ಆ್ಯಪ್ನಗರ

ಖರ್ಜೂರ ಮಾರಾಟ ಜೋರು

ವಿಜಯಪುರ : ರಂಜಾನ್‌ ಮಾಸಾಂತ್ಯ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ಎಲ್ಲೆಡೆ ರೋಜಾ (ಉಪವಾಸ) ನಿರತರು ಪ್ರಾರ್ಥನೆ ಸಲ್ಲಿಸಿ ಖರ್ಜೂರಗಳ ಮೊರೆ ಹೋಗುತ್ತಾರೆ.

Vijaya Karnataka 21 May 2018, 5:00 am
ವಿಜಯಪುರ : ರಂಜಾನ್‌ ಮಾಸಾಂತ್ಯ ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ಎಲ್ಲೆಡೆ ರೋಜಾ (ಉಪವಾಸ) ನಿರತರು ಪ್ರಾರ್ಥನೆ ಸಲ್ಲಿಸಿ ಖರ್ಜೂರಗಳ ಮೊರೆ ಹೋಗುತ್ತಾರೆ.
Vijaya Karnataka Web palm sale louder
ಖರ್ಜೂರ ಮಾರಾಟ ಜೋರು


ಈ ಹಿನ್ನೆಲೆಯಲ್ಲಿ ರಂಜಾನ್‌ ಹಬ್ಬದ ನಿಮಿತ್ತ ಮೆಕ್ಕಾ, ಮದೀನಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಇರಾನ್‌, ಕಾಶ್ಮೀರ ಹೀಗೆ ವಿಶ್ವದ ನಾನಾ ಭಾಗಗಳಿಂದ ಪೌಷ್ಟಿಕಾಂಶಯುಕ್ತ ನಾನಾ ತಳಿಯ ಖರ್ಜೂರಗಳು ನಗರಕ್ಕೆ ಬರಲಾರಂಭಿಸಿವೆ.

ರಂಜಾನ್‌ ಹಬ್ಬದ ನಿಮಿತ್ತ ಮೇ 17ರಿಂದ ಮುಸ್ಲಿಂ ಬಾಂಧವರು ಉಪವಾಸ ಆಚರಣೆಯಲ್ಲಿ ತೊಡಗಿದ್ದಾರೆ. ಉಪವಾಸ ದಿನ ಸುಸ್ತು, ಹಸಿವು, ಬಾಯಾರಿಕೆ ನೀಗಿಸಿಕೊಳ್ಳಲು ಅನೇಕರು ಖರ್ಜೂರನ್ನು ಬಳಸುತ್ತಾರೆ. ಹೀಗಾಗಿ ರಂಜಾನ್‌ ವೇಳೆಯಲ್ಲಿ ಖರ್ಜೂರಕ್ಕೆ ಬೇಡಿಕೆ ಹೆಚ್ಚು.

ಹಲವು ಬಗೆಯ ಖರ್ಜೂರ

ಸೌದಿ ಅರೇಬಿಯಾ ಹಾಗೂ ಮೆಕ್ಕಾ ಮದೀನಾದ ಅಜ್ವಾ ಡೆಟ್ಸ್‌, ಇರಾನ್‌ ಡೇಟ್ಸ್‌, ಸುರ್ಕಿ ಡೇಟ್ಸ್‌, ಝಾಹೇದಿ ಡೇಟ್ಸ್‌, ಮೆಕ್ಕಾ, ಮದೀನಾದ ಮಾಂಬ್ರು ಇತ್ಯಾದಿಗಳನ್ನು ಒಳಗೊಂಡಂತೆ ನಾನಾ ಬಗೆಯ ಖರ್ಜೂರಗಳಿವೆ.

ಇವುಗಳ ಬೆಲೆ ಕೆಜಿಗೆ 100-1000ರೂ.ಗಳವರೆಗೆ ಇದೆ. ಕಡುಕಪ್ಪು, ಕಂದು, ಮಿಶ್ರ ಬಣ್ಣದ ಖರ್ಜೂರಗಳು ಬಿಡಿಯಾಗಿಯೂ ಹಾಗೂ ಪ್ಯಾಕೇಟ್‌ಗಳಲ್ಲಿಯೂ ಸಿಗುತ್ತಿವೆ.

ನಗರದಲ್ಲಿ ರಂಜಾನ್‌ ಹಬ್ಬದ ನಿಮಿತ್ತ ನಾನಾ ಬಗೆಯ ಖರ್ಜೂರಗಳ ಮಾರಾಟ ಗರಿಗೆದರಿದ್ದು ಗಾಂಧಿ ಸರ್ಕಲ್‌, ಟಿಪ್ಪು ಸುಲ್ತಾನ್‌ ಸರ್ಕಲ್‌, ಬಸ್‌ ನಿಲ್ದಾಣ, ಕೆಲ ಮಸೀದಿಗಳ ಮುಂಭಾಗದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ಬದಿಗಳಲ್ಲಿ, ತಳ್ಳು ಗಾಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದ ಮೆಡ್ಜೋಲ್‌ ಡೇಟ್ಸ್‌ ಸಕ್ಕರೆ ರಹಿತವಾಗಿದ್ದು, ಮಧುಮೇಹಿ ರೋಗಿಗಳು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಸಾವಿರಾರು ಬೆಲೆ ಬಾಳುವ ಈ ಖರ್ಜೂರನ್ನು ಅಂದಾಜು ಒಂದು ವರ್ಷ ಕಾಲ ಸಂಗ್ರಹಿಸಿಟ್ಟು ತಿನ್ನಬಹುದು ಎಂದು ವ್ಯಾಪಾರಿಗಳು ಹೇಳುತ್ತಾರೆ.

ನಗರದ ನಾನಾ ಮಸೀದಿಗಳ ಬಳಿ ಸಂಜೆಯಾಗುತ್ತಿದ್ದಂತೆ ಖರ್ಜೂರ, ಕಬಾಬ್‌, ಸಮೋಸಾ, ಭಜಿ ಸೇರಿದಂತೆ ನಾನಾ ಕರೀದ ತಿಂಡಿಗಳು ಹಾಗೂ ಮಾವು, ಸೇಬು, ಬಾಳೆ ಹಣ್ಣು ಇತರೆ ಜ್ಯೂಸ್‌ಗಳು ಭರ್ಜರಿಯಾಗಿ ಮಾರಾಟ ಕಂಡುಬರುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ