ಆ್ಯಪ್ನಗರ

ಗ್ರಾಪಂ ಅಧ್ಯಕ್ಷನ ಕೊಲೆ : ಆರು ಆರೋಪಿಗಳ ಅರೆಸ್ಟ್‌

ಸಿಂದಗಿ : ಪಟ್ಟಣದಲ್ಲಿ ಹಾಡ-ಹಗಲೇ ಗ್ರಾಪಂ ಅಧ್ಯಕ್ಷನ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪ್ರಕರಣದ 6 ಜನ ಆರೋಪಿಗಳನ್ನು ಸಿಂದಗಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

Vijaya Karnataka 25 Oct 2018, 9:13 pm
ಸಿಂದಗಿ : ಪಟ್ಟಣದಲ್ಲಿ ಹಾಡ-ಹಗಲೇ ಗ್ರಾಪಂ ಅಧ್ಯಕ್ಷನ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಪ್ರಕರಣದ 6 ಜನ ಆರೋಪಿಗಳನ್ನು ಸಿಂದಗಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Vijaya Karnataka Web murder of grapam president arrest of six accused
ಗ್ರಾಪಂ ಅಧ್ಯಕ್ಷನ ಕೊಲೆ : ಆರು ಆರೋಪಿಗಳ ಅರೆಸ್ಟ್‌


ಸಿಂದಗಿ ತಾಲೂಕಿನ ಮುರುಡಿ ಗ್ರಾಮದ ಗ್ರಾಪಂ ಸದಸ್ಯ ಗೌಡಪ್ಪ ಗೊಲ್ಲಾಳಪ್ಪ ಜಂಬರಖಾನೆ(35), ಆತುಂಬಾಷ್ಯಾ ಮಕ್ತುಮಸಾಬ ಕುರಿ(ವಾಲಿಕಾರ)(70), ಆತನ ಮಕ್ಕಳಾದ ಲಾಲಸಾಬ್‌ ಆತುಂಬಾಷ್ಯಾ ಕುರಿ(ವಾಲಿಕಾರ)(30), ಮಕ್ತುಂಪಟೇಲ ಆತುಂಬಾಷ್ಯಾ ಕುರಿ(ವಾಲಿಕಾರ) (37), ಮಂಜುನಾಥ ಸೋಮಣ್ಣ ಮಾದರ(ಪಾಟೀಲ)(25) ಹಾಗೂ ಸುಂಗಠಾಣ ಗ್ರಾಮದ ಗ್ರಾಪಂ ಸದಸ್ಯ ಬಸವರಾಜ ಹದಗಲ್ಲ (43) ಬಂಧಿತ ಆರೋಪಿಗಳು.

ಇವೆಲ್ಲ ಕಳೆದ ಅ.10ರಂದು ಸಿಂದಗಿ ಪಟ್ಟಣದಲ್ಲಿ ಸುಂಗಠಾಣ ಗ್ರಾಪಂ ಅಧ್ಯಕ್ಷ ಗೊಲ್ಲಾಳಪ್ಪ ಹದಗಲ್‌ ಎಂಬಾತನನ್ನು ಬಹಿರಂಗವಾಗಿಯೇ ಕೊಲೆಗೈದು ಪರಾರಿಯಾಗಿದ್ದರು. ಸಿಂದಗಿ ಪೊಲೀಸರು ಪ್ರಕರಣದ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದರು. ಅ.18ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಅವರು ನೀಡಿದ ಸುಳಿವಿನ ಆಧಾರದ ಮೇಲೆ ತಲೆಮರೆಸಿಕೊಂಡಿದ್ದ ಬಾಕಿ ಆರೋಪಿಗಳನ್ನು ಮಹಾರಾಷ್ಟ್ರದ ಸುಸಲಾದ್‌ ಬಳಿ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.

ಬಂಧಿತರಲ್ಲಿ ಕುರಿ ಕುಟುಂಬ ಹಾಗೂ ಕೊಲೆಗೀಡಾದ ಗ್ರಾಪಂ ಅಧ್ಯಕ್ಷ ಗೊಲ್ಲಾಳಪ್ಪನೊಂದಿಗೆ ಆಸ್ತಿ ಕಲಹವಿತ್ತು. ಇದರೊಟ್ಟಿಗೆ ಇತರೇ ಆರೋಪಿಗಳಾದ ಗ್ರಾಪಂ ಸದಸ್ಯ ಗೌಡಪ್ಪ ಜಂಬರಖಾನೆ ಹಾಗೂ ಬಸವರಾಜ ಹುಡೇದ ಎಂಬುವರೊಂದಿಗೆ ರಾಜಕೀಯ ದ್ವೇಷವಿತ್ತು ಇದರಿಂದಾಗಿ ಕುಪಿತಗೊಂಡ ಆರೋಪಿಗಳು ಸಿಂದಗಿ ಪಟ್ಟಣದ ಹೊಟೇಲ್‌ನಲ್ಲಿದ್ದ ಗ್ರಾಪಂ ಅಧ್ಯಕ್ಷನನ್ನು ಹೊರಗಡೆ ಕರೆತಂದು ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದರು. ಈ ಪ್ರಕರಣ ನಡೆದ ಬಳಿಕ ಗ್ರಾಮದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಜನರ ಭೀತಿ ಅರಿತ ಪೊಲೀಸ್‌ ಅಧಿಕಾರಿಗಳ ತಂಡ ಸತತ 15 ದಿನಗಳ ಕಾಲ ಆರೋಪಿಗಳಿಗಾಗಿ ಶೋಧ ನಡೆಸಿ, ಕಳೆದ ಅ.18ರಂದು ಇಬ್ಬರನ್ನು ಬಂಧಿಸಿದ್ದರು. ಬಳಿಕ ಬುಧವಾರ ನಾಲ್ವರನ್ನು ಮಹಾರಾಷ್ಟ್ರದಲ್ಲಿ ಬಂಧಿಸುವ ಮೂಲಕ ಜನರಲ್ಲಿ ಮೂಡಿದ್ದ ಆತಂಕ ನಿವಾರಿಸುವ ಮೂಲಕ ಕೊಲೆ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ