ಆ್ಯಪ್ನಗರ

ಸಚಿವ ಸ್ಥಾನಕ್ಕೆ ಲಾಬಿ ನಡೆಸಲ್ಲ

ವಿಜಯಪುರ: ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು. ಆದರೆ ನಾನು ಮಾತ್ರ ಸಚಿವ ಸ್ಥಾನಕ್ಕೆ ಲಾಬಿ ನಡೆಸಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 50 ವರ್ಷದ ಅನುಭವವಿದೆ. ಅವರೇ ಈ ವಿಷಯದಲ್ಲಿಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

Vijaya Karnataka 10 Jan 2020, 5:00 am
ವಿಜಯಪುರ: ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು. ಆದರೆ ನಾನು ಮಾತ್ರ ಸಚಿವ ಸ್ಥಾನಕ್ಕೆ ಲಾಬಿ ನಡೆಸಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 50 ವರ್ಷದ ಅನುಭವವಿದೆ. ಅವರೇ ಈ ವಿಷಯದಲ್ಲಿಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
Vijaya Karnataka Web not lobbying for ministerial position
ಸಚಿವ ಸ್ಥಾನಕ್ಕೆ ಲಾಬಿ ನಡೆಸಲ್ಲ


ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಸಚಿವ ಸ್ಥಾನವಿಲ್ಲದೆಯೇ ನಗರದಲ್ಲಿಅಭಿವೃದ್ಧಿ ಪರ್ವ ಕಾಲವನ್ನೇ ಆರಂಭಿಸಿದ್ದೇನೆ. ಅಭಿವೃದ್ಧಿ ಕಾರ್ಯ ಬಿಟ್ಟು ಸಚಿವ ಸ್ಥಾನಕ್ಕೆ ದಿನ ಬೆಳಗಾದರೆ ಸಿಎಂ ಮನೆಗೆ ಹೋಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ಈ ವಿಷಯದಲ್ಲಿನಾನು ಮಾತನಾಡುವುದಿಲ್ಲಎಂದರು.

ಸಚಿವ ಸ್ಥಾನಕ್ಕಿಂತ ಸರಕಾರ ಸ್ಥಿರವಾಗಿರಬೇಕು. ಪ್ರತಿಪಕ್ಷದಲ್ಲಿದ್ದರೆ, ಅಭಿವೃದ್ದಿ ಕಾರ್ಯಗಳು ಆಗುತ್ತಿರಲಿಲ್ಲ. ಈಗ ಸರಕಾರ ನಮ್ಮದೇ ಇದ್ದುದರಿಂದ ಅಧಿಕಾರಿಗಳು ಮಾತು ಕೇಳುತ್ತಿದ್ದಾರೆ. ಮೇಲಾಗಿ ಯುದ್ಧೋಪಾದಿಯಲ್ಲಿಕೆಲಸಗಳು ನಡೆದಿವೆ ಎಂದರು.

ವಿಜಯಪುರ ನಗರದ ಸಮಗ್ರ ಅಭಿವೃದ್ಧಿ ಕನಸು ಹೊತ್ತು 500 ಕೋಟಿ ರೂ.ಅನುದಾನದಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ನಾನಾ ಅಭಿವೃದ್ಧಿ ಕಾರ್ಯಗಳಿಗೆ ಜ.16ರಂದು ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.

ವಿಡಿಎದಿಂದ ಉತ್ತಮ ಕೆಲಸ :

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಉತ್ತಮ ಕಾರ್ಯಗಳು ನಡೆದಿವೆ. ಕನಕದಾಸ ಬಡಾವಣೆ ಲೇಔಟ್‌ ಅಭಿವೃದ್ಧಿಪಡಿಸಿದ ಬಳಿಕ, ವಿಡಿಎ ಯಾವುದೇ ಲೇಔಟ್‌ ಅಭಿವೃದ್ಧಿಪಡಿಸಿರಲಿಲ್ಲ. ಈಗ ಮತ್ತೆ ಹೊಸ ಲೇಔಟ್‌ ಅಭಿವೃದ್ಧಿಪಡಿಸುತ್ತಿದೆ ಎಂದರು. ಅಭಿವೃದ್ಧಿ ಪಡಿಸಿದ ಲೇಔಟ್‌ನಲ್ಲಿನೈಜ ಫಲಾನುಭವಿಗಳಿಗೆ ಪ್ಲಾಟ್‌ಗಳನ್ನು ಪಾರದರ್ಶಕವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅತಿಕ್ರಮಣ ತೆರವು:

ಮಾಜಿ ಶಾಸಕ ಇಲ್ಲವೇ ಕಾರ್ಪೋರೇಟರ್‌ಗಳಿರಲಿ. ಯಾರೇ ಅತೀಕ್ರಮಣ ಮಾಡಿದ್ದರೆ, ಪ್ರಾಮಾಣಿಕವಾಗಿ ತೆರವುಗೊಳಿಸಿಕೊಳ್ಳಬೇಕು. ಒಂದು ವೇಳೆ ತೆರವು ಮಾಡಿಕೊಳ್ಳದಿದ್ದಲ್ಲಿ, ನಿರ್ದಾಕ್ಷಿಣ್ಯವಾಗಿ ತೆರುವುಗೊಳಿಸಲಾಗುವುದು ಎಂದರು.

ಹೊಸ ಕ್ರೀಡಾಂಗಣ ನಿರ್ಮಾಣ :

ಈಗಿನ ಜಿಲ್ಲಾಕ್ರೀಡಾಂಗಣದಲ್ಲಿಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಾಣವಾದ ಬಳಿಕ, ಅಲ್ಲಿಮದ್ದು ಸುಡುವ ಹಾಗಿಲ್ಲ. ಹಾಗಾಗಿ ಅದಕ್ಕೆ ಪರ್ಯಾಯವಾಗಿ ಬಿಎಲ್‌ಡಿಇ ರಸ್ತೆಯಲ್ಲಿನೇತಾಜಿ ಸುಭಾಸ್‌ಚಂದ್ರ ಬೋಸ್‌ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಈ ಕ್ರೀಡಾಂಗಣಕ್ಕೆ 20 ಕೋಟಿ ರೂ. ಅನುದಾನದ ಅಗತ್ಯವಿದೆ. ಇದಕ್ಕೆ ಸರಕಾರದ ಮಟ್ಟದಲ್ಲಿಪ್ರಯತ್ನ ಮಾಡಿ, ಹೊಸ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು. ಕೇಂದ್ರ ಬಸ್‌ ನಿಲ್ದಾಣದಿಂದ ನವಬಾಗ ಮಾರ್ಗದ ರಸ್ತೆಗೆ ಎಪಿಜೆ ಅಬ್ದುಲ್‌ ಕಲಾಂ ಸೇರಿದಂತೆ ನಗರದ ಪ್ರಮುಖ ರಸ್ತೆಗಳಿಗೆ ಗಣ್ಯ ವ್ಯಕ್ತಿಗಳ ಹೆಸರು ನಾಮಕರಣ ಮಾಡಲಾಗುವುದು ಎಂದರು.

ಮೆಡಿಕಲ್‌ ಕಾಲೇಜ್‌ :

ಜಿಲ್ಲಾಸ್ಪತ್ರೆಯಲ್ಲಿಸರಕಾರಿ ವೈದ್ಯಕೀಯ ಕಾಲೇಜ್‌ ಆರಂಭಿಸಬೇಕೆಂದು ಸರಕಾರಕ್ಕೆ ಪತ್ರ ನೀಡಿದ್ದೇನೆ. ಬರುವ ಬಜೆಟ್‌ನಲ್ಲಿಅದಕ್ಕೆ ಅನುದಾನ ಘೋಷಿಸುವ ಮೂಲಕ ಸರಕಾರ ವಿಜಯಪುರದಲ್ಲಿಸರಕಾರಿ ವೈದ್ಯಕೀಯ ಕಾಲೇಜ್‌ ಆರಂಭಿಸಲಿದೆ ಎಂದರು. ಸರಕಾರ ಬಿಳಿಜೋಳಕ್ಕೆ 4 ಸಾವಿರ ರೂ. ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದ ಯತ್ನಾಳ, ಈ ಜೋಳವನ್ನು ಪಡಿತರ ವ್ಯವಸ್ಥೆಯಲ್ಲಿವಿತರಿಸಲು ಕ್ರಮ ಕೈಗೊಳ್ಳಬೇಕೆಂದರು.

ಸುಧಾರಿಸಿದ ಜನತೆ :

ನಗರದಲ್ಲಿಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಪೊಲೀಸರು, ಟ್ರಾಫಿಕ್‌ ವ್ಯವಸ್ಥೆ ಸುಧಾರಿಸಿದರು. ಇದರೊಟ್ಟಿಗೆ ನಗರದ ಜನತೆಯೂ ಟ್ರಾಫಿಕ್‌ ಸಿಗ್ನಲ್‌ಗಳನ್ನು ಪಾಲಿಸುತ್ತಿದ್ದಾರೆ ಎಂದರು.

--------

ಗೂಂಡಾಗಳ ಪುರ

ಹಿಂದಿನ ಶಾಸಕರ ಅವಧಿಯಲ್ಲಿವಿಜಯಪುರ ಗೂಂಡಾಗಳ ಊರಾಗಿತ್ತು. ಅವರ ಪ್ರೋತ್ಸಾಹದಿಂದ ಗೂಂಡಾಗಳೇ ಮರಿ ದಾವೂದ್‌ ಇಬ್ರಾಹಿಂನಂತೆ ವರ್ತಿಸುತ್ತಿದ್ದರು. ವಿಜಯಪುರದಲ್ಲಿಈಗ ಆ ಸ್ಥಿತಿಯಿಲ್ಲ. ಗುಂಟಾ ಪ್ಲಾಟ್‌ ವಹಿವಾಟಿನಡಿ ಬಡವರ ಶೋಷಣೆಯಾಗುತ್ತಿತ್ತು. ಆದರೆ ನಾನು ಶಾಸಕನಾದ ನಂತರ ಗೂಂಡಾಗಳನ್ನು ಪೊಲೀಸರು ಬಗ್ಗುಬಡಿದಿದ್ದಾರೆ. ಬಡವರಿಗೂ ಕಡಿಮೆ ದರದಲ್ಲಿಎನ್‌ಎ ಪ್ಲಾಟ್‌ಗಳು ಸಿಗುವಂತಾಗಬೇಕೆಂದು ಸೂಚಿಸಿದ್ದಾಗಿ ಯತ್ನಾಳತಿಳಿಸಿದರು.

--

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ