ಆ್ಯಪ್ನಗರ

ವಿಜಯಪುರ: ಗುಮ್ಮಟ ನಗರಿಯಲ್ಲಿ ಮತ್ತೆ ಕೊರೊನಾ ಪಾಸಿಟಿವ್‌ ಶತಕದ ಸದ್ದು

ಜಿಲ್ಲೆಯಲ್ಲಿ ಸೋಮವಾರ 20 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದರು. ಈವರೆಗಿನ 2405 ಸೋಂಕಿತರಲ್ಲಿ 1744 ಸೋಂಕಿತರು ಗುಣಮುಖರಾಗಿದ್ದರೆ, 634 ಸಕ್ರಿಯ ರೋಗಿಗಲು ಚಿಕಿತ್ಸೆ ಪಡೆಯುತ್ತಿದ್ದಾರೆ. 27 ಸೋಂಕಿತರು ಮೃತಪಟ್ಟಿದ್ದಾರೆ.

Vijaya Karnataka Web 27 Jul 2020, 8:18 pm
ವಿಜಯಪುರ: ಜಿಲ್ಲೆಯಲ್ಲಿ ಕೊರೊನಾಘಾತ ಮುಂದುವರಿದಿದ್ದು, ಸೋಮವಾರ 110 ಮಂದಿಗೆ ಕೊರೊನಾ ಸೋಂಕು ತಗುಲಿದರೆ, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿತ ಸಂಖ್ಯೆ 2405ಕ್ಕೆ ಏರಿಕೆಯಾಗಿದೆ.
Vijaya Karnataka Web ಕೊರೊನಾ
ಕೊರೊನಾ


ಬಸವನಬಾಗೇವಾಡಿ ನಿವಾಸಿ 61 ವರ್ಷದ (ಪಿ94732) ಮೃತಪಟ್ಟ ಸೋಂಕಿತೆ. 8 ವರ್ಷದಿಂದ ರಕ್ತದೊತ್ತಡ ಸಮಸ್ಯೆ ಇದ್ದ ಮಹಿಳೆ ಜು.23ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜು.25 ರಂದು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಅಗಸನಾಳ ಗ್ರಾಮದ 64 ವರ್ಷ ಸೋಂಕಿತ (ಪಿ94796) ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಕೂಡ ರಕ್ತದೊತ್ತಡ ಕಾಯಿಲೆಯಿಂದ ಬಳಲಿ, ಜು.21ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಲಕಾರಿಯಾಗದೆ ಜು.24 ರಂದು ಮೃತಪಟ್ಟಿದ್ದಾರೆ. ಇಬ್ಬರ ಅಂತ್ಯ ಸಂಸ್ಕಾರವನ್ನು ನಿಯಮದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

20 ಸೋಂಕಿತರು ಗುಣಮುಖ

ಜಿಲ್ಲೆಯಲ್ಲಿ ಸೋಮವಾರ 20 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾದರು. ಈವರೆಗಿನ 2405 ಸೋಂಕಿತರಲ್ಲಿ 1744 ಸೋಂಕಿತರು ಗುಣಮುಖರಾಗಿದ್ದರೆ, 634 ಸಕ್ರಿಯ ರೋಗಿಗಲು ಚಿಕಿತ್ಸೆ ಪಡೆಯುತ್ತಿದ್ದಾರೆ. 27 ಸೋಂಕಿತರು ಮೃತಪಟ್ಟಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಲೂಕುವಾರು ಸೋಂಕಿತರು


ವಿಜಯಪುರ 1661, ಬಾಗೇವಾಡಿ 159, ಬಬಲೇಶ್ವರ 31, ಚಡಚಣ 16, ದೇವರಹಿಪ್ಪರಗಿ 46, ಇಂಡಿ 107, ಕೊಲ್ಹಾರ 30, ಮುದ್ದೇಬಿಹಾಳ 94, ನಿಡಗುಂದಿ 25, ಸಿಂದಗಿ 101, ತಾಳಿಕೋಟೆ 88, ತಿಕೋಟಾ ತಾಲೂಕಿನಲ್ಲಿ 47 ಮಂದಿಗೆ ಸೋಂಕು ತಗುಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ