ವಿಜಯಪುರ: ರಾಜ್ಯದಿಂದ ಕೇಂದ್ರ ಸಚಿವರಾಗಿರುವವರು ಕೇವಲ ಸ್ವಕ್ಷೇತ್ರಗಳಿಗೆ ಸೀಮಿತರಾಗದೇ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲಿ. ಪ್ರಹ್ಲಾದ ಜೋಶಿ, ಸದಾನಂದಗೌಡ ಸಾಮರ್ಥ್ಯ ತೋರಿಸಿ ಪ್ರಧಾನಿ ಭೇಟಿಗೆ ಅವಕಾಶ ಕಲ್ಪಿಸಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಹಾಕಿದರು.
ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರು ಹುಬ್ಬಳ್ಳಿಯಲ್ಲಿ, ಮತ್ತೊಬ್ಬರು ಬೆಂಗಳೂರಿನಲ್ಲಿಕುಳಿತಿದ್ದೀರಿ. ಹೊಸದಿಲ್ಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ. ಕೇಂದ್ರದಿಂದ 10 ಸಾವಿರ ಕೋಟಿ ರೂ. ನೆರೆ ಪರಿಹಾರ ಬಿಡುಗಡೆಗೊಳಿಸಿ ಎಂದು ಹೇಳಿದರು.
ಕರ್ನಾಟಕದಲ್ಲಿಅನಂತಕುಮಾರ್ ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅನಂತಕುಮಾರ ಬದುಕಿದ್ದರೆ ಇಂದು ರಾಜ್ಯದಲ್ಲಿಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾ ಗಿದ್ದರು. ಹಾಲಿ ಸಂಸದರು ತಗ್ಗುಗಳಾಗಿದ್ದಾರೆ ಎಂದು ಕುಟುಕಿದರು.
ರಾಜ್ಯ ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನೇನು ಕರೆದುಕೊಂಡು ಹೋಗಿ ಪ್ರಧಾನಿ ಭೇಟಿ ಮಾಡಿಸುತ್ತಾರೆ. ಪ್ರಧಾನಿ ಯಾರನ್ನೂ ಹೆದರಿಸುವವರಲ್ಲ. ಆದರೆ ರಾಜ್ಯದ ಸಂಸದರು ಮುಂದಿನ ಬಾರಿ ಟಿಕೆಟ್ಗೆ ಮೌನಕ್ಕೆ ಶರಣಾಗುವ ಬದಲಿಗೆ, ಕೇಂದ್ರದಿಂದ 10 ಸಾವಿರ ಕೋಟಿ ರೂ. ಪರಿಹಾರ ತರುವ ಮೂಲಕ ತಾಕತ್ತು ಪ್ರದರ್ಶಿಸಲಿ. ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಇದು ಪ್ರಜಾತಂತ್ರ ದೇಶ. ಇಲ್ಲಿಯಾರು ಯಾರಿಗೂ ಭಯ ಪಡಬಾರದು ಎಂದರು.
ಪ್ರಧಾನಿಗೆ ಪತ್ರ
ಕೇಂದ್ರ ಸಚಿವರು ರೈಲು ಎಂಜಿನ್ಗಳಾಗಿ ಮುಂದೆ ಹೋಗಲಿ. ನಾವು ಡಬ್ಬಿಗಳಾಗಿ ರೈಲನ್ನು ಹಿಂಬಾಲಿಸುತ್ತೇವೆ. ಅದಾಗದಿದ್ದಲ್ಲಿ, ನಾನೇ ಭೇಟಿಗೆ ಅನುಮತಿ ಕೋರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಪ್ರಧಾನಿ ಸಮಯ ನೀಡಿದರೆ ಭೇಟಿ ಮಾಡುತ್ತೇನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ನನ್ನ ಜೊತೆ ಬರುವುದಾದರೆ ಬರಬಹುದು ಎಂದರು.
ಯತ್ನಾಳ ಬೇರೆ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದಾರಲ್ಲಎಂಬ ಪ್ರಶ್ನೆಗೆ, ನಾನೇನು ಸಚಿವನಾಗಬೇಕಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾರ ಕಾಲನ್ನು ಹಿಡಿದಿಲ್ಲಎಂದರು.
ಬಿಜೆಪಿ ಕಟ್ಟಿದವ ನಾನು:
ಹಳ್ಳಿ, ಹಳ್ಳಿಗಳನ್ನೆಲ್ಲಸಂಚರಿಸಿ ನಾವು ಬಿಜೆಪಿ ಕಟ್ಟಿದ್ದೇವೆ. ಇವರಂತೆ ಸುಸಜ್ಜಿತ ಮನೆಯಲ್ಲಿಬಂದು ಕೂತಿಲ್ಲ. ಕೇರಳ, ಆಂಧ್ರಪ್ರದೇಶದಲ್ಲಿಉಸ್ತುವಾರಿ ವಹಿಸಿಕೊಂಡು ಇವರು ಎಷ್ಟು ಸ್ಥಾನಗಳಲ್ಲಿಬಿಜೆಪಿ ಗೆಲ್ಲಿಸಿದ್ದಾರೆ? ಬಿಜೆಪಿ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಇಂದಿನ ಪರಿಸ್ಥಿತಿಯಲ್ಲಿಮೋದಿ ಅವರ ಕಟ್ಟಾ ಅಭಿಮಾನಿಗಳು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.ಚಕ್ರವರ್ತಿ ಸೂಲಿಬೆಲೆ ಹೇಳಿರುವುದರಲ್ಲಿತಪ್ಪೇನಿಲ್ಲಎಂದು ಸೂಲಿಬೆಲೆ ಅವರನ್ನು ಸಮರ್ಥಿಸಿಕೊಂಡರು.
ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬರು ಹುಬ್ಬಳ್ಳಿಯಲ್ಲಿ, ಮತ್ತೊಬ್ಬರು ಬೆಂಗಳೂರಿನಲ್ಲಿಕುಳಿತಿದ್ದೀರಿ. ಹೊಸದಿಲ್ಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ. ಕೇಂದ್ರದಿಂದ 10 ಸಾವಿರ ಕೋಟಿ ರೂ. ನೆರೆ ಪರಿಹಾರ ಬಿಡುಗಡೆಗೊಳಿಸಿ ಎಂದು ಹೇಳಿದರು.
ಕರ್ನಾಟಕದಲ್ಲಿಅನಂತಕುಮಾರ್ ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ. ಅನಂತಕುಮಾರ ಬದುಕಿದ್ದರೆ ಇಂದು ರಾಜ್ಯದಲ್ಲಿಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾ ಗಿದ್ದರು. ಹಾಲಿ ಸಂಸದರು ತಗ್ಗುಗಳಾಗಿದ್ದಾರೆ ಎಂದು ಕುಟುಕಿದರು.
ರಾಜ್ಯ ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ. ಇನ್ನು ನಮ್ಮನ್ನೇನು ಕರೆದುಕೊಂಡು ಹೋಗಿ ಪ್ರಧಾನಿ ಭೇಟಿ ಮಾಡಿಸುತ್ತಾರೆ. ಪ್ರಧಾನಿ ಯಾರನ್ನೂ ಹೆದರಿಸುವವರಲ್ಲ. ಆದರೆ ರಾಜ್ಯದ ಸಂಸದರು ಮುಂದಿನ ಬಾರಿ ಟಿಕೆಟ್ಗೆ ಮೌನಕ್ಕೆ ಶರಣಾಗುವ ಬದಲಿಗೆ, ಕೇಂದ್ರದಿಂದ 10 ಸಾವಿರ ಕೋಟಿ ರೂ. ಪರಿಹಾರ ತರುವ ಮೂಲಕ ತಾಕತ್ತು ಪ್ರದರ್ಶಿಸಲಿ. ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಇದು ಪ್ರಜಾತಂತ್ರ ದೇಶ. ಇಲ್ಲಿಯಾರು ಯಾರಿಗೂ ಭಯ ಪಡಬಾರದು ಎಂದರು.
ಪ್ರಧಾನಿಗೆ ಪತ್ರ
ಕೇಂದ್ರ ಸಚಿವರು ರೈಲು ಎಂಜಿನ್ಗಳಾಗಿ ಮುಂದೆ ಹೋಗಲಿ. ನಾವು ಡಬ್ಬಿಗಳಾಗಿ ರೈಲನ್ನು ಹಿಂಬಾಲಿಸುತ್ತೇವೆ. ಅದಾಗದಿದ್ದಲ್ಲಿ, ನಾನೇ ಭೇಟಿಗೆ ಅನುಮತಿ ಕೋರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಪ್ರಧಾನಿ ಸಮಯ ನೀಡಿದರೆ ಭೇಟಿ ಮಾಡುತ್ತೇನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ನನ್ನ ಜೊತೆ ಬರುವುದಾದರೆ ಬರಬಹುದು ಎಂದರು.
ಯತ್ನಾಳ ಬೇರೆ ಉದ್ದೇಶದಿಂದ ಹೇಳಿಕೆ ನೀಡಿದ್ದಾರೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದಾರಲ್ಲಎಂಬ ಪ್ರಶ್ನೆಗೆ, ನಾನೇನು ಸಚಿವನಾಗಬೇಕಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾರ ಕಾಲನ್ನು ಹಿಡಿದಿಲ್ಲಎಂದರು.
ಬಿಜೆಪಿ ಕಟ್ಟಿದವ ನಾನು:
ಹಳ್ಳಿ, ಹಳ್ಳಿಗಳನ್ನೆಲ್ಲಸಂಚರಿಸಿ ನಾವು ಬಿಜೆಪಿ ಕಟ್ಟಿದ್ದೇವೆ. ಇವರಂತೆ ಸುಸಜ್ಜಿತ ಮನೆಯಲ್ಲಿಬಂದು ಕೂತಿಲ್ಲ. ಕೇರಳ, ಆಂಧ್ರಪ್ರದೇಶದಲ್ಲಿಉಸ್ತುವಾರಿ ವಹಿಸಿಕೊಂಡು ಇವರು ಎಷ್ಟು ಸ್ಥಾನಗಳಲ್ಲಿಬಿಜೆಪಿ ಗೆಲ್ಲಿಸಿದ್ದಾರೆ? ಬಿಜೆಪಿ ರಾಜ್ಯ ಅಧ್ಯಕ್ಷ ನಳೀನಕುಮಾರ ಕಟೀಲ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಇಂದಿನ ಪರಿಸ್ಥಿತಿಯಲ್ಲಿಮೋದಿ ಅವರ ಕಟ್ಟಾ ಅಭಿಮಾನಿಗಳು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.ಚಕ್ರವರ್ತಿ ಸೂಲಿಬೆಲೆ ಹೇಳಿರುವುದರಲ್ಲಿತಪ್ಪೇನಿಲ್ಲಎಂದು ಸೂಲಿಬೆಲೆ ಅವರನ್ನು ಸಮರ್ಥಿಸಿಕೊಂಡರು.