ಆ್ಯಪ್ನಗರ

ಸಮ್ಮಿಶ್ರ ಸರಕಾರ ಬಿದ್ದರೆ, ಸರಕಾರ ರಚಿಸುವ ಬಗ್ಗೆ ನೋಡೋಣ: ರಮೇಶ್‌ ಜಿಗಜಿಣಗಿ

ನನಗೆ ಅಧಿಕಾರದ ಆಸೆ ಇಲ್ಲ, ಸಚಿವ ಸ್ಥಾನ ಕೊಡದಿರುವುದಕ್ಕೆ ಅಸಮಾಧಾನ ಆಗಿಲ್ಲ, ಕೊಟ್ಡರೂ ಬೀಗುತ್ತಿರಲಿಲ್ಲ. ನಾನು ಕೇಳುವುದೂ ಇಲ್ಲ. ಕೊಟ್ಟರೆ ಉತ್ತಮ ಕೆಲಸ ಮಾಡುತ್ತೇನೆ ಎಂದು ಸಂಸದರು ತಿಳಿಸಿದರು.

Vijaya Karnataka Web 3 Jun 2019, 6:10 pm
ವಿಜಯಪುರ: ಜಿಲ್ಲೆಯಲ್ಲಿ ಅಭೂತಪೂರ್ವ ಚುನಾವಣೆ ಆಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಜನ ರಾಜ್ಯ ಸರಕಾರದ ಕೆಲಸವನ್ನೂ ನನಗೆ ತರುತ್ತಾರೆ, ನಾಉ ಕೇಂದ್ರ ಸರಕಾರದ ವ್ಯಾಪ್ತಿಯ ಯೋಜನೆಗಳನ್ನು ಜಿಲ್ಲೆಗೆ ತರುತ್ತೇನೆ ಎಂದು ವಿಜಯಪುರ ಸಂಸದ ರಮೇಶ್‌ ಜಿಗಜಿಣಗಿ ತಿಳಿಸಿದ್ದಾರೆ.
Vijaya Karnataka Web ರಮೇಶ್‌ ಜಿಗಜಿಣಗಿ
ರಮೇಶ್‌ ಜಿಗಜಿಣಗಿ


ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜಿಲ್ಲೆಯ ಜನತೆಗೆ ಉದ್ಯೋಗ ಕೊಡುವ ಕೈಗಾರಿಕೆ ತರುತ್ತೇನೆ. ವಿಮಾನ ನಿಲ್ದಾಣಕ್ಕೆ ರಾಜ್ಯ ಸರಕಾರ ತನ್ನ ಪಾಲಿನ ಹಣ ಕೊಡದಿರುವುದಕ್ಕೆ ನನೆಗುದಿಗೆ ಬಿದ್ದಿದೆ. ಇವರು 50 ಕೋಟಿ ಹಣ ಕೊಡದಿದ್ದರೂ ನಾನು ಬಿಡುವುದಿಲ್ಲ ಎಂದರು.

ನನಗೆ ಅಧಿಕಾರದ ಆಸೆ ಇಲ್ಲ, ಸಚಿವ ಸ್ಥಾನ ಕೊಡದಿರುವುದಕ್ಕೆ ಅಸಮಾಧಾನ ಆಗಿಲ್ಲ, ಕೊಟ್ಡರೂ ಬೀಗುತ್ತಿರಲಿಲ್ಲ. ನಾನು ಕೇಳುವುದೂ ಇಲ್ಲ. ಕೊಟ್ಟರೆ ಉತ್ತಮ ಕೆಲಸ ಮಾಡುತ್ತೇನೆ ಎಂದು ಸಂಸದರು ತಿಳಿಸಿದರು.

ಸಮ್ಮಿಶ್ರ ಸರಕಾರದ ತಂಟೆಗೆ ನಾವು ಹೋಗುವುದಿಲ್ಲ, ತಾನಾಗಿಯೇ ಬಿದ್ದರೆ ನೋಡೋಣ. ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲವೇ ಇಲ್ಲ ಎಂದು ಸಂಸದ ರಮೇಶ್‌ ಜಿಣಜಿಣಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ