ಆ್ಯಪ್ನಗರ

ವಿಜಯಪುರ: ಪತಿ ಮೃತಪಟ್ಟಿದ್ದಕ್ಕೆ ನೊಂದು ಮಗಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಪತಿ ಮೃತಪಟ್ಟಿದ್ದರಿಂದ ನೊಂದ ಮಹಿಳೆ ಮಾನಸಿಕ ಅಸ್ವಸ್ಥ ಮಗಳೊಂದಿಗೆ ನದಿಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ವಿಜಯಪುರದ ಕೊಲ್ಹಾರ ತಾಲೂಕಿನಲ್ಲಿ ನಡೆದಿದೆ. ಶನಿವಾರ ಕೃಷ್ಣಾ ನದಿಗೆ ಹಾರಿದ್ದ ತಾಯಿ ಮತ್ತು ಮಗಳ ಶವ ಬಳೂತಿ ಜಾಕ್‌ವೆಲ್‌ ಬಳಿ ಭಾನುವಾರ ಪತ್ತೆಯಾಗಿದೆ.

Vijaya Karnataka Web 12 Jul 2020, 10:57 pm
ವಿಜಯಪುರ: ಪತಿ ಮೃತಪಟ್ಟಿದ್ದರಿಂದ ಮನನೊಂದ ಮಹಿಳೆ ಮಾನಸಿಕ ಅಸ್ವಸ್ಥ ಮಗಳೊಂದಿಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಹಾರ ತಾಲೂಕಿನ ಬಳೂತಿ ಜಾಕ್‍ವೆಲ್ ಬಳಿ ನಡೆದಿದ್ದು, ಭಾನುವಾರ ಮೃತದೇಹಗಳು ಪತ್ತೆಯಾಗಿವೆ.
Vijaya Karnataka Web mother and daughter commits suicide
ವಿಜಯಪುರ: ಪತಿ ಮೃತಪಟ್ಟಿದ್ದಕ್ಕೆ ನೊಂದು ಮಗಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ


ವಿಜಯಪುರ ಮೂಲದ ಶಕುಂತಲಾ ಸಿದ್ದಣ್ಣ ಖೇಡ (50) ಹಾಗೂ ಮಗಳು ಗಂಗಾ ಉದಯ ಹುಣಶ್ಯಾಳ (22) ಆತ್ಮಹತ್ಯೆಗೀಡಾದ ತಾಯಿ ಮಗಳು.

ಶಕುಂತಲಾ ಅವರ ಪತಿ ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ಅವರು ತೀವ್ರವಾಗಿ ನೊಂದುಕೊಂಡಿದ್ದರು. ಇವರೊಟ್ಟಿಗೆ ಮಗಳು ಗಂಗಾ ಕೂಡಾ ಮಾನಸಿಕ ಅಸ್ವಸ್ಥಳಾಗಿದ್ದರು. ಹೀಗಾಗಿ ಮನನೊಂದ ಇಬ್ಬರೂ, ಶನಿವಾರ ಕೊರ್ತಿ-ಕೊಲ್ಹಾರ ಸೇತುವೆ ಬಳಿ ಕೃಷ್ಣಾ ನದಿಗೆ ಹಾರಿದ್ದರು.

ವಿಜಯಪುರದಲ್ಲಿ ಮೈ ಮೇಲೆ ಲಾರಿ ಹರಿದು ವ್ಯಕ್ತಿ ಸಾವು

ಭಾನುವಾರ ಬಳೂತಿ ಜಾಕ್‍ವೆಲ್ ಬಳಿಯ ನದಿ ತೀರದಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ಕ್ಯಾಂಟರ್- ಲಾರಿ ಮುಖಾಮುಖಿ ಢಿಕ್ಕಿ, ಇಬ್ಬರು ಸಾವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ