಮಲ್ಲಿಕಾರ್ಜುನ ಎಸ್ ಲೋಣಿ ತಿಳಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ