ವಿಜಯಪುರ: ಐತಿಹಾಸಿಕ ಗುಮ್ಮಟ ನಗರಿ ವಿಜಯಪುರದಲ್ಲಿ ರಸ್ತೆ ಗುಂಡಿಗಳನ್ನು ಸ್ವಂತ ಖರ್ಚಿನಿಂದ ಮುಚ್ಚಲು ಕಾಂಗ್ರೆಸ್ ಮುಂದಾಗಿದೆ. ಈ ಮೂಲಕ ಸರಕಾರಕ್ಕೆ ಬಿಸಿ ತಟ್ಟಿಸುವ ಪ್ರಯತ್ನ ಮಾಡಿದೆ. ಇಲ್ಲಿನ ಎಂಜಿ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಗಂಭೀರತೆಯ ಅರಿತು ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರು, 20 ದಿನಗಳಲ್ಲಿ ನಗರದ ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿಗೊಳಿಸುವುದಾಗಿ ನೀಡಿದ ಭರವಸೆ ಮೇರೆಗೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಹಿಂಪಡೆದರು.
ಇದಕ್ಕೂ ಮುನ್ನ ನಗರದಲ್ಲಿ ಜನಪ್ರತಿನಿಧಿಗಳಿದ್ದರೂ, ನಗರ ಅನಾಥವಾಗಿದ್ದು, ನಗರದ ರಸ್ತೆಗಳ ದುರಸ್ತಿ ಭಾಗ್ಯ ಯಾವಾಗ? ಕಣ್ಮುಚ್ಚಿಕೊಂಡಿರುವ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ಕಾಂಗ್ರೆಸ್ ಮುಖಂಡರು ಸರಕಾರಕ್ಕೆ ಚುರುಕು ಮುಟ್ಟಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಹಮೀದ್ ಮುಶ್ರೀಫ್ ಮಾತನಾಡಿ, ವಿಜಯಪುರ ನಗರ ಮತ ಕ್ಷೇತ್ರ ವ್ಯಾಪ್ತಿಯ ಪ್ರತಿ ರಸ್ತೆಗಳು ಹದಗೆಟ್ಟು ಹೋಗಿವೆ. ಸಾರ್ವಜನಿಕರನ್ನು ಬಲಿ ತೆಗೆದುಕೊಳ್ಳಲು ಎಲ್ಲೆಂದರಲ್ಲಿ ಗುಂಡಿಗಳು ಬಾಯ್ದೆರೆದು ನಿಂತಿವೆ. ಮಾತ್ರವಲ್ಲ, ನಗರದ ಬಹುತೇಕ ರಸ್ತೆಗಳು ಕೊಳಚೆಗಳಾಗಿ ಮಾರ್ಪಟ್ಟಿವೆ ಎಂದರು.
ನಗರ ಶಾಸಕರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ತಮಗೆ ಬೇಕಾದ ಕಡೆ ರಸ್ತೆ ಕಾಮಗಾರಿ ಕೈಗೊಂಡಿದ್ದು ಸಾರ್ವಜನಿಕರಿಗೆ ತಾರತಮ್ಯ ಎಸಗುತ್ತಿರುವುದನ್ನು ಖಂಡಿಸಿದ ಅವರು, ಶಾಸಕರು ತಮಗೆ ಬೇಕಾದ ಗುತ್ತಿಗೆದಾರರಿಗೆ ಕೆಲಸ ಕೊಡಿಸಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಯಿಲ್ಲದೇ ಕಾಲಹರಣ ಮಾಡುವ ರಾಜಕಾರಣದಲ್ಲಿ ತೊಡಗಿದ್ದಾರೆ. ಇಂಥ ಶಾಸಕನನ್ನು ಪಡೆದದ್ದು ಮತದಾರರ ದುರಾದೃಷ್ಟ ಎಂದ ಅವರು, ಮುಂಬರುವ ದಿನಗಳಲ್ಲಿ ಇಂಥ ಶಾಸಕರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
20 ದಿನಗಳ ಗಡುವು: ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ ಪಾಲಿಕೆ ಆಯುಕ್ತರಿಗೆ ರಸ್ತೆ ದುರಸ್ತಿಗೊಳಿಸಲು 20 ದಿನಗಳ ಕಾಲಾವಕಾಶ ನೀಡಿದರು. ಒಂದು ವೇಳೆ 20 ದಿನಗಳೊಳಗಾಗಿ ಗುಂಡಿಗಳನ್ನು ಮುಚ್ಚಿ, ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ, ನಗರದ ಜನತೆಯ ಬಳಿ ಭಿಕ್ಷಾಟನೆ ನಡೆಸುವ ಮೂಲಕ ಉಗ್ರ ಪ್ರತಿಭಟನೆ ನಡೆಸಿ, ರಸ್ತೆಗಳ ದುರಸ್ತಿ ಮಾಡಿಸುವುದಾಗಿ ಮುಶ್ರೀಫ್ ಹೇಳಿದರು.
ಪಾಲಿಕೆ ಆಯುಕ್ತರು 20 ದಿನಗಳೊಳಗಾಗಿಯೇ ರಸ್ತೆ ದುರಸ್ತಿ ಮಾಡುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಕೈಬಿಟ್ಟರು.
ರಾಜ್ಯ ಹಿಂದುಳಿದ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಕೆ. ಎ. ಅಂಕಲಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ರಾಜ್ಯ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಮಹಮ್ಮದ ರಫೀಕ್ ಟಪಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬಿರ ಜಾಗೀರದಾರ, ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲ ರಜಾಕ ಹೊರ್ತಿ, ಇದ್ರುಷ್ ಭಕ್ಷಿ, ಅಜೀಂ ಇನಾಮದಾರ, ರವೀಂದ್ರ ಜಾಧವ, ಇರ್ಫಾನ್ ಶೇಖ, ರಾಜಶ್ರೀ ಚೊಳಕೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಅಧ್ಯಕ್ಷ ಸಿದ್ದು ಛಾಯಾಗೋಳ, ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಸಮಾ ಕಾಲೇಬಾಗ, ಭಾರತಿ ಹೊಸಮನಿ, ಅಸಾಕ್ ಮನಗೂಳಿ, ನಜೀರ, ಶಬ್ಬಿರ್ ಮನಗೂಳಿ, ತಿಪ್ಪಣ್ಣ ಕಮಲದಿನ್ನಿ, ಸುನೀಲ ಪತ್ತಾರ, ಹಾಜಿ ಪಿಂಜಾರ ಮತ್ತಿತರರಿದ್ದರು.
ಇದಕ್ಕೂ ಮುನ್ನ ನಗರದಲ್ಲಿ ಜನಪ್ರತಿನಿಧಿಗಳಿದ್ದರೂ, ನಗರ ಅನಾಥವಾಗಿದ್ದು, ನಗರದ ರಸ್ತೆಗಳ ದುರಸ್ತಿ ಭಾಗ್ಯ ಯಾವಾಗ? ಕಣ್ಮುಚ್ಚಿಕೊಂಡಿರುವ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ಕಾಂಗ್ರೆಸ್ ಮುಖಂಡರು ಸರಕಾರಕ್ಕೆ ಚುರುಕು ಮುಟ್ಟಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ಹಮೀದ್ ಮುಶ್ರೀಫ್ ಮಾತನಾಡಿ, ವಿಜಯಪುರ ನಗರ ಮತ ಕ್ಷೇತ್ರ ವ್ಯಾಪ್ತಿಯ ಪ್ರತಿ ರಸ್ತೆಗಳು ಹದಗೆಟ್ಟು ಹೋಗಿವೆ. ಸಾರ್ವಜನಿಕರನ್ನು ಬಲಿ ತೆಗೆದುಕೊಳ್ಳಲು ಎಲ್ಲೆಂದರಲ್ಲಿ ಗುಂಡಿಗಳು ಬಾಯ್ದೆರೆದು ನಿಂತಿವೆ. ಮಾತ್ರವಲ್ಲ, ನಗರದ ಬಹುತೇಕ ರಸ್ತೆಗಳು ಕೊಳಚೆಗಳಾಗಿ ಮಾರ್ಪಟ್ಟಿವೆ ಎಂದರು.
ನಗರ ಶಾಸಕರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ತಮಗೆ ಬೇಕಾದ ಕಡೆ ರಸ್ತೆ ಕಾಮಗಾರಿ ಕೈಗೊಂಡಿದ್ದು ಸಾರ್ವಜನಿಕರಿಗೆ ತಾರತಮ್ಯ ಎಸಗುತ್ತಿರುವುದನ್ನು ಖಂಡಿಸಿದ ಅವರು, ಶಾಸಕರು ತಮಗೆ ಬೇಕಾದ ಗುತ್ತಿಗೆದಾರರಿಗೆ ಕೆಲಸ ಕೊಡಿಸಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ನಗರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಯಿಲ್ಲದೇ ಕಾಲಹರಣ ಮಾಡುವ ರಾಜಕಾರಣದಲ್ಲಿ ತೊಡಗಿದ್ದಾರೆ. ಇಂಥ ಶಾಸಕನನ್ನು ಪಡೆದದ್ದು ಮತದಾರರ ದುರಾದೃಷ್ಟ ಎಂದ ಅವರು, ಮುಂಬರುವ ದಿನಗಳಲ್ಲಿ ಇಂಥ ಶಾಸಕರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
20 ದಿನಗಳ ಗಡುವು: ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದ ಪಾಲಿಕೆ ಆಯುಕ್ತರಿಗೆ ರಸ್ತೆ ದುರಸ್ತಿಗೊಳಿಸಲು 20 ದಿನಗಳ ಕಾಲಾವಕಾಶ ನೀಡಿದರು. ಒಂದು ವೇಳೆ 20 ದಿನಗಳೊಳಗಾಗಿ ಗುಂಡಿಗಳನ್ನು ಮುಚ್ಚಿ, ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ, ನಗರದ ಜನತೆಯ ಬಳಿ ಭಿಕ್ಷಾಟನೆ ನಡೆಸುವ ಮೂಲಕ ಉಗ್ರ ಪ್ರತಿಭಟನೆ ನಡೆಸಿ, ರಸ್ತೆಗಳ ದುರಸ್ತಿ ಮಾಡಿಸುವುದಾಗಿ ಮುಶ್ರೀಫ್ ಹೇಳಿದರು.
ಪಾಲಿಕೆ ಆಯುಕ್ತರು 20 ದಿನಗಳೊಳಗಾಗಿಯೇ ರಸ್ತೆ ದುರಸ್ತಿ ಮಾಡುವುದಾಗಿ ನೀಡಿದ ಭರವಸೆ ಮೇರೆಗೆ ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ಕೈಬಿಟ್ಟರು.
ರಾಜ್ಯ ಹಿಂದುಳಿದ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಕೆ. ಎ. ಅಂಕಲಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ರಾಜ್ಯ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಮಹಮ್ಮದ ರಫೀಕ್ ಟಪಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬಿರ ಜಾಗೀರದಾರ, ಪಾಲಿಕೆ ಮಾಜಿ ಸದಸ್ಯರಾದ ಅಬ್ದುಲ ರಜಾಕ ಹೊರ್ತಿ, ಇದ್ರುಷ್ ಭಕ್ಷಿ, ಅಜೀಂ ಇನಾಮದಾರ, ರವೀಂದ್ರ ಜಾಧವ, ಇರ್ಫಾನ್ ಶೇಖ, ರಾಜಶ್ರೀ ಚೊಳಕೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಅಧ್ಯಕ್ಷ ಸಿದ್ದು ಛಾಯಾಗೋಳ, ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಸಮಾ ಕಾಲೇಬಾಗ, ಭಾರತಿ ಹೊಸಮನಿ, ಅಸಾಕ್ ಮನಗೂಳಿ, ನಜೀರ, ಶಬ್ಬಿರ್ ಮನಗೂಳಿ, ತಿಪ್ಪಣ್ಣ ಕಮಲದಿನ್ನಿ, ಸುನೀಲ ಪತ್ತಾರ, ಹಾಜಿ ಪಿಂಜಾರ ಮತ್ತಿತರರಿದ್ದರು.