ಆ್ಯಪ್ನಗರ

ತೊರವಿ ಗ್ರಾಪಂನಲ್ಲಿ ಅವ್ಯವಹಾರ: ಪ್ರತಿಭಟನೆ

ವಿಜಯಪುರ : ತೊರವಿ ಗ್ರಾಪಂನಲ್ಲಿ ನಾನಾ ಯೋಜನೆಗಳಡಿ ಹಾಗೂ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸಿ ತಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿ ತೊರವಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬಳಿಕ ಜಿಲ್ಲಾ ಯೋಜನಾ ಅಧಿಕಾರಿಗೆ ಮನವಿ ಸಲ್ಲಿಸಿದರು.

Vijaya Karnataka 6 Feb 2019, 5:00 am
ವಿಜಯಪುರ : ತೊರವಿ ಗ್ರಾಪಂನಲ್ಲಿ ನಾನಾ ಯೋಜನೆಗಳಡಿ ಹಾಗೂ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸಿ ತಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿ ತೊರವಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬಳಿಕ ಜಿಲ್ಲಾ ಯೋಜನಾ ಅಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web news/vijayapura/protest
ತೊರವಿ ಗ್ರಾಪಂನಲ್ಲಿ ಅವ್ಯವಹಾರ: ಪ್ರತಿಭಟನೆ


ಸಮಿತಿ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, 2015 ರಿಂದ 2018ನೇ ಸಾಲಿನ ಕಾಮಗಾರಿಯಲ್ಲಿ ರಸ್ತೆ ನಿರ್ಮಾಣವಾಗದಿದ್ದರೂ ಸಹ ನಿರ್ಮಾಣವಾಗಿದೆ ಎಂದು ಬಿಲ್‌ ಎತ್ತಿದ್ದಾರೆ. ಕನ್ನಡ ಶಾಲೆಗಳ ಮಕ್ಕಳ ಆಟದ ಮೈದಾನ ಅಭಿವೃದ್ಧಿ ಕುರಿತು 35,50,000 ಬಿಲ್‌ ಈಗಾಗಲೇ ತೆಗೆಯಲಾಗಿದೆ. ಆದರೆ ಯಾವ ಕಾಮಗಾರಿಗಳು ನಡೆದಿಲ್ಲ. ಟೆಲಿವಿಜನ್‌ ಕುರಿತು 7,50,000 ಬಿಲ್‌ ತೆಗೆದಿದ್ದಾರೆ. ಆದರೆ ಯಾವುದೇ ಟೆಲಿವಿಜನ ಬಂದಿಲ್ಲ. ಇನ್ನೂ ಯುವಕ ಯುವತಿ ಕ್ರೀಡಾ ಅಭಿವೃದ್ದಿ ಆಟದ ಮೈದಾನಗಳ ಅಭಿವೃದ್ಧಿಗೆ 45,00,00 ಬಿಲ್ಲನ್ನು ತೆಗೆದಿದ್ದರೂ. ಯಾವುದೇ ಆಟದ ಮೈದಾನಗಳು ಅಭಿವೃದ್ಧಿಯಾಗಿಲ್ಲ ಎಂದರು.

ಗ್ರಾಪಂನವರ ಅವ್ಯವಹಾರ ಇಲ್ಲಿಗೆ ನಿಲ್ಲಲ್ಲ. ತಿಪ್ಪೆಗುಂಡಿಗಾಗಿ 37,50,000 ಬಿಲ್ಲನ್ನು ಅನಾಮತ್ತಾಗಿ ಎತ್ತಿದ್ದಾರೆ. ಆದರೆ ಕೆಲಸ ಮಾತ್ರ ಬಿಗ್‌ ಝೀರೋ. ವಿವಿಧ ಆಶ್ರಯ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಾಣ ಮಾಡದೇ ಬಿಲ್‌ ತೆಗೆದಿದ್ದಾರೆ. ಒಂದೇ ಮನೆ ಎದುರು ನಿಂತು ಭಾವಚಿತ್ರ ತೆಗೆಯಿಸಿಕೊಂಡು ಹಲವಾರು ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದಾರೆ. ಆದರೆ ಮನೆಗಳನ್ನು ನಿರ್ಮಿಸದೇ ಬಿಲ್‌ ತೆಗೆದಿದ್ದಾರೆ ಎಂದು ಆರೋಪಿಸಿದರು.

ದಾದಾಸಾಹೇಬ ಬಾಗಾಯತ ಮಾತನಾಡಿ, 2014 ರಿಂದ ಇಂದಿನವರೆಗೆ ಪಂಚಾಯತಿ ದಾಖಲೆಗಳ ಕುರಿತು ಮಾಹಿತಿ ಹಕ್ಕಿನಡಿ ಕೋರಿದ ಮಾಹಿತಿ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಡೀ ಗ್ರಾಪಂನಲ್ಲಿ ಅತಿಯಾದ ಭ್ರಷ್ಟಾಚಾರ ನಡೆದಿದೆ. ಅನುದಾನದಲ್ಲಿ ಭಾರಿ ಅವ್ಯವಹಾರವಾಗಿದ್ದು, ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಗೆ ಮತ್ತು ಪಂಚಾಯತಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಹಾದೇವ ಬೆನಕಹಳ್ಳಿ, ಸೋಮು ರಾಠೋಡ, ವೆಂಕಟೇಶ ರಾಠೋಡ, ಅಶೋಕ ಆಸಂಗಿ, ಲಕ್ಕಪ್ಪ ಮಾಲಗಾರ, ಹಣಮಂತ ಪಟ್ಟೇದ, ಅಶೋಕ ಜಾಧವ, ಭೀಮು ರಾಠೋಡ, ರಾಜು ತೊರವಿ, ಬಾಬುಗೌಡ ನ್ಯಾಮಗೊಂಡ, ದಿಲೀಪ ಬಾಗಾಯತ, ಸುನೀಲ ಪೌತೆ, ಲಾಲು ಗುಡಿಮನಿ, ಶ್ರೀಶೈಲ ತಿಕೊಟಾ, ಅಪ್ಪಣ್ಣಪ್ಪ ಜಮಾದಾರ, ರಾಘು ಮಾಲಗಾರ, ಲಂಬು ಮಾಲಗಾರ, ಶ್ರೀಶೈಲ ಪೂಜಾರಿ, ಸುರೇಶ ಹೂಗಾರ, ದಶರಥ ದರಗೊಂಡ, ಚಂದ್ರಮ್ಮ ಧರ್ಮಗೋಳ, ಸಂಜು ತೊರವಿ, ತಾನಾಜಿ ಮಸೂತಿ, ಗುರುಪಾದ ಆಲಗಿಡದ ಮತ್ತಿತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ