ಆ್ಯಪ್ನಗರ

ವಿಜಯಪುರ: ಎತ್ತುಗಳನ್ನು ಕತ್ತರಿಸಿ, ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಎತ್ತನ್ನು ಕತ್ತರಿಸಿ, ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಇನ್ನೊಂದು ಎತ್ತು ರಕ್ಷಿಸಿ, ಯಲಗೂರ ಗೋಶಾಲೆಗೆ ತಲುಪಿಸಿದ ಘಟನೆ ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿ‌ ನಡೆದಿದೆ.

Vijaya Karnataka Web 21 Jan 2021, 10:18 pm
ವಿಜಯಪುರ: ಎತ್ತನ್ನು ಕತ್ತರಿಸಿ, ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಇನ್ನೊಂದು ಎತ್ತು ರಕ್ಷಿಸಿ, ಯಲಗೂರ ಗೋಶಾಲೆಗೆ ತಲುಪಿಸಿದ ಘಟನೆ ಕೂಡಗಿಯಲ್ಲಿ‌ ನಡೆದಿದೆ. ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಸಿಕಂದರಸಾಬ ರಾಜೇಸಾಬ ಬೇಪಾರಿ (35) ಬಂಧಿತ ಆರೋಪಿ.
Vijaya Karnataka Web Cow slaughter 1


ಈತ ಕೊಲ್ಹಾರ ಸಂತೆಯಲ್ಲಿ ರೈತರೊಬ್ಬನಿಂದ ಎರಡು ಎತ್ತು ಖರೀದಿಸಿದ್ದ. ಈ ಪೈಕಿ ಒಂದು ಎತ್ತು ಕತ್ತರಿಸಿ, ಮಾಂಸ ಮಾರಾಟ ಮಾಡಲು ಮುಂದಾಗಿದ್ದ. ಭಜರಂಗದಳ ಕಾರ್ಯಕರ್ತರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ‌ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಇದೇ ವೇಳೆ ಆರೋಪಿಯ ಕಸಾಯಿಖಾನೆಯಲ್ಲಿ ಬಲಿಯಾಗುತ್ತಿದ್ದ ಇನ್ನೊಂದು ಎತ್ತನ್ನು ಪೊಲೀಸರು ಸಂರಕ್ಷಿಸಿದ್ದಾರೆ.‌ ಬಳಿಕ ಆ ಎತ್ತನ್ನು ಯಲಗೂರ ಗೋಶಾಲೆ ತಲುಪಿಸಿದ್ದಾಗಿ ಕೂಡಗಿ ಠಾಣೆ ಪೊಲೀಸರು ತಿಳಿಸಿದ್ದಾರೆ‌. ಗೋಹತ್ಯೆ ನಿಷೇಧ ಕಾಯ್ದೆಯಡಿ ಕೂಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ: ಕಾಯಿದೆ ಜಾರಿಯತ್ತ ಬಿಜೆಪಿ ಧೃಢ ನಿರ್ಧಾರ

ರಾಜ್ಯದಲ್ಲಿ ಸಂಪೂರ್ಣವಾಗಿ ಗೋಹತ್ಯೆ ನಿಷೇಧ ಜಾರಿಯಾಗಿದ್ದು, ಗೋವಧೆ(ಹಸು, ಕರು, ಎತ್ತು, ಹೋರಿ ಸೇರಿ) ಸಂಪೂರ್ಣ ನಿಷೇಧದ ಜತೆಗೆ ಎಮ್ಮೆ, ಕೋಣಗಳ ಹತ್ಯೆಗೂ ನಿಷೇಧವಿದೆ.

1964ರ ಕಾಯಿದೆ ಅನುಸಾರ ಜಾನುವಾರುಗಳ ಗರಿಷ್ಠ ಅವಧಿ 15 ವರ್ಷ. ಅದರಂತೆ ಹಾಲು ಕೊಡದ, ಉಪಯೋಗಕ್ಕೆ ಬಾರದ ಮುದಿಯಾದ ಗೋವುಗಳ ವಧೆ ಮಾಡುವುದಿದ್ದರೆ ನಿರ್ದಿಷ್ಟ ಪ್ರಾಧಿಕಾರದ ಅನುಮತಿ ಅಗತ್ಯವಿದೆ. ಗೋಹತ್ಯೆ ಮಾಡುವವರು ಹಾಗೂ ಗೋಹತ್ಯೆಗೆ ಪ್ರೇರೇಪಿಸುವವರಿಗೆ 1 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ. ಜತೆಗೆ 25 ಸಾವಿರ ರೂ. ದಿಂದ 50 ಸಾವಿರ ರೂ. ದಂಡ. ಒಮ್ಮೆ ದಂಡ ಶಿಕ್ಷೆಯಾದ ಬಳಿಕ ಪುನಃ ಈ ಕೃತ್ಯವೆಸಗಿದರೆ 1 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ