ಆ್ಯಪ್ನಗರ

ನರೇಗಾ ಕಾರ್ಮಿಕರ ಪ್ರತಿಭಟನೆ

ವಿಜಯಪುರ : ತಾಲೂಕಿನ ನಾಗಠಾಣ ಗ್ರಾಪಂ ಪಿಡಿಒ ಸೇವೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ 15 ಟ್ರ್ಯಾಕ್ಟರ್‌ನಲ್ಲಿ ಆಗಮಿಸಿದ್ದ ನರೇಗಾ ಕೂಲಿ ಕಾರ್ಮಿಕರು ಇಲ್ಲಿನ ತಾಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

Vijaya Karnataka 11 May 2019, 5:00 am
ವಿಜಯಪುರ : ತಾಲೂಕಿನ ನಾಗಠಾಣ ಗ್ರಾಪಂ ಪಿಡಿಒ ಸೇವೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿ 15 ಟ್ರ್ಯಾಕ್ಟರ್‌ನಲ್ಲಿ ಆಗಮಿಸಿದ್ದ ನರೇಗಾ ಕೂಲಿ ಕಾರ್ಮಿಕರು ಇಲ್ಲಿನ ತಾಪಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
Vijaya Karnataka Web news/vijayapura/protest
ನರೇಗಾ ಕಾರ್ಮಿಕರ ಪ್ರತಿಭಟನೆ


15 ಟ್ರ್ಯಾಕ್ಟರ್‌ಗಳಲ್ಲಿ ಕೆಲಸದ ಸಾಮಗ್ರಿಗಳನ್ನು ಟ್ರ್ಯಾಕ್ಟರ್‌ನಲ್ಲೇ ಬಿಟ್ಟು, ತಾಪಂ ಕಚೇರಿ ಆವರಣಕ್ಕೆ ತೆರಳಿದ 300 ಕೂಲಿಕಾರರು, ಕೆಲ ಹೊತ್ತು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಾರ್ವಜನಿಕರ ಗಮನಸೆಳೆದರು. ಪಿಡಿಒ ಬಾಲಸಿಂಗ್‌ ರಾಠೋಡ ಅವರನ್ನು ವರ್ಗಾಯಿಸಬಾರದು ಎಂದು ಒತ್ತಾಯಿಸಿದರು.

ನಾಗಠಾಣ ಪಿಡಿಒ ಒಳ್ಳೆಯ ಅಧಿಕಾರಿ. ಅವರು ನಾಗಠಾಣ ಗ್ರಾಪಂಗೆ ಬಂದ ಮೇಲೆ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದೆ. ಇದರಿಂದಾಗಿ ನಮ್ಮಂತಹ ಬಡವರಿಗೆ ಒಳ್ಳೆಯದಾಗಿದೆ. ಇವರು ಬರುವುದಕ್ಕೂ ಮೊದಲು ನಮಗೆ ಸರಿಯಾಗಿ ಕೆಲಸ ಸಿಗುತ್ತಿರಲಿಲ್ಲ. ರಾಠೋಡ ಬಂದ ಮೇಲೆ ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಹಾಗಾಗಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದರು.

ನಾಗಠಾಣ ಗ್ರಾಪಂ ಪಿಡಿಒ ಬಾಲಸಿಂಗ್‌ ರಾಠೋಡ ಅವರನ್ನು ವರ್ಗಾವಣೆ ಮಾಡುತ್ತಿಲ್ಲ. ಅವರಿಗೆ ಅಪಘಾತದಿಂದಾಗಿ ಕಾಲಿಗೆ ನೋವಾಗಿದ್ದರಿಂದ ಅವರೇ ಸ್ವಯಂ ನಿವೃತ್ತಿಗೆ ಮನವಿ ಮಾಡಿದ್ದರು. ಈ ಬಗ್ಗೆ ತಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನುವರೆಗೆ ಬಾಲಸಿಂಗ್‌ ರಾಠೋಡ ನಾಗಠಾಣ ಪಿಡಿಒ ಆಗಿದ್ದಾರೆ. ಎಂದು ತಾಪಂ ಅಧಿಕಾರಿಗಳು ಭರವಸೆ ನೀಡಿದರು. ಆಗ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ