ವಿಜಯಪುರ: ಅಕ್ರಮ ಪಿಸ್ತೂಲ್ ಸಾಗಾಟ ಶಂಕೆ ಹಿನ್ನಲೆಯಲ್ಲಿ ಆರೋಪಿ ತಪಾಸಣೆ ವೇಳೆ ಆರೋಪಿಯೇ ಪಿಎಸ್ಐ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಪ್ರತಿಯಾಗಿ ಪಿಎಸ್ಐ ಆರೋಪಿ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಭೀಮಾತೀರದ ಹಂತಕ ಶಶಿ ಮುಂಡೆವಾಡಿ, ಚಡಚಣ ಪಿಎಸೈ ಗೋಪಾಲ್ ಹಳ್ಳೂರ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ.
ಮಾಹಿತಿಗಳ ಪ್ರಕಾರ, ಅಕ್ರಮ ಪಿಸ್ತೂಲ್ ಸಾಗಾಟ ಮಾಡುತ್ತಿದ್ದ ಶಂಕೆಯ ಮೇಲೆ ಶಶಿ ಮುಂಡೆವಾಡಿ ತಪಾಸಣೆ ನಡೆಸಲು ಮುಂದಾದ ಪಿಎಸೈ ಗೋಪಾಲ ಹಳ್ಳೂರ್ ಹಾಗೂ ಓರ್ವ ಪೇದೆ ಮೇಲೆ ಆರೋಪಿ ಚಾಕೂವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯ ಪ್ರವೃತ್ತರಾದ ಪಿಎಸೈ ಗೋಪಾಲ್ ಹಳ್ಳೂರ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಳಿಕ ಶಶಿ ಮುಂಡೆವಾಡಿ ಕಾಲಿಗೆ ಒಂದು ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪಿಎಸ್ಐ ಹಾಗೂ ಪೇದೆಗೆ ಗಾಯಗಳಾಗಿದ್ದ, ಗುಂಡೇಟಿಗೊಳಗಾದ ಶಶಿ ಮುಂಡೆವಾಡಿ ಚಡಚಣ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಭೀಮಾತೀರದ ಹಂತಕ ಶಶಿ ಮುಂಡೆವಾಡಿ, ಚಡಚಣ ಪಿಎಸೈ ಗೋಪಾಲ್ ಹಳ್ಳೂರ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ.
ಮಾಹಿತಿಗಳ ಪ್ರಕಾರ, ಅಕ್ರಮ ಪಿಸ್ತೂಲ್ ಸಾಗಾಟ ಮಾಡುತ್ತಿದ್ದ ಶಂಕೆಯ ಮೇಲೆ ಶಶಿ ಮುಂಡೆವಾಡಿ ತಪಾಸಣೆ ನಡೆಸಲು ಮುಂದಾದ ಪಿಎಸೈ ಗೋಪಾಲ ಹಳ್ಳೂರ್ ಹಾಗೂ ಓರ್ವ ಪೇದೆ ಮೇಲೆ ಆರೋಪಿ ಚಾಕೂವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯ ಪ್ರವೃತ್ತರಾದ ಪಿಎಸೈ ಗೋಪಾಲ್ ಹಳ್ಳೂರ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಳಿಕ ಶಶಿ ಮುಂಡೆವಾಡಿ ಕಾಲಿಗೆ ಒಂದು ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪಿಎಸ್ಐ ಹಾಗೂ ಪೇದೆಗೆ ಗಾಯಗಳಾಗಿದ್ದ, ಗುಂಡೇಟಿಗೊಳಗಾದ ಶಶಿ ಮುಂಡೆವಾಡಿ ಚಡಚಣ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.