ಆ್ಯಪ್ನಗರ

'ಬಿಜೆಪಿಯವರು ಯುಪಿ, ಮಧ್ಯಪ್ರದೇಶಗಳ ಆಡಳಿತ ನೋಡಲಿ'

ಕಾಂಗ್ರೆಸ್ ಸರಕಾರವನ್ನು ಗೂಂಡಾ ಎಂದು ಆರೋಪಿಸುವ ಮುನ್ನ ಬಿಜೆಪಿಯವರು ಯುಪಿ ಮತ್ತು ಮಧ್ಯಪ್ರದೇಶದ ಆಡಳಿತವನ್ನೊಮ್ಮೆ ನೋಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.

Vijaya Karnataka Web 23 Feb 2018, 2:19 pm
ವಿಜಯಪುರ: ಕಾಂಗ್ರೆಸ್ ಸರಕಾರವನ್ನು ಗೂಂಡಾ ಎಂದು ಆರೋಪಿಸುವ ಮುನ್ನ ಬಿಜೆಪಿಯವರು ಯುಪಿ ಮತ್ತು ಮಧ್ಯಪ್ರದೇಶದ ಆಡಳಿತವನ್ನೊಮ್ಮೆ ನೋಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.
Vijaya Karnataka Web parameshwar hits out bjp
'ಬಿಜೆಪಿಯವರು ಯುಪಿ, ಮಧ್ಯಪ್ರದೇಶಗಳ ಆಡಳಿತ ನೋಡಲಿ'


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಆದ ಕೊಲೆಗಳ ಬಗ್ಗೆ ಅಂಕಿ ಸಂಖ್ಯೆ ಸಮೇತ ತಮ್ಮ ಬಳಿ ದಾಖಲೆಗಳಿವೆ ಎಂದರು. ಒಳ ಮೀಸಲಾತಿಗೆ ಕಲ್ಪಿಸುವ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಒಳ್ಳೆಯ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಬ್ ಕಮಿಟಿ ರಚಿಸಲಾಗಿದ್ದು ಶೀಘ್ರ ವರದಿ ಒಪ್ಪಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಇದು ದೇಶಾದ್ಯಂತ ಕೇಳಿ ಬರುವ ಕೂಗು ಆದ್ದರಿಂದ ರಾಹುಲ್ ಗಾಂಧಿ ನಿರ್ಣಯ ಪ್ರಕಟಿಸಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಸಿಎಂ ಒಳ್ಳೆಯ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರಿಗೆ ಏಕಾಏಕಿ ದಲಿತರ ಬಗ್ಗೆ ಕಾಳಜಿ ಏಕೆ ಬಂದಿದೆ ಗೊತ್ತಿಲ್ಲ. ದಲಿತರ ಮನೆಯಲ್ಲಿ ಊಟ, ನಿದ್ರೆ ಮಾಡುವ ಮೂಲಕ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಈ ಹಿಂದೆ ಸರಕಾರಿ ಕಚೇರಿಯಲ್ಲಿ ಇದ್ದ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ತೆಗೆಸಿದ್ದು ಮರೆತರಾ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫೆ. 24ರಂದು ತಿಕೋಟಾಕ್ಕೆ ಭೇಟಿ ನೀಡುವ ರಾಹುಲ್‌ ಗಾಂಧಿ ಅವರು ಮಹಿಳೆಯರ ಸಮಸ್ಯೆ ಹಾಗೂ ಸಬಲೀಕರಣ ಬಗ್ಗೆ ಮಾತನಾಡಲಿದ್ದಾರೆ. ಮಹಿಳೆ ಸಬಲೀಕರಣಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ. ಈ ಹಿಂದೆ ಮಹಿಳಾ ವಿವಿ ಸ್ಥಾಪಿಸುವ ಮೂಲಕ ಪಕ್ಷದ ವರಿಷ್ಠ ರಾದ ಸೋನಿಯಾಗಾಂಧಿ ಉದ್ಘಾಟನೆ ಕೂಡ ನೆರವೇರಿಸಿದ್ದಾರೆ. ನಮ್ಮ ಸರಕಾರ ವಿವಿ ಸಬಲೀಕರಣಕ್ಕೆ ಆದ್ಯತೆ ನೀಡಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ