ಆ್ಯಪ್ನಗರ

ಪುರಸಭೆ ಚುನಾವಣೆ : 84 ನಾಮಪತ್ರ ಸಲ್ಲಿಕೆ

ವಿಜಯಪುರ : ಲೋಕಸಭೆ ಚುನಾವಣೆ ಕಾವು ಮುಗಿದಿದೆ. ಇನ್ನೇನೂ ರಿಸಲ್ಟ್‌ ಬರಬೇಕು ಅಷ್ಟೇ. ಅದರ ನಡುವೆಯೇ ಜಿಲ್ಲೆಯ ಮೂರು ಪುರಸಭೆಗೆ ಚುನಾವಣೆ ಘೋಷಣೆಯಾಗಿದ್ದರಿಂದ ಅಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಬಿಸಿಲಿನ ಭೀಕರತೆಯಷ್ಟೇ ಜೋರಾಗಿ ನಡೆದಿದೆ. ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದರಿಂದ ಸ್ಪರ್ಧಿಸುವ ಆಕಾಂಕ್ಷಿಗಳು ನಾನಾ ಪಕ್ಷಗಳ ಬಿ ಫಾರ್ಮ್‌ಗಾಗಿ ಪೈಪೋಟಿಗೆ ಇಳಿದಿದ್ದಾರೆ.

Vijaya Karnataka 16 May 2019, 5:00 am
ವಿಜಯಪುರ : ಲೋಕಸಭೆ ಚುನಾವಣೆ ಕಾವು ಮುಗಿದಿದೆ. ಇನ್ನೇನೂ ರಿಸಲ್ಟ್‌ ಬರಬೇಕು ಅಷ್ಟೇ. ಅದರ ನಡುವೆಯೇ ಜಿಲ್ಲೆಯ ಮೂರು ಪುರಸಭೆಗೆ ಚುನಾವಣೆ ಘೋಷಣೆಯಾಗಿದ್ದರಿಂದ ಅಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಬಿಸಿಲಿನ ಭೀಕರತೆಯಷ್ಟೇ ಜೋರಾಗಿ ನಡೆದಿದೆ. ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದ್ದರಿಂದ ಸ್ಪರ್ಧಿಸುವ ಆಕಾಂಕ್ಷಿಗಳು ನಾನಾ ಪಕ್ಷಗಳ ಬಿ ಫಾರ್ಮ್‌ಗಾಗಿ ಪೈಪೋಟಿಗೆ ಇಳಿದಿದ್ದಾರೆ.
Vijaya Karnataka Web municipal elections today filed nomination papers for the last day of filing nominations
ಪುರಸಭೆ ಚುನಾವಣೆ : 84 ನಾಮಪತ್ರ ಸಲ್ಲಿಕೆ


ಇದರ ನಡುವೆಯೂ ಕೂಡ ಕೆಲವರು ಬಿ ಫಾರ್ಮ್‌ ಇಲ್ಲದೆ ನಾಮಪತ್ರ ಸಲ್ಲಿಸಿದರೆ, ಇನ್ನು ಕೆಲವರು ಪಕ್ಷೇತರರಾಗಿ ತಮ್ಮ ಅದೃಷ್ಟ ಪಣಕ್ಕಿಡಲು ಮುಂದಾಗಿದ್ದಾರೆ. ಬುಧವಾರ ಜಿಲ್ಲೆಯ ಬಸವನಬಾಗೇವಾಡಿ, ತಾಳಿಕೋಟೆ ಹಾಗೂ ಇಂಡಿ ಪುರಸಭೆಯ ಒಟ್ಟು 69 ವಾರ್ಡ್‌ಗಳಿಗೆ ನಡೆಯುವ ಚುನಾವಣೆಗೆ ಬುಧವಾರ ಒಟ್ಟು 84ನಾಮಪತ್ರ ಸಲ್ಲಿಕೆಯಾಗಿವೆ. ಗುರುವಾರ ನಾಮಪತ್ರ ಸಲ್ಲಿಕೆ ಕೊನೆಗೊಳ್ಳಲಿದೆ ಸೆಂಚುರಿ ಮೀರಿದ ಉಮೇದುವಾರಿಕೆ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಇಂಡಿ ಪುರಸಭೆಗೆ ಕಾಂಗ್ರೆಸ್‌ 3, ಬಿಜೆಪಿ 7, ಜೆಡಿಎಸ್‌ 4 ಹಾಗೂ ಪಕ್ಷೇತರ 12 ಸೇರಿದಂತೆ 26 ನಾಮಪತ್ರ ಸಲ್ಲಿಕೆಯಾಗಿವೆ.

ಬಸವನಬಾಗೇವಾಡಿ ಪುರಸಭೆಗೆ ಕಾಂಗ್ರೆಸ್‌ 5, ಬಿಜೆಪಿ 10, ಜೆಡಿಎಸ್‌ 1 ಹಾಗೂ ಪಕ್ಷೇತರ 14 ಸೇರಿದಂತೆ 30 ನಾಮಪತ್ರ ಸಲ್ಲಿಕೆಯಾಗಿವೆ.

ತಾಳಿಕೋಟೆ ಪುರಸಭೆಗೆ ಕಾಂಗ್ರೆಸ್‌ 2 ಹಾಗೂ ಪಕ್ಷೇತರ 26 ಸೇರಿದಂತೆ 28 ನಾಮಪತ್ರ ಸಲ್ಲಿಕೆಯಾದವು.

ಇಂದು ನಾಮಪತ್ರ ಭರಾಟೆ

ಮೇ 16ರಂದು ನಾಮಪತ್ರ ಸಲ್ಲಿಕೆ ಕೊನೆಗಳ್ಳಲಿದೆ. ಇದುವರೆಗೂ ಮೂರೂ ಪುರಸಭೆಗಳಿಗೆ ಪ್ರಮುಖ ಪಕ್ಷಗಳಿಗಿಂತ ಪಕ್ಷೇತರರೇ ಹೆಚ್ಚು ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಚಿಂಚೋಳಿ, ಕುಂದಗೋಳ ವಿಧಾನಸಭೆ ಕ್ಷೇತ್ರ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರಿಂದ ಪುರಸಭೆ ಅಭ್ಯರ್ಥಿಗಳ ಆಯ್ಕೆಗೆ ಒತ್ತು ನೀಡಿರಲಿಲ್ಲ. ಆದರೆ ಬುಧವಾರ ತಮ್ಮ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಬಿರುಸಿನ ಚಟುವಟಿಕೆ ನಡೆಸಿದರು.

ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಇಡೀದಿನ ಬಾಗೇವಾಡಿಯಲ್ಲಿದ್ದು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಚಟುವಟಿಕೆ ನಡೆಸಿದರು. ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಕೂಡ ಫೀಲ್ಡಿಗಿಳಿದಿದ್ದು , ಟಿಕೆಟ್‌ ಹಂಚಿಕೆ ಕುರಿತು ದಿನಪೂರ್ತಿ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದರು.

ತಾಳಿಕೋಟೆ ಪುರಸಭೆಯಲ್ಲಿ ಬಿಜೆಪಿಗೆ ಅಧಿಕಾರ ಗಿಟ್ಟಿಸಿಕೊಡಬೇಕೆಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ರಣತಂತ್ರ ರೂಪಿಸಿದ್ದಾರೆ. ಪಕ್ಷೇತರರೇ ಹೆಚ್ಚು ಆಯ್ಕೆಯಾಗಿದ್ದ ಈ ಪುರಸಭೆಯಲ್ಲಿ ಈ ಬಾರಿ ಬಿಜೆಪಿ ಆಡಳಿತ ಬಾವುಟ ಹಾರಿಸಲು ನಡಹಳ್ಳಿ ಪ್ರಬಲ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಿಸುವ ತಂತ್ರ ಅನುಸರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ