ಆ್ಯಪ್ನಗರ

ಆಡಿಯೋ ಲೀಕ್ ಆದ ಮೇಲೆ ಆಪರೇಶನ್ ಕಮಲ ಅಧಿಕೃತವಾಗಿದೆ: ಎಂ.ಬಿ. ಪಾಟೀಲ್‌

ಸಿಎಂ ಯಡಿಯೂರಪ್ಪ, ಅಮಿತ್ ಶಾ ಹಾಗೂ ಬಿಜೆಪಿಯವರು ಸೇರಿ ಆಪರೇಶನ್ ಕಮಲ ಮಾಡಿದ್ದು ಓಪನ್ ಸೀಕ್ರೆಟ್ ಇತ್ತು. ಆಡಿಯೋ ಲೀಕ್ ಆದ ಮೇಲೆ ಅಧಿಕೃತವಾಗಿದೆ ಎಂದು ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಇದಕ್ಕೆ ಕಾರಣ ಎಂಬುದನ್ನು ತಳ್ಳಿಹಾಕಿದ್ದಾರೆ.

Vijaya Karnataka Web 4 Nov 2019, 3:22 pm
ವಿಜಯಪುರ: ಸಿಎಂ ಯಡಿಯೂರಪ್ಪ ಆಡಿಯೋ ಲೀಕ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್‌, ಆಡಿಯೋದಲ್ಲಿ ಯಡಿಯೂರಪ್ಪ ಸತ್ಯವನ್ನೇ ಹೇಳಿದ್ದಾರೆ. ಸಿಎಂ ಯಡಿಯೂರಪ್ಪ, ಅಮಿತ್ ಶಾ ಹಾಗೂ ಬಿಜೆಪಿಯವರು ಸೇರಿ ಆಪರೇಶನ್ ಕಮಲ ಮಾಡಿದ್ದು ಓಪನ್ ಸೀಕ್ರೆಟ್ ಇತ್ತು. ಆಡಿಯೋ ಲೀಕ್ ಆದ ಮೇಲೆ ಅಧಿಕೃತವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
Vijaya Karnataka Web mb patil


ಆಡಿಯೊ ಬಾಂಬ್‌: ತಮ್ಮ ಸಭೆಯಲ್ಲೇ ನಡೆದಿದೆಯೆಂದು ನಳೀನ್‌ ಒಪ್ಪಿಕೊಂಡಿದ್ದಾರೆಂದ ಉಗ್ರಪ್ಪ

ಇಲ್ಲಿಯವರೆಗೆ ಬಿಜೆಪಿಯವರು ಆತ್ಮ ವಂಚ‌ನೆ ಮಾಡಿಕೊಳ್ಳುತ್ತಿದ್ದರು‌. ಸದ್ಯ ಆಡಿಯೋ ಲೀಕ್‌ ಆದ ಬಳಿಕ ಅವರ ಬಣ್ಣ ಬಯಲಾಗಿದೆ. ಹೈಕಮಾಂಡ್ ನಿಂದ ಬಿಎಸ್‌ವೈಗೆ ಬೆದರಿಕೆ ಬಂದ ಮೇಲೆ ಮತ್ತೆ ಉಲ್ಟಾ ಹೊಡೆದಿದ್ದಾರೆ. ಜನರಿಗೆ ಅನಧಿಕೃವಾಗಿ ಗೊತ್ತಿದ್ದನ್ನು ಈಗ ಸಿಎಂ ಯಡಿಯೂರಪ್ಪ ಅಧಿಕೃತಗೊಳಿಸಿದ್ದಾರೆ ಎಂದು ವಿಜಯಪುರದಲ್ಲಿ ಕಾಂಗ್ರೆಸ್‌ ನಾಯಕ ಎಂ.ಬಿ.ಪಾಟೀಲ್‌ ಬಿಜೆಪಿ ವಿರುದ್ಧ ಕುಟುಕಿದ್ದಾರೆ.

ಸುಪ್ರೀಂ ಅಂಗಳದಲ್ಲಿ 'ಬಿಎಸ್‌ವೈ ಆಡಿಯೋ ಬಾಂಬ್' ಸಿಡಿಸಿದ ಕಾಂಗ್ರೆಸ್! ವಿಚಾರಣೆಗೆ ಹೊಸ ಪೀಠ ರಚನೆ?

ಇನ್ನು, ಸಿಎಂ ಯಡಿಯೂರಪ್ಪ ಆಡಿಯೋ ಲೀಕ್ ಪ್ರಕರಣದ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಆರೋಪ ವಿಚಾರದ ಬಗ್ಗೆ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಹೇಳಿಕೆ ನೀಡಿದ್ದು, ಇದು ಚಿಲ್ಲರೆ ರಾಜಕಾರಣ ಎಂದಿದ್ದಾರೆ. ಅಲ್ಲದೆ, ಬಿಜೆಪಿಯಿಂದ ಟಿಕೆಟ್ ಕೇಳಿದವರು ಈ ಕೆಲಸ ಮಾಡಿದ್ದಾರೆ ಎಂದೂ ಕಾಂಗ್ರೆಸ್‌ ನಾಯಕ ಹೇಳಿದ್ದಾರೆ.

ತಾಕತ್ತಿದ್ರೆ ಉಪಚುನಾವಣೆ ಎದುರಿಸಿ, ಸಿದ್ದರಾಮಯ್ಯಗೆ ಯಡಿಯೂರಪ್ಪ ಸವಾಲ್‌

ಇನ್ನೊಂದೆಡೆ, ಸಿದ್ದರಾಮಯ್ಯ ಒಬ್ಬ ಬ್ಲಾಕ್ ಮೇಲರ್ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡದ ಎಂ ಬಿ ಪಾಟೀಲ್, ಶೋಭಾ ಕರಂದ್ಲಾಜೆ ದೊಡ್ಡವರು. ಅವರ ಬಗ್ಗೆ ಮಾತನಾಡಲ್ಲ ಎಂದಷ್ಟೇ ಹೇಳಿ ಪ್ರತಿಕ್ರಿಯೆಗೆ ನಿರಾಕರಿಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂಮಾಜಿ ಸಚಿವ ಎಂ.ಬಿ. ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ