ಆ್ಯಪ್ನಗರ

ಹೆಚ್ಚುತ್ತಿರುವ ಕೃಷ್ಣೆ ನೀರು, ಅಪಾಯ ಲೆಕ್ಕಿಸದೇ ನದಿಗಿಳಿದ ಮೀನುಗಾರರು!

ಅತ್ತ ವರುಣನ ಅರ್ಭಟಕ್ಕೆ ಆಲಮಟ್ಟಿ ಜಲಾಶಯಕ್ಕೆ ಹಿನ್ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಆದರೆ ಎಚ್ಚರಿಕೆ ಕೊಟ್ಟರೂ ಜಗ್ಗದ ಮೀನುಗಾರರು ನಿತ್ಯವೂ ಜೀವ ಭಯದಲ್ಲಿ ಬಲೆ ಬೀಸಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದಾರೆ.

Vijaya Karnataka Web 15 Jul 2020, 2:14 pm

ಹೈಲೈಟ್ಸ್‌:

  • ಹೆಚ್ಚುತ್ತಿರುವ ಕೃಷ್ಣೆ ನೀರು
  • ಮೀನುಗಾರಿಕೆ ಸ್ಥಗಿತಗೊಳಿಸದ ಮೀನುಗಾರರು
  • ಅಪಾಯ ಲೆಕ್ಕಿಸದೇ ನದಿಗಿಳಿದ ಮೀನುಗಾರರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web fish
ಮೈಬೂಬ ಹಳ್ಳೂರ, ನಾಲತವಾಡ
ಅತ್ತ ವರುಣನ ಅರ್ಭಟಕ್ಕೆ ಆಲಮಟ್ಟಿ ಜಲಾಶಯಕ್ಕೆ ಹಿನ್ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ, ಇತ್ತ ನಾರಾಯಣಪೂರ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ, ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೃಷ್ಣೆಯ ಮೀನುಗಾರಿಕೆ ಸ್ಥಗಿತಗೊಳಿಸಿ ನದಿಗಿಳಿಯದಂತೆ ಎಚ್ಚರಿಕೆ ಕೊಟ್ಟರೂ ಜಗ್ಗದ ಮೀನುಗಾರರು ನಿತ್ಯವೂ ಜೀವ ಭಯದಲ್ಲಿ ಬಲೆ ಬೀಸಿ ಮೀನುಗಾರಿಕೆ ಚಟುವಟಿಕೆಯಲ್ಲಿ ತೊಡಗಿದ್ದು ಸಂಶಯಕ್ಕೆ ಎಡೆ ಮಾಡಿದೆ.

ನಾಲತವಾಡ ಪಕ್ಕದ ಕೃಷ್ಣೆಯ ತಟದ ಬಳಿ ಕಳೆದ ಸುಮಾರು ವರ್ಷಗಳಿಂದಲೂ ಸತತ ಮೀನುಗಾರಿಕೆಯಲ್ಲಿ ತೊಡಗಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣದ ಮೀನುಗಾರರು ಒಟ್ಟು ನೂರಕ್ಕೂ ಹೆಚ್ಚು ಕುಟುಂಬಗಳು ನದಿ ತೀರದಲ್ಲೇ ವಾಸಿಸುತ್ತೀವೆ, ಇತ್ತೀಚಿನ ವರುಣನ ಅರ್ಭಟಕ್ಕೆ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರುತ್ತಲೇ ಇದ್ದು ಸುಮಾರು 40 ಸಾವಿರ ಕ್ಯೂಸೆಕ್‌ ನೀರು ಹರಿಯುತ್ತಿದೆ, ನದಿ ನೀರಿನ ಅಪಾಯದ ನಡುವೆಯೂ ದಡದಲ್ಲಿ ಮೀನುಗಾರಿಕೆ ಭೀತಿ ಹುಟ್ಟಿಸುವಂತಿದೆ.

ಅಪಾಯ ಕಟ್ಟಿಟ್ಟ ಬುತ್ತಿ:
ವಿಪರಿತ ನೀರು ನದಿಯಲ್ಲಿ ಹರಿಯುತ್ತಿದ್ದು, ನಿತ್ಯವೂ ಮೀನುಗಾರರು ತಮ್ಮ ಕಾಯಕ ಮುಂದುವರೆಸಿದ್ದು, ವೃದ್ದರೂ ಸೇರಿದಂತೆ ಯುವಕರು ಮೀನಿಗೆ ಗಾಳ ಹಾಕಲು ಹೋಗಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಶುಲ್ಕ ಕಟ್ಟಲು ಒತ್ತಡ ,ಮೈಸೂರಿನಲ್ಲಿ ಖಾಸಗಿ ಶಾಲಾ-ಕಾಲೇಜು ವಿರುದ್ಧ ಪ್ರತಿಭಟನೆ

ಮಾತಿಗೆ ಬೆಲೆ ಇಲ್ಲ:
ನದಿ ನೀರಿನ ಮಟ್ಟ ಏರುತ್ತೀರುವಾಗಲೇ ಸ್ಥಳೀಯ ಪೊಲೀಸರು ಹಾಗೂ ಇತರೇ ಅಧಿಕಾರಿಗಳು ಮೀನುಗಾರರಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಅಪಾಯ ತಪ್ಪಿಸುವ ನಿಟ್ಟಿನಲ್ಲಿಅರಿವು ಮೂಡಿಸಿದರೂ ಮೀನುಗಾರರು ನದಿ ಇಳಿದು ನಿತ್ಯದ ಕಾಯಕದಲ್ಲಿ ತೊಡಗಿಕೊಂಡಿದ್ದು, ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ.

ಬಾಗಲಕೋಟೆ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡುವ ಉದ್ದೇಶವಿಲ್ಲ: ಡಿಸಿಎಂ ಕಾರಜೋಳ

ಮಾರಣ ಹೋಮ:
ಈಚೆಗೆ ವರುಣ ಆಗಮನದೊಂದಿಗೆ ಸಣ್ಣ ಪ್ರಮಾಣ ಮೀನುಗಳು ನದಿ ಸೇರುತ್ತೀವೆ, ಸಣ್ಣ ಮೀನುಗಳನ್ನು ಬೇಟೆಯಾಡುವ ನಿಯಮ ಗಾಳಿಗೆ ತೂರಿದ ಮೀನುಗಾರರು ಮರಿಗಳ ಮಾರಣ ಹೋಮದಲ್ಲಿ ತೊಡಗಿದ್ದು ಕೈಕಟ್ಟಿ ಕುಳಿತ ಅಧಿಕಾರಿಗಳ ನಡೆ ಅಚ್ಚರಿ ಮೂಡಿಸಿದೆ.

ವಿಕ್ಟೋರಿಯಾ ಆಸ್ಪತ್ರೆಗೆ ಡಿಕೆಶಿ ಭೇಟಿ;ಕೊರೊನಾ ಸೋಂಕಿತರು, ವೈದ್ಯರ ಜತೆ ಚರ್ಚೆ

ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದೆ. ಈಗಾಗಲೇ ನದಿಗೆ ಇಳಿಯದಂತೆ ಸೂಚಿಸಿದ್ದೇವೆ, ಮತ್ತೇ ಅದೇ ಕಾಯಕ ಮುಂದುವರೆಸಿದ್ದು ಗಮನಕ್ಕೆ ಇಲ್ಲ, ಶೀಘ್ರವೇ ಭೇಟಿ ನೀಡಿ ಮೀನುಗಾರರಿಗೆ ಬುದ್ದಿ ಹೇಳಿ ಬಲೆ ಬೀಸದಂತೆ ಎಚ್ಚರಿಕೆ ನೀಡುತ್ತೇನೆ
-ಬಿ.ಎಸ್‌.ಲಮಾಣಿ, ಸಹಾಯಕ ನಿರ್ದೇಶಕರು ಮೀನುಗಾರಿಕಾ ಇಲಾಖೆ ಮುದ್ದೇಬಿಹಾಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ