ಆ್ಯಪ್ನಗರ

ಚಡಚಣ ಠಾಣೆ ಸಿಬ್ಬಂದಿ ಕೊರತೆ ನೀಗುವುದೇ?

ಚಡಚಣ : ಭೀಮಾತೀರದ ಚಡಚಣ ಸಹೋದರರ ಎನ್‌ಕೌಂಟರ್‌ ಹಾಗೂ ನಿಗೂಢ ಕೊಲೆ ಪ್ರಕರಣದಿಂದ ರಾಜ್ಯದಲ್ಲಿಯೇ ಸಾಕಷ್ಟು ಸುದ್ದಿ ಮಾಡಿರುವ ಚಡಚಣ ಠಾಣೆಯ ಸಿಬ್ಬಂದಿ ಕೊರತೆ ಇನ್ನಾದರೂ ನೀಗುವುದೇ? ಎಂಬುದು ಇಲ್ಲಿನ ಜನರಿಂದ ಕೇಳಿಬರುತ್ತಿರುವ ಮಾತು.

Vijaya Karnataka 5 Jan 2019, 5:00 am
ಮನೋಜ ಕಟಗೇರಿ, ಚಡಚಣ
Vijaya Karnataka Web police deficiency
ಚಡಚಣ ಠಾಣೆ ಸಿಬ್ಬಂದಿ ಕೊರತೆ ನೀಗುವುದೇ?


ಭೀಮಾತೀರದ ಚಡಚಣ ಸಹೋದರರ ಎನ್‌ಕೌಂಟರ್‌ ಹಾಗೂ ನಿಗೂಢ ಕೊಲೆ ಪ್ರಕರಣದಿಂದ ರಾಜ್ಯದಲ್ಲಿಯೇ ಸಾಕಷ್ಟು ಸುದ್ದಿ ಮಾಡಿರುವ ಚಡಚಣ ಠಾಣೆಯ ಸಿಬ್ಬಂದಿ ಕೊರತೆ ಇನ್ನಾದರೂ ನೀಗುವುದೇ? ಎಂಬುದು ಇಲ್ಲಿನ ಜನರಿಂದ ಕೇಳಿಬರುತ್ತಿರುವ ಮಾತು.

ಗಡಿಭಾಗ, ಹಂತಕರ ಚಟುವಟಿಕೆ, ಟ್ರಾಫಿಕ್‌ ಸಮಸ್ಯೆಯಿಂದ ಇದ್ದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಈಗ ಜಿಲ್ಲೆಯವರೇ ಗೃಹ ಮಂತ್ರಿಗಳಾಗಿರುವುದರಿಂದ ಇಲ್ಲಿನ ಠಾಣೆಗೆ ಹೆಚ್ಚಿನ ಸಿಬ್ಬಂದಿ ದೊರೆಯುತ್ತದೆ ಎಂಬ ಆಶಾಭಾವನೆ ಇಲ್ಲಿನ ಜನರಲ್ಲಿ ಮೂಡಿದೆ.

ಈಗಾಗಲೇ ಚಟಚಣ ಖ್ಯಾತಿಗಿಂತ ಕುಖ್ಯಾತಿಗೆ ಹೆಚ್ಚು ಹೆಸರು ಮಾಡಿದೆ. ಜತೆಗೆ ತಾಲೂಕು ಕೇಂದ್ರ ಕೂಡ. ಇಲ್ಲಿನ ಠಾಣೆಗೆ ಒಟ್ಟು 34 ಹುದ್ದೆಗಳಿದ್ದು, ಅದರಲ್ಲಿ 13 ಹುದ್ದೆಗಳು ಖಾಲಿ ಇವೆ. 2 ಎಎಸ್‌ಐ, 2 ಎಚ್‌ಸಿ ಹಾಗೂ 9 ಪೇದೆಗಳ ಅವಶ್ಯಕತೆ ಇದೆ. ಹೀಗಾಗಿ ಇಲ್ಲಿಗೆ ಗೃಹ ಸಚಿವರು ಹೆಚ್ಚಿನ ಸಿಬ್ಬಂದಿ ಕೊಟ್ಟು ಇಲ್ಲಿ ನಡೆಯುವ ಅಪರಾಧ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲು ಮುಂದಾಗುತ್ತಾರಾ ಎಂಬುದು ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ