ಆ್ಯಪ್ನಗರ

ಕಾಲುವೆಗೆ ನೀರು ಹರಿಸಲು ಆದೇಶ

ಮುಳವಾಡ ಏತನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸುವದಕ್ಕೆ ಆದೇಶಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಅವರ ನಿರ್ಧಾರವನ್ನು ಶಾಸಕ ಎಂ.ಬಿ.ಪಾಟೀಲ ಸ್ವಾಗತಿಸಿ, ಅಭಿನಂದಿಸಿದ್ದಾರೆ.

Vijaya Karnataka Web 19 Apr 2020, 5:00 am
ವಿಜಯಪುರ: ಮುಳವಾಡ ಏತನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸುವದಕ್ಕೆ ಆದೇಶಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಅವರ ನಿರ್ಧಾರವನ್ನು ಶಾಸಕ ಎಂ.ಬಿ.ಪಾಟೀಲ ಸ್ವಾಗತಿಸಿ, ಅಭಿನಂದಿಸಿದ್ದಾರೆ.
Vijaya Karnataka Web M B PATIL-1


ಕೊರೊನಾ ಹಿನ್ನಲೆಯಲ್ಲಿಎಲ್ಲಚಟುವಟಿಕೆಗಳು ಸ್ತಬ್ದವಾಗಿದ್ದರೂ ಜನ, ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ವೃದ್ಧಿಯಿಂದ ಕೃಷಿ ಚಟುವಟಿಕೆಗಳಿಗೆ ಇದು ಸಹಕಾರಿ ಆಗಲಿದೆ. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಆರಂಭಿಸಿದ್ದ ಎಲ್ಲಕಾಲುವೆಗಳು ಇದೀಗ ನೀರು ಹರಿಸಲು ಸಜ್ಜುಗೊಂಡಿವೆ. ಆದರೆ ತಾಂತ್ರಿಕ ಕಾರಣಗಳಿಂದ ವಿಜಯಪುರ ಮುಖ್ಯ ಕಾಲುವೆಯಿಂದ ಕೂಡಗಿ ರೇಲ್ವೆ ಕ್ರಾಸಿಂಗ್‌ ಕಾಮಗಾರಿ ವಿಳಂಬಗೊಂಡಿದ್ದು, ಹಿಂದಿನ ಮೂರು ವರ್ಷ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಪಂಪ್‌ ಅಳವಡಿಸಿ, ಪೈಪ್‌‍ಗಳ ಮೂಲಕ ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸಲಾಗಿತ್ತು. ಇದೀಗ ಶಾಶ್ವತವಾಗಿ ಆ ಕಾಮಗಾರಿ ಮುಕ್ತಾಯಗೊಂಡಿದ್ದು, ವಿಜಯಪುರ ಮುಖ್ಯ ಕಾಲುವೆ ಸೇರಿದಂತೆ ಬಸವನಬಾಗೈವಾಡಿ, ಹೂವಿನಹಿಪ್ಪರಗಿ ಹಾಗೂ ತಿಡಗುಂದಿ ಶಾಖಾ ಕಾಲುವ್ಲೆಗಳಿಗೆ ಇನ್ನು ಮುಂದೆ ಸರಾಗವಾಗಿ ನೀರು ಹರಿಸಲು ಯಾವುದೆ ಅಡ್ಡಿಯಿಲ್ಲಎಂದಿದ್ದಾರೆ.

ಪ್ರಾದೇಶಿಕ ಆಯುಕ್ತರ ಆದೇಶದ ನಂತರ ಸೋಮವಾರದಿಂದ ನೀರು ಹರಿಸುವ ಕಾರ್ಯ ಆರಂಭವಾಗಲಿದ್ದು, ಆರಂಭದ 15 ದಿನಗಳ ಕಾಲ ವಿಜಯಪುರ ಮುಖ್ಯ ಕಾಲುವೆ 70ನೇ ಕಿ.ಮೀ ವರೆಗೆ ನೀರು ಹರಿಸಿ, ಬಸವನಬಾಗೇವಾಡಿ, ಹೂವಿನಹಿಪ್ಪರಗಿ ಹಾಗು ತಿಡಗುಂದಿ ಶಾಖಾ ಕಾಲುವೆಗಳಿಗೆ ಹಾಗೂ ಮಲಘಾಣ ಪಶ್ಚಿಮ ಕಾಲುವೆಗೆ ನೀರು ಹರಿಸಿ, ಸುತ್ತಲಿನ ಎಲ್ಲಕೆರೆಗಳನ್ನು ತುಂಬಿಸಲಾಗುವದು ಹಾಗೂ ನಂತರದಲ್ಲಿಉಳಿದ ಭಾಗಗಳಿಗೆ ವಾರಾಬಂದಿ ಪ್ರಕಾರ ನೀರು ಹರಿಸಲಾಗುವದು ಎಂದು ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ರೈಲ್ವೆ ಅನುಮತಿಗೆ ಒತ್ತಾಯ
ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸಿ ಕೆರೆ ಹಾಗೂ ಬಾಂದಾರಗಳನ್ನು ತುಂಬಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿರೈಲ್ವೆ ಇಲಾಖೆಯವರು ಕೆಬಿಜೆಎನ್‌‍ಎಲ್‌‍ಗೆ ಅನುಮತಿ ನೀಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಕೃಷ್ಣಾ ಭೋಸ್ಲೆರೈಲ್ವೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಜಂಟಿ ಹೇಳಿಕೆ ನೀಡಿದ ಅವರು, ಕೂಡಗಿಯ ಬಳಿ ಹಾಯ್ದು ಹೋಗಿರುವ ರೈಲ್ವೆ ಕ್ರಾಸಿಂಗ್‌ ಕೆಳಗಡೆ ಕಾಲುವೆಯಲ್ಲಿಬಾಕ್ಸ ಪುಸ್ಸಿಂಗ್‌ ಕಾಮಗಾರಿ ಮುಕ್ತಾಯಗೊಂಡಿದ್ದು ಸುತ್ತಲೂ ಸಿಮೆಂಟ್‌ ಕಾಂಕ್ರೇಟ್‌ ಬೆಡ್‌ ಕೂಡಾ ಹಾಕಿದ್ದಾರೆ ಈಗ ನೀರು ಬಿಡಲು ಯಾವುದೆ ತೊಂದರೆ ಇಲ್ಲ. ಆದರೆ ಕೆಬಿಜೆಎನ್‌‍ಎಲ್‌ ಅಧಿಕಾರಿಗಳನ್ನು ಕೇಳಿದರೆ ರೈಲ್ವೆ ಇಲಾಖೆಯವರು ನೀರು ಹರಿಸಲು ಅನುಮತಿ ನೀಡಿದ ತಕ್ಷಣ ಕಾಲುವೆಗೆ ನೀರು ಹರಿಸಲಾಗುವುದು ಎಂದು ಹೇಳುತ್ತಿದ್ದಾರೆ ಈಗ ರೈಲ್ವೆ ಇಲಾಖೆಯ ಅನುಮತಿ ಮಾತ್ರ ಬಾಕಿಯಿದೆ. ಹಳ್ಳಿಗಳಲ್ಲಿಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳು ಬಿರು ಬೇಸಿಗೆಯಲ್ಲಿಖಾಲಿಯಾಗಿವೆ. ಇದರಿಂದ ಜಾನುವಾರುಗಳು ಹಾಗೂ ಜನತೆ ಪರದಾಡುವಂತಾಗಿದೆ. ಈ ಮೊದಲೇ ಕೆರೆಗಳಿಗೆ ನೀರು ತುಂಬಿಸಬೇಕಾಗಿತ್ತು. ಆದರೆ ಕೂಡಗಿಯ ಬಳಿ ರೈಲ್ವೆ ಹಳಿಯ ಕೆಳಗಡೆ ಕಾಲುವೆಯಲ್ಲಿಬಾಕ್ಸ ಪುಸ್ಸಿಂಗ್‌ ಕಾಮಗಾರಿ ವಿಳಂಬವಾಗಿದ್ದರಿಂದ ಕಾಲುವೆಗೆ ನೀರು ಹರಿಸಲಾಗಲಿಲ್ಲ. ಈಗ ಎಲ್ಲಾಕೆಲಸವು ಮುಕ್ತಾಯಗೊಂಡಿದೆ. ಹಾಗಾಗಿ ರೈಲ್ವೆ ಅಧಿಕಾರಿಗಳು ವಿಳಂಬ ಮಾಡಿದರೆ ವಿಜಯಪುರ ರೈಲ್ವೆ ನಿಲ್ದಾಣ ಆವರಣದಲ್ಲಿಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ